ADVERTISEMENT

ಉತ್ತರ‍ಪ್ರದೇಶ| ಬಿಎಲ್‌ಒ ನಿಧನ: ಕೆಲಸದ ಒತ್ತಡವೇ ಕಾರಣ

ಪಿಟಿಐ
Published 2 ಡಿಸೆಂಬರ್ 2025, 14:35 IST
Last Updated 2 ಡಿಸೆಂಬರ್ 2025, 14:35 IST
   

ಹಾಥರಸ್, ಉತ್ತರ‍ಪ್ರದೇಶ: ಹಾಥರಸ್‌ ಜಿಲ್ಲೆಯ ಸಿಕಂದ್ರ ರಾವ್‌ ನಗರದಲ್ಲಿ ಬೂತ್‌ ಮಟ್ಟದ ಅಧಿಕಾರಿಯೊಬ್ಬರು  (ಬಿಎಲ್‌ಒ) ಮಂಗಳವಾರ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೃತ ಕಮಲಕಾಂತ್‌ ಶರ್ಮಾ (40) ಅವರು, ನಾವಲಿ ಲಾಲ್‌ಪುರದಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅದರೊಂದಿಗೆ ಬಿಎಲ್‌ಒ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. 

‘ಶರ್ಮಾ ಅವರು, ಹಲವು ದಿನಗಳಿಂದ ಬಿಎಲ್‌ಒ ಕರ್ತವ್ಯಗಳಿಗೆ ಸಂಬಂಧಿಸಿದ ಕೆಲಸದ ಹೊರೆಯಿಂದ ಒತ್ತಡಕ್ಕೆ ಒಳಗಾಗಿದ್ದರು. ಬೆಳಿಗ್ಗೆ ‌ಚಹಾ ಕುಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ತಲೆಸುತ್ತಿ ಕೆಳಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ’ ಎಂದು ಶರ್ಮಾ ಅವರ ಪುತ್ರ ವಿನಾಯಕ್‌ ತಿಳಿಸಿದ್ದಾರೆ.

ADVERTISEMENT

ಅಧಿಕ ಕೆಲಸದ ಒತ್ತಡವೇ ಬಿಎಲ್‌ಒ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.