ಕಾಳಿಂಗ ಸರ್ಪ ದಟ್ಟ ಕಾಡುಗಳಲ್ಲಿ ಇರುವ ಸರೀಸೃಪ. ಇದರ ಮೊಟ್ಟೆ ಸಂರಕ್ಷಣೆ ಮಾಡಿದ್ದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ (ಪ್ರ.ವಾ., ಆ. 25). ಪಶ್ಚಿಮಘಟ್ಟಗಳಲ್ಲಿ ಮಾತ್ರ ವಾಸಿಸುವ ಇವುಗಳ ಸಂತತಿ ಉಳಿಯಬೇಕಿದೆ. ಅನಾಥವಾಗಿದ್ದ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಯಾದ ನಂತರ ಕಾಡಿಗೆ ಬಿಡಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಮತ್ತು ಉಸ್ತುವಾರಿಯಲ್ಲಿ ಈ ಕಾರ್ಯ ನಡೆದಿದೆ.
ಈ ರೀತಿಯ ಒಳ್ಳೆಯ ಕೆಲಸವನ್ನು ಕೆಲವರು ಮಾಡುತ್ತಿರುವುದರಿಂದ ಹಲವು ಜೀವಿಗಳು ಸ್ವಲ್ಪವಾದರೂ ಸಂರಕ್ಷಿಸಲ್ಪಟ್ಟಿವೆ. ಪಶ್ಚಿಮಘಟ್ಟಗಳನ್ನು ಹಾಳುಮಾಡುತ್ತಿರುವ ಬೃಹತ್ ಯೋಜನೆಗಳಿಗೆ ಏನೂ ಹೇಳದೆ, ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಿದ್ದಕ್ಕೆ ಆಪಾದನೆ ಮಾಡುವುದು ಸರಿಯಲ್ಲ.
ಡಾ. ಎಸ್. ಶಿಶುಪಾಲ,ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.