ADVERTISEMENT

ಕುವೈತ್‌ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 12:34 IST
Last Updated 11 ಅಕ್ಟೋಬರ್ 2019, 12:34 IST
ಕದ್ರಿ ಗೋಪಾಲನಾಥ್
ಕದ್ರಿ ಗೋಪಾಲನಾಥ್   

ಬೆಂಗಳೂರು: ಕದ್ರಿ ಗೋಪಾಲನಾಥ್ ಅವರ ಪುತ್ರ ಗುರುಪ್ರಸಾದ್ ಕದ್ರಿ ಅವರು ಕುವೈತ್‌ನಲ್ಲಿದ್ದು, ಅವರ ಪಾಸ್‌ಪೋರ್ಟ್ ಸ್ಟಾಂಪಿಂಗ್‌ಗೆ ಕಳಿಸಲಾಗಿದೆ.ಗೋಪಾಲನಾಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಆದಷ್ಟು ಬೇಗನೆ ಅವರನ್ನು ಮಂಗಳೂರಿಗೆ ಕಳಿಸಿಕೊಡಲು ಸಹಾಯ ಮಾಡಿ ಎಂದು ಲಾವಣ್ಯ ಬಲ್ಲಾಳ್ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮೂಲಕಮನವಿ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಮಣಿಕಾಂತ್ ಕದ್ರಿ ಅವರು ತಮ್ಮ ಸಹೋದರನಿಗೆ ವೀಸಾ ವ್ಯವಸ್ಥೆ ಮಾಡಿ ಕೊಡಿ ಎಂದು ವಿದೇಶಾಂಗ ಸಚಿವಾಲಯಕ್ಕೆ ಬರೆದ ಪತ್ರವನ್ನು ಲಗತ್ತಿಸಿದ್ದಾರೆ.

ಇನ್ನಷ್ಟುಓದಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.