ADVERTISEMENT

ವಾಚಕರ ವಾಣಿ: ಏನನ್ನಾದರೂ ಸೃಷ್ಟಿಸಬಹುದು, ಆದರೆ...

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:15 IST
Last Updated 23 ಆಗಸ್ಟ್ 2021, 21:15 IST

‘ಕೃಷಿ ಭೂಮಿ ಮತ್ತು ನಿವೇಶನ ಹವಣಿಕೆ’ ಕುರಿತ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ,
ಆ. 23) ನಮ್ಮನ್ನು ಚಿಂತನೆಗೆ ಹಚ್ಚುವಂತಿದೆ. ನಾವು ಬಟ್ಟೆಗಳನ್ನು ಉತ್ಪಾದಿಸಬಹುದು, ಕೃತಕ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಮತ್ತು ನಮ್ಮ ಬುದ್ಧಿಗೆ ಕಸರತ್ತು ಒಡ್ಡುವ ಏನನ್ನಾದರೂ ಸೃಷ್ಟಿಸಬಹುದು. ಆದರೆ ಕೃಷಿ ಭೂಮಿಯನ್ನು ಮಾತ್ರ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡರೆ ಸಾಕು.

ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT