ADVERTISEMENT

ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

ಚುನಾವಣೆ ಸಂದರ್ಭದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ರಾಜ್ಯ ಮಟ್ಟದ ಛಾಯಚಿತ್ರ ಸ್ಪರ್ಧೆ ಏರ್ಪಡಿಸಿತ್ತು.ಏಪ್ರಿಲ್‌ 18 ಮತ್ತು 23ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮತಗಟ್ಟೆ, ಮತದಾನ ಸಿದ್ಧತೆ ಮತ್ತು ಮತದಾನ ವಾತಾವರಣದ ವಿಷಯಗಳನ್ನು ಸ್ಪರ್ಧೆಗೆ ನೀಡಲಾಗಿತ್ತು. ಸ್ಪರ್ಧೆಯಲ್ಲಿ 44 ಛಾಯಾಗ್ರಾಹಕರು ಭಾಗವಹಿಸಿದ್ದರು. ಪ್ರಶಸ್ತಿ ಆಯ್ಕೆಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.

​ಪ್ರಜಾವಾಣಿ ವಾರ್ತೆ
Published 22 ಮೇ 2019, 16:47 IST
Last Updated 22 ಮೇ 2019, 16:47 IST
ಪ್ರಥಮ ಬಹುಮಾನ ಪಡೆದ ಛಾಯಚಿತ್ರ  –ಚಿತ್ರ: ಪಿ.ರಂಜು
ಪ್ರಥಮ ಬಹುಮಾನ ಪಡೆದ ಛಾಯಚಿತ್ರ –ಚಿತ್ರ: ಪಿ.ರಂಜು   
ದ್ವಿತೀಯ ಬಹುಮಾನ ಪಡೆದ ಛಾಯಚಿತ್ರ –ಚಿತ್ರ: ಪ್ರಕಾಶ್‌ ಕಂದಕೂರ್
ತೃತೀಯ ಬಹುಮಾನ ಚಿತ್ರ: ಶಂಕರ ಗುರಿಕಾರ
ಸಮಾಧಾನಕರ ಬಹುಮಾನ ಚಿತ್ರ: ಕಂದಾವರ ವೆಂಕಟೇಶ್‌
ವಿಶೇಷ ಬಹುಮಾನ ಚಿತ್ರ: ನಾಗರಾಜ್‌ ಗಡೇಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.