ADVERTISEMENT

ಬೆಂಗಳೂರು | ಟೇಬಲ್‌ ಟೆನಿಸ್‌: ತಮನ್ನಾ, ಅರ್ಣವ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 14:28 IST
Last Updated 26 ಸೆಪ್ಟೆಂಬರ್ 2025, 14:28 IST
<div class="paragraphs"><p>ಪ್ರಶಸ್ತಿಯೊಂದಿಗೆ ಅರ್ಣವ್‌ ಮಿಥುನ್‌ ಮತ್ತು ತಮನ್ನಾ ನೇರ್ಲಾಜೆ</p></div>

ಪ್ರಶಸ್ತಿಯೊಂದಿಗೆ ಅರ್ಣವ್‌ ಮಿಥುನ್‌ ಮತ್ತು ತಮನ್ನಾ ನೇರ್ಲಾಜೆ

   

ಬೆಂಗಳೂರು: ತಮನ್ನಾ ನೇರ್ಲಾಜೆ ಮತ್ತು ಅರ್ಣವ್‌ ಮಿಥುನ್‌ ಅವರು ಜೆಟಿಟಿಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕಿಯರ ಮತ್ತು ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದರು.

ನಗರದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ತಮನ್ನಾ 11-9, 14-12, 6-11, 11-9 ರಿಂದ ಸಮನ್ವಿ ಸಂದೀಪ್‌ ಅವರನ್ನು ಮಣಿಸಿದರು.

ADVERTISEMENT

ಸೆಮಿಫೈನಲ್‌ನಲ್ಲಿ ತಮನ್ನಾ  5-11, 11-5, 11-9, 11-7 ರಿಂದ ಸಾನ್ವಿ ಹರಿಪ್ರಸಾದ್‌ ರಾವ್‌ ವಿರುದ್ಧ; ಸಮನ್ವಿ 2-11, 11-9, 11-8, 11-4 ರಿಂದ ನಂದನಾ ಬಂಡಿ ವಿರುದ್ಧ ಗೆಲುವು ಸಾಧಿಸಿದ್ದರು.

ಅರ್ಣವ್‌ ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 12-10, 11-7, 9-11, 8-11, 11-6 ರಿಂದ ಶರ್ವಿಲ್ ಕರಂಬೆಲ್ಕರ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅರ್ಣವ್‌ 11-4, 11-5, 11-4 ರಿಂದ ಪೂರಬ್‌ ಬಿಸ್ವಾಸ್‌ ಎದುರು; ಶರ್ವಿಲ್‌ 11-1,11-4,11-6ರಿಂದ ಮುಕುಂದ್ ರಾವ್ ಎದುರು ಜಯ ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.