ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 03-08-1971

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 17:51 IST
Last Updated 2 ಆಗಸ್ಟ್ 2021, 17:51 IST
   

ಸಾಂದ್ರ ಪರಿಹಾರ ಕ್ರಮ: ಕಂದಾಯ ತಕಾವಿ ಸಾಲ ವಸೂಲಿ ತಡೆಗೆ ಆದೇಶ

ಬೆಂಗಳೂರು, ಆ. 2– ಮಳೆಯಿಲ್ಲದ ಅಭಾವ ಕಾಲಿಟ್ಟಿರುವ ರಾಜ್ಯದ 42 ತಾಲ್ಲೂಕುಗಳಲ್ಲಿ ತಕ್ಷಣ ಸಾಂದ್ರ ಪರಿಹಾರ ಕಾಮಗಾರಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಈ ತಾಲ್ಲೂಕುಗಳು ಮತ್ತು ಇತರ ಕೆಲವು ಭಾಗಶಃ ಸಂಕಷ್ಟಪೀಡಿತ ತಾಲ್ಲೂಕುಗಳಲ್ಲಿ ಭೂಕಂದಾಯ ಹಾಗೂ ತಕಾವಿ ಸಾಲದ ವಸೂಲಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ರಾಜ್ಯಪಾಲ ಧರ್ಮವೀರ ಅವರು ಆದೇಶ ನೀಡಿದ್ದಾರೆ.

ADVERTISEMENT

ನಲವತ್ತೆರಡು ತಾಲ್ಲೂಕುಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಲು 4.80 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಈಗಾಗಲೇ
ಮುಂದುವರಿಯುತ್ತಿರುವ ಭೂ ಸಾರ ರಕ್ಷಣೆ, ಬಾವಿ ತೋಡುವಿಕೆಯಂಥ ಕಾಮಗಾರಿಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.