ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 20–8–1971

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಗೆತ–ಅನುದಿನದ ಅನಾಹುತ

ಬೆಂಗಳೂರು, ಆ 19– ಬೆಂಗಳೂರು ನಗರದ ವಾಹನ ಗಳಿಗೆ, ಅದರಲ್ಲಿ ಓಡಾಡುವ ಜನರಿಗೆ ಇದೊಂದು ನಿತ್ಯ ಗ್ರಹಚಾರ.

ಉತ್ತಮ ರಸ್ತೆಗಳನ್ನು ನಿರ್ಮಿಸಿದ ನಂತರ ನಿರ್ದಾಕ್ಷಿಣ್ಯವಾಗಿ ಅಗೆಯುವುದು ನಿಂತಿಲ್ಲವೆಂಬುದು ಬೇರೆ ಮಾತು. ಅಗೆದ ಮೇಲೆ, ಅದನ್ನು ತುಂಬಿ ಮತ್ತೆ ಸಂಚಾರಾರ್ಹವಾಗಿ ಮಾಡುವ ಕೆಲಸದಲ್ಲಿ ಕಂಡು ಬಂದಿರುವ ನಿರ್ಲಕ್ಷ್ಯ
ಪರಮಾವಧಿಯನ್ನು ತಲುಪಿದೆ. ನಗರದ ನಾನಾ ಕಡೆಗಳಲ್ಲಿ ಅಗೆಯುವುದು, ಅಗೆತಗಳನ್ನು ಹಾಗೇ ಬಿಟ್ಟು ಬಿಡುವುದು ಅಥವಾ ಭದ್ರವಾಗಿ ಭರ್ತಿ ಮಾಡದಿರುವುದು ಸರ್ವ ಸಾಮಾನ್ಯವಾದ ದೃಶ್ಯ ನಾಗರಿಕರು ಹಾಗೂ ಪತ್ರಿಕೆಗಳು ನಗರದಲ್ಲಿ ರೋದನ ಮಾಡುತ್ತ ಬಂದಿದ್ದರೂ, ಅದು ಅರಣ್ಯ ರೋದನವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.