ADVERTISEMENT

ಪಡಿತರ ಅಕ್ಕಿ ಅಕ್ರಮ ಸಾಗಣೆ: ಲಾರಿ ವಶ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 4:54 IST
Last Updated 17 ಜುಲೈ 2025, 4:54 IST
ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಗೆ ತಂದಿದ್ದ ಲಾರಿಯಲ್ಲಿರುವ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ನಿರೀಕ್ಷಕ ಹನುಮೇಶ ನಾಯಕ ಪರಿಶೀಲಿಸಿದರು
ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಗೆ ತಂದಿದ್ದ ಲಾರಿಯಲ್ಲಿರುವ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ನಿರೀಕ್ಷಕ ಹನುಮೇಶ ನಾಯಕ ಪರಿಶೀಲಿಸಿದರು   

ಸಿಂಧನೂರು: ಬಳ್ಳಾರಿಯಿಂದ ಪಡಿತರ ಅಕ್ಕಿಯ ಚೀಲಗಳನ್ನು ತುಂಬಿಕೊಂಡು ಗುಜರಾತ್‍ಗೆ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಕೆಲ ಸಂಘಟನೆಗಳ ಮುಖಂಡರು ಹಿಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪೋತ್ನಾಳ ಪಟ್ಟಣದ ಗುರುರಾಜ ಎನ್ನುವವರು ಬಳ್ಳಾರಿಯಿಂದ ಅಕ್ಕಿಯನ್ನು ಲಾರಿಯ ಮೂಲಕ ಗುಜರಾತ್‍ಗೆ ಮಾರಾಟ ಮಾಡಲು ಬೆಳಿಗ್ಗೆ 6 ಗಂಟೆ ಸುಮಾರಿಗೆ ತೆರಳುತ್ತಿದ್ದರು. ಈ ವೇಳೆ ಅನುಮಾನಗೊಂಡು ಕೆಲ ಸಂಘಟನೆಗಳ ಮುಖಂಡರು ತಾಲ್ಲೂಕಿನ ಶ್ರೀಪುರಂಜಂಕ್ಷನ್ ಬಳಿ ಲಾರಿಯನ್ನು ತಡೆದು 112ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಗ್ರಾಮೀಣ ಪೊಲೀಸ್ ಠಾಣೆಗೆ ತಂದರು. 

ಆಹಾರ ಇಲಾಖೆಯ ನಿರೀಕ್ಷಕ ಹನುಮೇಶ ನಾಯಕ ಬಂದು ಪರಿಶೀಲಿಸಿದಾಗ ಪಡಿತರ ಅಕ್ಕಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.