
ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜ ಟ್ರಸ್ಟ್ ಹುಬ್ಬಳ್ಳಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಳೇ ಹುಬ್ಬಳ್ಳಿಯ ಅರವಿಂದ ನಗರದಲ್ಲಿನ ಸಮಾಜದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.
ಕುಶಾಲ ವೈ.ಬೆದರೆ (ಅಧ್ಯಕ್ಷ), ಜಗದೀಶ ಬಿ.ಹಂಚಾಟೆ (ಕಾರ್ಯದರ್ಶಿ) ಮತ್ತು ಅರುಣರಾವ್ ಎಚ್.ಬೆಳಮಕರ, ಗಣೇಶ ವಿ.ತೇಲಕರ, ದೀಪಕ ಟಿ.ಮಾತಾಡೆ, ಕೆ.ಜಿ.ಟಿಕಾರೆ, ಸತೀಶರಾವ್ ವೈಕುಂಠೆ, ತುಕಾರಾಮ ಎಸ್.ಚುಟಕೆ, ದಯಾನಂದ, ಕಿಶೋರ್ ವೈ.ಮಾಳದಕರ, ಭವಾನೇಪ್ಪ ವೈ. ದಾಮೋದರ (ಟ್ರಸ್ಟಿಗಳು) ಆಯ್ಕೆಯಾಗಿದ್ದಾರೆ.
ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯ ವಿಜಯ ಕುಮಾರ್ ಲಾಂಡೆ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸರಾವ್ ಪಿಸ್ಸೆ ಮಾತನಾಡಿದರು.
ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ ಕಪಟಕರ, ಪ್ರಕಾಶ ಇಜಂತಕರ, ಕೆ.ಜಿ ಟಿಕಾರೆ, ಎಂ.ಕೆ ರಾಶಿನಕರ, ಅರುಣ ಬೆಳಮಕರ, ದತ್ತಾತ್ರೇಯ ಎಸ್.ಕುಂಠೆ, ಪ್ರಕಾಶ ತಿರುಮಲ್ಲೆ, ಶಂಕರ್ ಕುಂಠೆ, ರಾಮಕೃಷ್ಣ ಮಾಳದಕರ, ಭಾರತಿ ಸರ್ವದೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.