
ವಿಜಯಪುರ(ದೇವನಹಳ್ಳಿ): ವಿಜಯಪುರ ಟೌನ್ ಒಕ್ಕಲಿಗರ ಸಂಘಕ್ಕೆ ಪ್ರಥಮ ಬಾರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಎಲ್ಲ ಪದಾಧಿಕಾರಿಗಳು ಪಟ್ಟಣದ ಗುರುಪ್ಪನಮಠದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಸಂಘದ ನೂತನ ಅಧ್ಯಕ್ಷರಾಗಿ ಪುರಸಭೆ ಸದಸ್ಯ ಎಂ.ಬೈರೇಗೌಡ, ಉಪಾಧ್ಯಕ್ಷರಾಗಿ ವಿ.ಮಂಜುನಾಥ್, ಪ್ರಭಾಕಾರ್, ಸಿ.ಮುನಿಕೃಷ್ಣ, ರಾಜ್ಕುಮಾರ್, ಪ್ರಧಾನಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ನವೀನ್ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಕುಮಾರ್, ಡಿ.ರಘು, ಜಿ.ಲೋಕೇಶ್, ಸುದೇಶ್ ಕುಮಾರ್, ಸಹ ಕಾರ್ಯದರ್ಶಿಗಳಾಗಿ ನಿತೇಶ್, ಮಧು, ಮಂಜುನಾಥ್, ರಮೇಶ್, ಜೀವನ್, ಅನಿಲ್, ಮಧುಸೂದನ್, ಖಜಾಂಚಿ ವಿ.ರವಿ, ಸದಸ್ಯರಾಗಿ ಎಸ್.ರಾಜಯ್ಯ, ಡಿ.ಎನ್.ಸುರೇಶ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.