ಕ್ರಿಕೆಟ್ ವೀರರಿಗೆ ದೆಹಲಿಯ ಪ್ರೀತಿಯ ಅದ್ದೂರಿ ಸ್ವಾಗತ
ನವದೆಹಲಿ, ಸೆ. 12– ಇಂಗ್ಲೆಂಡಿನ ಮೇಲೆ ಐತಿಹಾಸಿಕ ವಿಜಯ ಗಳಿಸಿ ಹಠಾತ್ತನೆ ಭಾರತ ವನ್ನು ವಿಶ್ವದ ಪ್ರಬಲ ಕ್ರಿಕೆಟ್ ರಾಷ್ಟ್ರಗಳ
ಲ್ಲೊಂದನ್ನಾಗಿ ಮಾಡಿದ ವಿಜಯೀ ಭಾರತದ ಕ್ರಿಕೆಟ್ ಟೀಂ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದಾಗ ಅತ್ಯಂತ ಪ್ರೀತಿ ಪುರಸ್ಕಾರ ಸ್ವಾಗತವನ್ನು ನೀಡಲಾಯಿತು.
12 ವಾರಗಳ ಇಂಗ್ಲೆಂಡ್ ಪ್ರವಾಸದ ನಂತರ ಮ್ಯಾನೇಜರ್ ಹೇಮು ಅಧಿಕಾರಿ ಮತ್ತು ಖಜಾಂಚಿ ರಾಮ ಪ್ರಕಾಶ ಮೆಹ್ತ ಅವರ ಜೊತೆ 13 ಜನ ಸದಸ್ಯರ ಕ್ರಿಕೆಟ್ ತಂಡ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮೂರು ಸಹಸ್ರಕ್ಕೂ ಹೆಚ್ಚು ಜನ ಭಾರಿ ಹರ್ಷ ಧ್ವನಿ ಮಾಡಿ ಆತ್ಮೀಯ ಸ್ವಾಗತ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.