ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭಾ ಉಪಚುನಾವಣೆ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದ ರೇಣುಕಾಚಾರ್ಯ ಅವರಿಗೆ ಆರತಿ ಬೆಳಗಲು ಬಂದಿದ್ದ ಮಹಿಳೆ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆಯಿತು.
ಸರದಿಯಲ್ಲಿ ಆರತಿ ಹಿಡಿದು ನಿಂತಿದ್ದಾಗ ಮಹಿಳೆಯೊಬ್ಬರ ತಲೆಗೂದಲಿಗೆ ಆರತಿದೀಪ ತಗುಲಿದ್ದು, ಆವಾಂತರಕ್ಕೆ ಕಾರಣವಾಯಿತು. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಕೂಡಲೇ ಗಮನಿಸಿ ಹೊಗೆ ಆಡುತ್ತಿದ್ದ ಕೂದಲಿನ ಬೆಂಕಿ ನಂದಿಸಿದರು. ಬೆಂಕಿ ತಗುಲಿದ್ದು ಮಹಿಳೆಗೆ ಇದು ಗೊತ್ತಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.