ADVERTISEMENT

ಮತ ನೆನಪಿನ ಪಥ...

2019ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ನಾಮಪತ್ರ ಸಲ್ಲಿಕೆ, ಪ್ರಚಾರದ ಭರಟೆಯೂ ಚುರುಕುಗೊಂಡಿದೆ. ಆಯಾ ಪಕ್ಷಗಳಲ್ಲಿನ ಸ್ಟಾರ್‌ ಪ್ರಚಾರಕರು ಊರೂರು ಅಲೆದು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈಗಿನ ಚುನಾವಣೆ ನೋಡುತ್ತಿರುವ ನಮಗೆ ದಶಕಗಳ ಹಿಂದೆ ಚುನಾವಣೆಯ ಸಂದರ್ಭ ಹೇಗಿತ್ತು, ಯಾರೆಲ್ಲ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ಕಪ್ಪುಬಿಳುಪಿನ ಹಿನ್ನೋಟಕ್ಕೆ ಪ್ರಜಾವಾಣಿ ಕರೆದೊಯ್ಯುತ್ತಿದೆ...ಅದೇ ಮತ ನೆನಪಿನ ಪಥ

​ಪ್ರಜಾವಾಣಿ ವಾರ್ತೆ
Published 10 ಮೇ 2019, 6:26 IST
Last Updated 10 ಮೇ 2019, 6:26 IST
ಮತ ಪ್ರಚಾರ: 1977ರ ಮಾರ್ಚ್‌ 6ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಬಾಬು ಜಗಜೀವನ್‌ರಾಂ ಮಾತನಾಡಿದ ಕ್ಷಣ. ಈ ವೇಳೆ ವೀರೇಂದ್ರ ಪಾಟೀಲ್, ಕಡಿದಾಳ್ ಮಂಜಪ್ಪ ಇದ್ದರು.
ಮತ ಪ್ರಚಾರ: 1977ರ ಮಾರ್ಚ್‌ 6ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಬಾಬು ಜಗಜೀವನ್‌ರಾಂ ಮಾತನಾಡಿದ ಕ್ಷಣ. ಈ ವೇಳೆ ವೀರೇಂದ್ರ ಪಾಟೀಲ್, ಕಡಿದಾಳ್ ಮಂಜಪ್ಪ ಇದ್ದರು.   
ಎಐಸಿಸಿ ಅಧಿವೇಶನ: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 1969ರಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಮುಖಂಡರಾದ ಎಸ್‌.ಕೆ.ಪಾಟೀಲ್, ಕಾಮರಾಜ್, ವೈ.ಬಿ. ಚವ್ಹಾಣ್, ಚಂದ್ರಶೇಖರ್, ಎಸ್‌.ನಿಜಲಿಂಗಪ್ಪ
ಮತ ಪ್ರಚಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 1978ರ ಜನವರಿ 21ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಜನತಾ ಪಕ್ಷದ ಮುಖಂಡ ಜಾರ್ಜ್‌ ಫರ್ನಾಂಡಿಸ್ ಮಾತನಾಡಿದ ಕ್ಷಣ. ಹಿರಿಯರಾದ ಜಗಜೀವನ್‌ ರಾಮ್‌, ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಚ್‌.ಡಿ. ದೇವೇಗೌಡ ಇದ್ದರು.
ಮತ ಪ್ರಚಾರ – 1984ರ ಏಪ್ರಿಲ್‌ 1ರಂದು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಕೋಲಾರಕ್ಕೆ ಭೇಟಿ ನೀಡಿದ್ದ ರಾಜೀವ್‌ ಗಾಂಧಿ ಅವರ ಜತೆ ಆರ್‌. ಗುಂಡೂರಾವ್ ಸಮಾಲೋಚಿಸುತ್ತಿರುವುದು
ಮತ ಪ್ರಚಾರ– 1962 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನಸಂಘದ ನಾಯಕ ಗುಂಡಯ್ಯ ಶೆಟ್ಟಿ, ದೀನ್‌ದಯಾಳ್ ಉಪಾಧ್ಯಾಯ ಅವರನ್ನು ಹಾರ ಹಾಕಿ ಸ್ವಾಗತಿಸಿದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.