ADVERTISEMENT

ವರ್ಸಟೈಲ್ ರಾಜಕಾರಣಿಯ ವೈಶಿಷ್ಟ್ಯ ಬದುಕು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2020, 14:09 IST
Last Updated 31 ಆಗಸ್ಟ್ 2020, 14:09 IST
ಸಮಾರಂಭವೊಂದಕ್ಕೆ ನಡೆದು ತೆರಳುತ್ತಿದ್ದ ಪ್ರಣವ್‌ ಮುಖರ್ಜಿ
ಸಮಾರಂಭವೊಂದಕ್ಕೆ ನಡೆದು ತೆರಳುತ್ತಿದ್ದ ಪ್ರಣವ್‌ ಮುಖರ್ಜಿ    

ಭಾರತದಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್‌ ಮುಖರ್ಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದ ಪ್ರಣವ್‌ ಅವರ ವಿಶಿಷ್ಠ ಜೀವನದ ಕುರಿತು ಇಲ್ಲಿ ವಿವರಿಸಲಾಗಿದೆ.

-ಪ್ರಣಬ್ ಮುಖರ್ಜಿ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಕಾನೂನು ವಿಷಯದಲ್ಲಿ ಉನ್ನತಪದವಿ ಪಡೆದಿದ್ದವರು. 1963ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 247 ಪರಗಣಗಳಲ್ಲಿನ ವಿದ್ಯಾನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದಾರೆ.

-ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಯಲ್ಲಿ ಸಂಪಾದಕರೂ ಆಗಿದ್ದರು.

ADVERTISEMENT

-1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯೊಂದಿಗೆ ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ.

-ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ರಕ್ಷಣೆ, ವಾಣಜ್ಯ, ವಿದೇಶಾಂಗ ಮತ್ತು ಹಣಕಾಸು – ಪ್ರಮುಖ ನಾಲ್ಕು ಸಚಿವಾಲಯಗಳನ್ನು ನಿರ್ವಹಿಸಿದ ಏಕೈಕ ಸಚಿವ.

-ಹಣಕಾಸು ಸಚಿವರಾಗಿ ಹೆಚ್ಚು ಹೆಸರು ಮಾಡಿದವರು. ಏಳು ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ಖ್ಯಾತಿಯೂ ಇವರಿಗಿದೆ. 1984 ರಲ್ಲಿ, ಯೂರೋಮನಿ ನಿಯತಕಾಲಿಕೆಯು ಮುಖರ್ಜಿ ಅವರನ್ನು ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಎಂದು ಆಯ್ಕೆ ಮಾಡಿತ್ತು.

-ಇಂದಿರಾಗಾಂಧಿ ಹತ್ಯೆ ನಂತರ, ಪ್ರಣಬ್‌ ಅವರಿಗೆ ಪ್ರಧಾನಿ ಹುದ್ದೆ ಕೈತಪ್ಪಿತ್ತು. ಆಗ ರಾಜೀವ್‌ಗಾಂಧಿ ಪ್ರಧಾನಿಯಾದರು. ಪ್ರಣ‌ಬ್ ಮುಖರ್ಜಿ ಕಾಂಗ್ರೆಸ್ ತ್ಯಜಿಸಿ, ರಾಷ್ಟ್ರೀಯ ಸಮಾಜವಾದಿ ಪಕ್ಷ ಸ್ಥಾಪಿಸಿದ್ದರು. 1989ರಲ್ಲಿ ರಾಜೀವ್‌ ಗಾಂಧಿ ಜತೆ, ತಮ್ಮ ಪಕ್ಷವನ್ನು ವಿಲೀನವಾಗಿಸಿದರು.

-ಭಾರತದ 13 ನೇ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಪ್ರಣಬ್‌ ಮುಖರ್ಜಿ ಅವರು ಉಗ್ರ ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ಸೇರಿದಂತೆ ಏಳು ಕೈದಿಗಳ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

-ಸೆಪ್ಟೆಂಬರ್ 5, 2015ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್‌ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾರತದ ರಾಜಕೀಯ, ಇತಿಹಾಸ ಕುರಿತು ಪಾಠ ಮೂಲಕ ಇತಿಹಾಸ ನಿರ್ಮಿಸಿದರು.

-ಪ್ರಣಬ್‌ ಮುಖರ್ಜಿಯವರಿಗೆ 40 ವರ್ಷಗಳಿಂದ ನಿತ್ಯ ಡೈರಿ ಬರೆಯುವ ಹವ್ಯಾಸ. ಆ ಡೈರಿಯಲ್ಲಿರುವ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ತರುವ ಕುರಿತು ಅನೇಕ ಬಾರಿ ಚರ್ಚೆ ನಡೆದಿತ್ತು. ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಪುಸ್ತಕ ಪ್ರಕಟಿಸುತ್ತಾರೆಂದು ಹೇಳಲಾಗುತ್ತಿತ್ತು.

-ನಿತ್ಯ ಹದಿನೆಂಟು ಗಂಟೆ ಕೆಲಸ ಮಾಡುತ್ತಿದ್ದರು ಪ್ರಣಬ್‌ ಮುಖರ್ಜಿ. ದುರ್ಗಾಪೂಜೆಯ ದಿನ, ತಪ್ಪದೇ ತಮ್ಮ ತವರು ಮಿರತಿಗೆ ಭೇಟಿ ನೀಡುತ್ತಿದ್ದರು. ಆ ದಿನ ಹೊರತುಪಡಿಸಿ, ಇನ್ನು ಎಂದೂ ಕೆಲಸಕ್ಕೆ ರಜೆ ಹಾಕುತ್ತಿರಲಿಲ್ಲ.

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.