ಮುಖ್ಯಮಂತ್ರಿ ಯಡಿಯೂರಪ್ಪನವರೇ, ಸುಳ್ಳು ಹೇಳುವುದನ್ನು, ಸುಳ್ಳು ಭರವಸೆಗಳನ್ನು ನೀಡುವುದನ್ನು ನೀವು ಹಾಗೂ ನಿಮ್ಮ ಸಚಿವರು ದಯಮಾಡಿ ನಿಲ್ಲಿಸಿ. ಕೇಂದ್ರ ಸರ್ಕಾರದ ಅಸಹಕಾರದ ಮಲತಾಯಿ ಧೋರಣೆಯ ವಿರುದ್ಧ ನಿಮ್ಮ ಸಂಸದರನ್ನು ಮಾತನಾಡಲು ಆಗ್ರಹಿಸಿ. ರಾಜ್ಯದ ಅರ್ಹ ಹಕ್ಕನ್ನು ತರಲು ವಿಫಲರಾಗಿರುವ ಅವರಿಗೆ ಸಂಸದರಾಗಿ ಮುಂದುವರಿಯಲು ಯಾವ ನೈತಿಕ ಅಧಿಕಾರವಿದೆ? ಹೈಕೋರ್ಟ್ ನ್ಯಾಯಪೀಠದ ಸೂಚನೆಯನ್ನೂ ಮುರಿದಂತೆ ಸುಳ್ಳು ಹೇಳುತ್ತಿರುವ ನೀವು ಜನರ ಎದುರು ಪೊಳ್ಳಾಗುತ್ತಿದ್ದೀರಿ. ಕೇಂದ್ರಕ್ಕೆ ಆಗ್ರಹಿಸಿ ಮಾತನಾಡಿ. ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ನೋವಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ.
–ಎಸ್.ಜಿ. ಸಿದ್ಧರಾಮಯ್ಯ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.