
ಇತ್ತೀಚೆಗೆ ಭಾರತೀಯ ಸೇನೆ ಆಯೋಜಿಸಿದ್ದ ಆಪರೇಷನ್ ಸದ್ಭಾವನಾ ಭಾರತ ಪ್ರವಾಸ ಕಾರ್ಯಕ್ರಮದಲ್ಲಿ ಕಾಶ್ಮೀರದ ಕೆಲ ವಿದ್ಯಾರ್ಥಿನಿಯರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೊಡನೆ ಫೋಟೊ ತೆಗೆಸಿಕೊಂಡರು ಎಂಬ ಕಾರಣಕ್ಕೇ ಕೆಲ ವಿಕೃತ ಮನಸ್ಥಿತಿಗಳು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯರ ವಿರುದ್ಧ ಅಭಿಯಾನದಲ್ಲಿ ತೊಡಗಿಕೊಂಡು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ವರದಿಯಾಗಿದೆ. ಇದನ್ನು ನೋಡಿದಾಗ ನಮ್ಮ ಜನರ ಮನಸ್ಥಿತಿ ಬಗ್ಗೆ ಮರುಕ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.