ರೈತರಿಂದ ಬಾಕಿ ಇದ್ದರೂ ಮತ್ತೆ ತಕಾವಿ ಸಾಲ ನೀಡಿಕೆ ಪರಿಶೀಲಿಸಲು ಸೂಚನೆ
ಬೆಂಗಳೂರು, ಆ. 27– ಅಭಾವ ಪ್ರದೇಶ ಗಳಲ್ಲಿ ರೈತರಿಂದ ತಕಾವಿ ಸಾಲದ ಬಾಕಿ ಇದ್ದರೂ ಬಿತ್ತನೆ ಬೀಜ ಮುಂತಾದವನ್ನು ಕೊಳ್ಳಲು ತಕಾವಿ ಸಾಲಕ್ಕಾಗಿ ಅರ್ಜಿ ಹಾಕಿದರೆ ಬಾಕಿ ತೀರಿಸುವಂತೆ ಒತ್ತಾಯಪಡಿಸದೆ ಅಂತಹ ಅರ್ಜಿಗಳನ್ನು ಪರಿಶೀಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದರಿಂದ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ಕೊಳ್ಳಲು ರೈತರಿಗೆ ಅನುಕೂಲವಾಗುವುದೆಂಬ ಆಶಯವನ್ನು ರಾಜ್ಯಪಾಲ ಶ್ರೀ ಧರ್ಮವೀರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.