ADVERTISEMENT

50 ವರ್ಷಗಳ ಹಿಂದೆ: ಸೋಮವಾರ 23–8–1971

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 19:30 IST
Last Updated 22 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಚ್ಚಿದ ಕೈಗಾರಿಕಾ ಘಟಕಗಳ ಸ್ವಾಧೀನಕ್ಕೆ ಸರ್ಕಾರಕ್ಕೆ ಅಧಿಕಾರ

ಚನ್ನಪಟ್ಟಣ, ಆ. 22– ಮುಚ್ಚಲಾದ ಕೈಗಾರಿಕಾ ಘಟಕಗಳನ್ನು ಮಾರುಕಟ್ಟೆ ದರದಲ್ಲಿ ಪರಿಹಾರ ನೀಡದೆ ಸ್ವಾಧೀನ
ಪಡಿಸಿಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲು, ಬರುವ ಲೋಕಸಭೆ ಅಧಿವೇಶನದಲ್ಲಿ ಸಂವಿಧಾನವನ್ನು ಮತ್ತೆ ತಿದ್ದುಪಡಿ ಮಾಡಲಾಗುವುದು.

ಕೇಂದ್ರ ಉಕ್ಕು ಖಾತೆ ಸಚಿವ ಮೋಹನಕುಮಾರ ಮಂಗಳಂರವರು ಇಲ್ಲಿ ಇಂದು ವಕೀಲರ ಸಂಘದಲ್ಲಿ ಭಾಷಣ ಮಾಡುತ್ತ ಈ ವಿಚಾರ ತಿಳಿಸಿದರು.

ADVERTISEMENT

ಸಂವಿಧಾನದ 31(ಎ) ವಿಧಿಯನ್ನು ಬದಲಾಯಿಸುವ ಈ ತಿದ್ದುಪಡಿಯು ಇತ್ತೀಚೆಗೆ ಅಂಗೀಕರಿಸಲಾದ ಸಂವಿಧಾನ ತಿದ್ದುಪಡಿ ಮಸೂದೆಗಿಂತ ಹೆಚ್ಚು ವ್ಯಾಪಕ ಪರಿಣಾಮಗಳನ್ನುಂಟು ಮಾಡುವುದೆಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.