ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮವೊಂದರಲ್ಲಿ
ಮಾತನಾಡುತ್ತಾ, ಅನ್ಯಭಾಷೆಯವರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಾಗಿದೆ ಎಂದಿದ್ದಾರೆ. ಇದು ತುರ್ತಾಗಿ ಆಗಬೇಕಾಗಿದೆ. ಇದೇ ರೀತಿ, ಕನ್ನಡ ಚಳವಳಿಯಲ್ಲಿ ತೊಡಗಿಕೊಂಡ ಮುಖ್ಯಸ್ಥರು, ಯುವ ಕನ್ನಡಪರ ಹೋರಾಟಗಾರರಿಗೆ ಕನ್ನಡ ಚಳವಳಿಯ ಹಿನ್ನೆಲೆ, ಇಂದು ಅದರ ಸ್ವರೂಪ ಹೇಗಿರಬೇಕು? ಕರ್ನಾಟಕದ ವಿವಿಧ ಪ್ರದೇಶಗಳ ವೈವಿಧ್ಯ, ಉದ್ಭವಿಸಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸವಾಲುಗಳು, ಏಕೀಕರಣ ಉದ್ದೇಶದ ವ್ಯಾಪ್ತಿ ಮತ್ತು ಅನುಷ್ಠಾನ, ಸಾಹಿತ್ಯ, ಚಲನಚಿತ್ರ, ರಂಗಭೂಮಿ ಕುರಿತ ಸಮಗ್ರ ತಿಳಿವಳಿಕೆಯ ಕಾರ್ಯಾಗಾರ
ಏರ್ಪಡಿಸಬೇಕಾದ ಜರೂರು ಇದೆ.
- ಆರ್.ವೆಂಕಟರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.