ಐತಿಹಾಸಿಕ ಹಿನ್ನೆಲೆಯ ಮೊಹರಂ ಭಾವೈಕ್ಯದ ಆಚರಣೆಯೂ ಹೌದು. ಮುಸ್ಲಿಮರಿಗೆ ಇದು ಶೋಕಾಚರಣೆಯಾದರೆ, ಹಿಂದೂ ಸೇರಿದಂತೆ ಇತರ ಸಮುದಾಯಗಳ ಜನರಿಗೆ ಇದು ಹರಕೆ ತೀರಿಸುವ ಹಬ್ಬ. ಹರಕೆ ಹೊತ್ತವರು ಹುಲಿ ವೇಷ ಧರಿಸಿ ಪಂಜಾ ಅಥವಾ ಅಲೈ ದೇವರುಗಳಿಗೆ ಹರಕೆ ಸಮರ್ಪಿಸುತ್ತಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯ ವಿವಿಧೆಡೆ ಇಂತಹ ದೃಶ್ಯಗಳು ಸಾಮಾನ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.