ಹುಬ್ಬಳ್ಳಿಗೆ ವಿಮಾನ ನಿಲ್ದಾಣ ಯೋಜನೆಗೆ ನಾಂದಿ
ಹುಬ್ಬಳ್ಳಿ, ಆ. 25– ಹುಬ್ಬಳ್ಳಿ ವಿಮಾನ ನಿಲ್ದಾಣ ಸ್ಥಾಪನೆಗೆ ನಾಂದಿಯಾಗಿ ಇಂದು, ಗೋಕುಲದ ಸಮೀಪದಲ್ಲಿ ನಿಲ್ದಾಣ
ಕೇಂದ್ರಕ್ಕೆ ಆಯ್ಕೆಯಾಗಿರುವ ನಿವೇಶನದ 235 ಎಕರೆ ಪ್ರದೇಶವನ್ನು ಹುಬ್ಬಳ್ಳಿ– ಧಾರವಾಡ ಕಾರ್ಪೊರೇಷನ್, ಕೇಂದ್ರ ವಿಮಾನೋಡ್ಡಾಣ ಶಾಖೆಗೆ ಔಪಚಾರಿಕವಾಗಿ ಒಪ್ಪಿಸಿ ಯೋಜನೆಯನ್ನು ಪ್ರಾರಂಭಿಸಲು ಹಸಿರುದೀಪ ತೋರಿಸಿತು.
ಬಾಂಗ್ಲಾ ಬಗ್ಗೆ ಚೀನಿ ಮನ ತಿಳಿಯಲು ಪ್ರಯತ್ನ: ಚೌಗೆ ಇಂದಿರಾ ಪತ್ರ
ನವದೆಹಲಿ, ಆ. 25– ಬಾಂಗ್ಲಾ ದೇಶದಲ್ಲಿ ತಲೆ ಹಾಕಿರುವ ಪ್ರಕ್ಷುಬ್ಧ ಪರಿಸ್ಥಿತಿ ಕುರಿತು ಚೀನಿ ಪ್ರಧಾನಮಂತ್ರಿ ಚೌಎನ್ಲಾಯ್ ಅವರಿಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ವೈಯಕ್ತಿಕವಾಗಿ ಪತ್ರ ಒಂದನ್ನು ಬರೆದಿದ್ದಾರೆ. ಆದರೆ ಈವರೆಗೆ ಯಾವುದೇ ಉತ್ತರವೂ ಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.