ADVERTISEMENT

ಆದೇಶ ಉಲ್ಲಂಘನೆಗೆ ದಾರಿಯಾದವರು!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ವಿಧಾನಸೌಧದಲ್ಲಿ ನಡೆದ ಸಮಾರಂಭವೊಂದರಲ್ಲಿ ಹಾರ, ಪೇಟ, ಶಾಲು ಸ್ವೀಕರಿಸಿ ಸನ್ಮಾನಿತರಾಗುವುದರೊಂದಿಗೆ ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದಂತಾಗಿದೆ.

ಮುಖ್ಯಮಂತ್ರಿಯಾದ ಹೊಸತರಲ್ಲಿ ಝೀರೊ ಟ್ರಾಫಿಕ್ ಬಗ್ಗೆ, ಹಾರ– ತುರಾಯಿ ಬಗ್ಗೆ, ಗೌರವ ವಂದನೆ ಬಗ್ಗೆ ಅವರು ತೆಗೆದುಕೊಂಡ ತೀರ್ಮಾನಗಳು ಜನರಲ್ಲಿ ಆಶಾಭಾವ ಮೂಡಿಸುವಂತಿದ್ದವು. ಆದರೆ ಈಗ ಆ
ಭಾವನೆಗೆ ಅವರೇ ಧಕ್ಕೆ ತಂದಿದ್ದಾರೆ! ಅವರ ಸಂಪುಟದ ಸಚಿವರಿಗೂ ಆದೇಶ ಉಲ್ಲಂಘನೆಗೆ ದಾರಿ ಮಾಡಿ
ಕೊಟ್ಟಂತಾಗಿದೆ.

- ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.