
ಉಡುಪಿ: ವಿದ್ಯಾಮಾನ್ಯ ತೀರ್ಥರ ಆಶ್ರಮ ಶತಾಬ್ದಿ ಹಾಗೂ ಬೃಂದಾವನ ಪ್ರವೇಶ ರಜತೋತ್ಸವ ನಿಮಿತ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದ ನೇತೃತ್ವದಲ್ಲಿ ವಾಕ್ಯಾರ್ಥ ಗೋಷ್ಠಿ ಈಚೆಗೆ ನಡೆಯಿತು.
ವಿದ್ಯಾ ಶ್ರೀಶತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಜೀವ ಕರ್ತೃತ್ವ ವಿಚಾರ ಕುರಿತು ವಿ. ಹರಿದಾಸ ಭಟ್ಟಾಚಾರ್ಯ, ಆಚಾರ್ಯ ವೀರನಾರಾಯಣ ಪಾಂಡುರಂಗಿ, ಉಡುಪಿ ರಾಮನಾಥ ಆಚಾರ್ಯ, ತಿರುಮಲಾಚಾರ್ಯ, ಶ್ರೀನಿಧಿ ಆಚಾರ್ಯ ಪ್ಯಾಟಿ ಇದ್ದರು.
ಅಭಿನವ ಚಂದ್ರಿಕಾಚಾರ್ಯ ಉಪಾದಿಯೊಡನೆ ಸೋಸಲೆ ವ್ಯಾಸರಾಜ ಶ್ರೀಪಾದರಾದ ವಿದ್ಯಾಶ್ರೀಶ ತೀರ್ಥರನ್ನು ರಾಜಾಂಗಣದಲ್ಲಿ ಪರ್ಯಾಯ ಮಠದ ವತಿಯಿಂದ ಪುತ್ತಿಗೆ ಶ್ರೀಗಳು ಸನ್ಮಾನಿಸಿದರು.
ಜೊತೆಗೆ ಶ್ರೀಕೃಷ್ಣನ ಪ್ರಸಾದ ರೂಪವಾಗಿ ಬೃಹತ್ ಕಡಗೋಲನ್ನು ಶಿಷ್ಯರೊಡಗೂಡಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.