ವ್ಯಾಪಕ ಅಧಿಕಾರದ ದುರುಪಯೋಗ ಇಲ್ಲ: ಲೋಕಸಭೆಗೆ ಭರವಸೆ
ನವದೆಹಲಿ, ಆ. 3– ಮೂಲಭೂತ ಹಕ್ಕುಗಳೂ ಸೇರಿ ಸಂವಿಧಾನದ ಯಾವುದೇ ಭಾಗವನ್ನಾದರೂ ತಿದ್ದುಪಡಿ ಮಾಡಲು ಸಂಸತ್ತಿಗೆ ಹಕ್ಕು ದೊರಕಿಸಿಕೊಡುವ ಸಂವಿಧಾನ (24ನೇ ತಿದ್ದುಪಡಿ) ಮಸೂದೆಯು ಇಂದು ಲೋಕಸಭೆಯಲ್ಲಿ ಅತ್ಯಧಿಕ ಪ್ರಮಾಣದ ಬೆಂಬಲ ಪಡೆಯಿತು.
ಈ ಮಸೂದೆಯ ಪ್ರಕಾರ ನೀಡಲಾಗುವ ವ್ಯಾಪಕ ಅಧಿಕಾರಗಳನ್ನು ಸರ್ಕಾರ ಎಂದಿಗೂ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಕಾನೂನು ಸಚಿವ ಶ್ರೀ ಎಚ್.ಆರ್. ಗೋಖಲೆ ಅವರು ಸ್ಪಷ್ಟವಾದ ಆಶ್ವಾಸನೆ ಇತ್ತರು.
ಪ್ರತಿಗಾಮಿಗಳು ಪ್ರಗತಿಗೆ ಉಂಟು ಮಾಡಿದ ‘ಅಡಚಣೆ’ಗಳನ್ನು ನಿರ್ಮೂಲ ಮಾಡಲು ಈ ಮಸೂದೆಯಿಂದ ಸಾಧ್ಯವಿದೆ ಎಂದು ಅದನ್ನು ಮಂಡಿಸಿದ ಸಚಿವ ಗೋಖಲೆ ಅವರು ಮತ್ತು ಅಧಿಕಾರಾರೂಢ ಪಕ್ಷದ ಉತ್ಸಾಹೀ ಸದಸ್ಯರು, ವಿರೋಧ
ಪಕ್ಷಗಳಲ್ಲಿನ ವಾಮವಾದಿಗಳ ವಕ್ತಾರರು ಹಾಗೂ ಖಾತೆರಹಿತ ಸಚಿವ ಶ್ರೀ ಸಿದ್ಧಾರ್ಥ ಶಂಕರ್ ರಾಯ್ ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.