ADVERTISEMENT

50 ವರ್ಷಗಳ ಹಿಂದೆ: ಸೋಮವಾರ 30–8–1971

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:30 IST
Last Updated 29 ಆಗಸ್ಟ್ 2021, 19:30 IST
   

ಪಾಕ್ ದುಡುಕುತನಕ್ಕೆ ಭಾರತ– ರಷ್ಯಾ ಒಪ್ಪಂದ ತಡೆ ಎಂದ ಇಂದಿರಾ
ನವದೆಹಲಿ, ಆಗಸ್ಟ್‌ 29–
ಭಾರತ– ರಷ್ಯಾ ಮೈತ್ರಿ ಒಪ್ಪಂದವು ಪಾಕಿಸ್ತಾನದ ಮಿಲಿಟರಿ ನಾಯಕರು ‘ದುಡುಕಿನ ದುಸ್ಸಾಹಸಕ್ಕೆ’ ಎರಗುವುದನ್ನು ತಡೆಗಟ್ಟುವುದೆಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಹೇಳಿದ್ದಾರೆ.

ವಿಶ್ವಶಾಂತಿ ಮಂಡಲಿ ಪ್ರಧಾನ ಕಾರ್ಯದರ್ಶಿ ರೂಮೇಶ್‌ ಚಂದ್ರಾ ಅವರೊಡನೆ ಸಂದರ್ಶನವೊಂದರಲ್ಲಿ ಗಾಂಧಿಯವರು, ‘ಮನೋವಿಕಾರದಿಂದ ನಮ್ಮ ಕಡೆಗೆ ವೈಷಮ್ಯ ತೋರಿಸಿರುವ ರಾಷ್ಟ್ರಗಳು’ ಯಾವುದೋ ಸಂದರ್ಭ ಉಪಯೋಗಿಸಿಕೊಂಡು ದುಸ್ಸಾಹಸಕ್ಕೆ ತೊಡಗುವುದನ್ನು ಈ ಒಪ್ಪಂದ ತಡೆಯುವುದರಿಂದ ಹಾಗೂ ರಷ್ಯಾವು ನಮ್ಮ ಮಿತ್ರ ರಾಷ್ಟ್ರವೆಂದು ಜನರು ಪರಿಗಣಿಸಿರುವುದರಿಂದ ರಾಷ್ಟ್ರದಲ್ಲಿ ಆ ಒಪ್ಪಂದಕ್ಕೆ ಭಾರಿ ಸ್ವಾಗತ ಲಭಿಸಿದೆಯೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT