ಹೊಸಪೇಟೆ: ಮಾಜಿ ಸಚಿವ ಎಚ್. ಆಂಜನೇಯ ಅವರು ಶುಕ್ರವಾರ ತಾಲ್ಲೂಕಿನ ಹಂಪಿ ರಸ್ತೆಯ ಅನಂತಶಯನಗುಡಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಹರ್ಷಿ ಮಾತಂಗ ಮುನಿ ಅವರ ಸಮುದಾಯ ಭವನದ ಕಾಮಗಾರಿ ಪರಿಶೀಲನೆ ನಡೆಸಿದರು.
ಎಂಜಿನಿಯರ್ಗಳಾದ ಹುಲುಗಪ್ಪ ಕಟ್ಟಿಮನಿ, ಸೋಮಶೇಖರ್ ಅವರಿಂದ ಕಾಮಗಾರಿ ಕುರಿತು ಮಾಹಿತಿ ಪಡೆದ ಆಂಜನೇಯ ಅವರು, ‘ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಕೆಲಸ ನಡೆಯಬೇಕು’ ಎಂದು ತಿಳಿಸಿದರು.
‘ಸಮಾಜದ ಜನರ ಅಪೇಕ್ಷೆಯಂತೆ ಮಹರ್ಷಿ ಮಾತಂಗ ಮುನಿಗಳ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸಮಾಜದ ಸಂಘಟನೆ ಕುರಿತ ಚರ್ಚೆ, ಸಭೆ, ಸಮಾರಂಭಗಳನ್ನು ನಡೆಸಲು ಈ ಭವನ ಉಪಯೋಗವಾಲಿದೆ’ ಎಂದು ಹೇಳಿದರು.
ಪೂರ್ಣಾನಂದ ಭಾರತಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಾನಯ್ಯ, ಮುಖಂಡರಾದ ಮುಂಡರಗಿ ನಾಗರಾಜ್, ಗೂಳೆಪ್ಪ, ಬಲ್ಲಾ ಹುಣ್ಸಿ ರಾಮಣ್ಣ, ಎ. ಬಸವರಾಜ, ನಿಂಬಗಲ್ ರಾಮಕೃಷ್ಣ, ಹುಲುಗಪ್ಪ, ಕಲ್ಲಳ್ಳಿ ಧರ್ಮಪ್ಪ, ಮೆಟ್ರಿ ಮಾರೆಣ್ಣ, ಮರಿದಾಸ್, ಓಬಳಾಪತಿ, ಉದಯಕುಮಾರ್, ಚನ್ನಬಸವ, ಎಚ್.ಬಿ. ಶ್ರೀನಿವಾಸ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.