ADVERTISEMENT

ಸಚಿವರ ಪ್ರಶ್ನೆ ಸಾರ್ವಕಾಲಿಕ!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:19 IST
Last Updated 15 ಸೆಪ್ಟೆಂಬರ್ 2021, 20:19 IST

‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಕಡಿಮೆ ಎಲ್ಲಿ ಆಗುತ್ತೇರಿ?’ ಎಂದು ಅರಣ್ಯ ಸಚಿವರುಪ್ರಶ್ನಿಸಿರುವುದರಲ್ಲಿ (ಪ್ರ.ವಾ., ಸೆ. 16) ಸೋಜಿಗವೇನೂ ಇಲ್ಲ! ಬೆಟ್ಟಗುಡ್ಡಗಳನ್ನು ಬಗೆದು ಕಲ್ಲನ್ನೇ ನುಂಗುತ್ತಿರುವುದು ದೈತ್ಯ ವನ್ಯಜೀವಿಗಳಲ್ಲವೇ?‌ ನದಿಪಾತ್ರದಲ್ಲಿ ಮರಳು ಬಗೆಯುತ್ತಿರುವುದೇನು ಸಾಮಾನ್ಯ ಜೀವಿಯೇ? ರಸ್ತೆ, ಸರ್ಕಾರಿ ಕಟ್ಟಡ, ಕಾಂಪೌಂಡುಗಳ ನಿರ್ಮಾಣ ಕಾರ್ಯದಲ್ಲಿ ಕಬ್ಬಿಣ, ಸಿಮೆಂಟು, ಇಟ್ಟಿಗೆಗಳನ್ನೆಲ್ಲಾ ಕಬಳಿಸುತ್ತಿರುವುವು ಯಾವ ಕಾಡುಪ್ರಾಣಿಗಳಿಗೇನು ಕಮ್ಮಿಯೇ? ಈ ಲೆಕ್ಕಾಚಾರದಲ್ಲಿ ಮಾತ್ರ ಸಚಿವರ ಪ್ರಶ್ನೆ ಸಕಾಲಿಕ, ಸಾರ್ವಕಾಲಿಕ!

- ಜೆ.ಬಿ.ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT