ADVERTISEMENT

ಗೌರವಯುತ ವಿದಾಯಕ್ಕೆ ಅನುವಾಗಿಸಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 19:31 IST
Last Updated 12 ಸೆಪ್ಟೆಂಬರ್ 2021, 19:31 IST

ಅಂತ್ಯಕ್ರಿಯೆಗೆ ಪರಿಶಿಷ್ಟರು ಪರದಾಡುವ ಸ್ಥಿತಿಗೆ (ಪ್ರ.ವಾ., ಸೆ. 10) ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತವಾಗಿರುವ ಸ್ಮಶಾನಗಳು ಕಾರಣ. ಬದುಕಿನುದ್ದಕ್ಕೂ ಬೆನ್ನುಹತ್ತುವ ಜಾತಿ ಎಂಬ ಭೂತದಿಂದ ಶವಸಂಸ್ಕಾರಕ್ಕೆ ಅಡ್ಡಿಪಡಿಸುವ ಘಟನೆಗಳು ನಿಜಕ್ಕೂ ಅಮಾನವೀಯ. ತುಳಿತಕ್ಕೊಳಗಾದ ಬಹುತೇಕ ಸಮುದಾಯಗಳಿಗೆ ಈಗಲೂ ಉಳುಮೆಗೆ ಭೂಮಿ ಇಲ್ಲ, ಕನಿಷ್ಠ ಶವ ಹೂಳುವುದಕ್ಕಾದರೂ ಭೂಮಿ ನೀಡಿ, ಮೃತರಿಗೆ ಗೌರವಯುತ ವಿದಾಯ ಹೇಳಲು ಅನುವಾಗುವಂತೆ ಎಲ್ಲ ಜಾತಿ–ವರ್ಗಗಳೂ ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ವಾಗುವಂತೆ ಸಾಮಾನ್ಯ ಸ್ಮಶಾನಗಳನ್ನು ಸ್ಥಾಪಿಸಬೇಕು. ಇದು ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆಯ ದಿಸೆಯಲ್ಲೂ ಒಂದು ದೃಢ ಹೆಜ್ಜೆಯಾಗಿದೆ.

- ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT