ಭುವನೇಶ್ವರ್: ಒಲಿಂಪಿಯನ್ ಅಥ್ಲೀಟ್ ದ್ಯುತಿ ಚಾಂದ್ ಅವರ ಕುರಿತು ಅವಹೇಳನಕಾರಿಯಾಗಿ ಚಿತ್ರ ಮತ್ತು ವರದಿ ಬಿತ್ತರಿಸಿದ್ದರೆನ್ನಲಾದ ಆನ್ಲೈನ್ ಸುದ್ದಿವಾಹಿನಿಯ ಸಂಪಾದಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ವೆಬ್ ವಾಹಿನಿಯ ಸಂಪಾದಕ ಸುಧಾಂಶು ಶೇಖರ್ ರಾವುತ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಅವರ ಕಂಪ್ಯೂಟರ್ ಮತ್ತಿತರ ಸಾಮಗ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದ್ಯುತಿ ಚಾಂದ್ ದೂರಿನನ್ವಯ ತನಿಖೆ ನಡೆಸುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.