ರಾಷ್ಟ್ರೀಕರಣದ ಉದ್ದೇಶ ಸಫಲಗೊಳಿಸಲು ಬ್ಯಾಂಕ್ ನೌಕರರು, ಆಡಳಿತಗಳಿಗೆ ಕರೆ
ಬೆಂಗಳೂರು, ಸೆ. 5– ಬ್ಯಾಂಕ್ ರಾಷ್ಟ್ರೀಕರಣ ಕ್ರಮ ‘ಸಮಾಜದ ಕ್ರಾಂತಿಕಾರಿ ಬದಲಾವಣೆಯ ಸಾಧನವಾಗಿ’ ಅದರ ಉದ್ದೇಶಗಳು ಕೈಗೊಡುವಂತಾಗಲು ನೌಕರರು, ಆಡಳಿತ ಮತ್ತು ಸಂಬಂಧಪಟ್ಟವರು ಇನ್ನು ಮುಂದೆ ಶ್ರಮಿಸಬೇಕೆಂದು ಕೇಂದ್ರದ ಅರ್ಥ ಖಾತೆಯ ರಾಜ್ಯ ಸಚಿವ ಶ್ರೀ ಕೆ.ಆರ್. ಗಣೇಶ್ ಅವರು ಇಂದು ಇಲ್ಲಿ ಕರೆ ನೀಡಿದರು.
ಬ್ಯಾಂಕ್ಗಳ ರಾಷ್ಟ್ರೀಕರಣವಾದ ನಂತರ ಅದರ ಗುರಿಗಳೆಲ್ಲ ಸಫಲವಾಗದಿದ್ದರೂ ‘ಕಳೆದ ಎರಡು ವರ್ಷಗಳಲ್ಲಿ ಈ ಬ್ಯಾಂಕುಗಳು ಸಾಧಿಸಿರುವ ಪ್ರಗತಿಯ ಬಗ್ಗೆ ಯಾರೂ ತಲೆ ತಗ್ಗಿಸಬೇಕಾಗಿಲ್ಲ’ ಎಂದು ಒತ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.