
ಪ್ರಜಾವಾಣಿ ವಾರ್ತೆ
ಅಫಜಲಪುರ: ತಾಲೂಕಿನ ಬಳ್ಳೂರಗಿ ಗ್ರಾಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಗ್ರಾಹಕರೊಂದಿಗೆ ಮಂಗಳವಾರ ಎಸ್ಬಿಐನ 71ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಿದರು.
‘ಬ್ಯಾಂಕು ಹೆಮ್ಮರವಾಗಿ ಬೆಳೆಯಲು ಗ್ರಾಹಕರು ತಾವು ಉಳಿತಾಯ ಮಾಡಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡಬೇಕು’ ಎಂದು ಬ್ಯಾಂಕ್ನ ವ್ಯವಸ್ಥಾಪಕ ವೆಂಕಪ್ಪ ಘೋಡ್ಕೆ ಹೇಳಿದರು.
ಈ ವೇಳೆ ಎಸ್ಬಿಐ ಬ್ಯಾಂಕ್ ನಗದು ಅಧಿಕಾರಿ ಶಕೀನ್ ವರ್ಮಾ, ಶಿವಾನಂದ ನಾಯ್ಕೋಡಿ ರಾಕೇಶ್ ಪಾಟೀಲ್, ರವಿ ಸಿನೂರ್ ಮುಖಂಡರಾದ ಬಸಣ್ಣ ಚಲಗೇರಿ ಗುರುಮಾಂತಯ್ಯ ಮಠಪತಿ,, ಧರ್ಮರಾಯ ಹೌದೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.