ADVERTISEMENT

ನಗರಸಭೆ ಗಾದಿಗೇರಿದ ಪೌರಕಾರ್ಮಿಕ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:44 IST
Last Updated 21 ನವೆಂಬರ್ 2019, 2:44 IST
ಕೆ.ರಾಣಿ
ಕೆ.ರಾಣಿ   

ಚಿಂತಾಮಣಿ (ಚಿಕ್ಕಬಳ್ಳಾಪುರ): ಪೌರಕಾರ್ಮಿಕರಾಗಿ ಮನೆ–ಮನೆ ಕಸ ಸಂಗ್ರಹಿಸುತ್ತಿದ್ದ ಕೆ.ರಾಣಿ ಅವರು ಈಚೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಪ್ರಜಾ ಪಕ್ಷದಿಂದ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ರಾಣಿ ಅವರು ನಗರಸಭೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಆಡಳಿತವು 2008ರಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ಕಸ ಸಂಗ್ರಹ ಣೆಗೆ ಅರ್ಜಿ ಆಹ್ವಾನಿಸಿತ್ತು. ರಾಣಿ ಅವರು ಮುತ್ತುಮಾರಿಯಮ್ಮ ಸ್ತ್ರೀಶಕ್ತಿ ಸಂಘವನ್ನು ರಚನೆ ಮಾಡಿಕೊಂಡು ಕಸ ಸಂಗ್ರಹಣೆಗೆ ಮುಂದಾದರು. ಅಂದಿನಿಂದ 20 ಮಹಿಳೆಯರೊಂದಿಗೆ ಮನೆ–ಮನೆಗೂ ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ.

ನಗರ ಸ್ವಚ್ಛತೆಗೆ ಒತ್ತು ನೀಡು ತ್ತೇನೆ ಎಂದು ರಾಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.