<p>ಬೆಂಗಳೂರು: ‘ಸಹಸ್ರ ಚಂದ್ರನ ದರ್ಶನದ ಹೆಸರಿನಲ್ಲಿ ಹೋಮ ಹವನಗಳನ್ನು ನಡೆಸುವುದರ ಬದಲಿಗೆ, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿ ಜೀವನದ ಯಶಸ್ವಿಗೆ ಕಾರಣರಾದವರಿಗೆ ಗೌರವ ಸಲ್ಲಿಸುವುದೇ ವಚನ ಅಭಿನಂದನೆಯ ಉದ್ದೇಶ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.</p>.<p>ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ ಮಾತನಾಡಿ, ‘ನಮ್ಮ ನಡುವೆ ಇರುವ ಸಾಧಕರನ್ನು ಗೌರವಿಸಬೇಕು, ಸಂತೋಷವನ್ನು ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಬಿಬಿಎಂಪಿ ಮಾಜಿ ಸದಸ್ಯಎಸ್. ರಾಜು ಮಾತನಾಡಿ, ‘ಪಾರ್ಟಿ ಮಾಡುವುದರ ಬದಲಿಗೆ ಗಾಯಕರ ಬರಮಾಡಿಕೊಂಡು ಮನಮುಟ್ಟುವ ಗೀತೆಗಳನ್ನು ಆಲಿಸಿ ಅಭಿನಂದಿಸುವುದು ಗುಣಾತ್ಮಕ ನಡವಳಿಕೆ’ ಎಂದರು.</p>.<p>ಲಿಂಗಾಯತ್ ಯೂತ್ ಫೋರಂ ಟ್ರಸ್ಟಿ ಸತೀಶ್ ಮೂಡಿ, ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತಿನ ಮಾಜಿ ಅಧ್ಯಕ್ಷ ಮುನಿರಾಜಪ್ಪ, ಹ್ಯಾಬಿಟೇಟ್ ವೇರ್ಸ್ನ ಗುರುಪ್ರಸಾದ ಕುಚ್ಚಂಗಿ, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಿಇಒ ರಾಜಾ ಗುರುಪ್ರಸಾದ್, ಉಪಾಧ್ಯಕ್ಷೆ ಕೆ.ಆರ್. ಸೌಮ್ಯಾ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-4-2051584459</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸಹಸ್ರ ಚಂದ್ರನ ದರ್ಶನದ ಹೆಸರಿನಲ್ಲಿ ಹೋಮ ಹವನಗಳನ್ನು ನಡೆಸುವುದರ ಬದಲಿಗೆ, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿ ಜೀವನದ ಯಶಸ್ವಿಗೆ ಕಾರಣರಾದವರಿಗೆ ಗೌರವ ಸಲ್ಲಿಸುವುದೇ ವಚನ ಅಭಿನಂದನೆಯ ಉದ್ದೇಶ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.</p>.<p>ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ ಮಾತನಾಡಿ, ‘ನಮ್ಮ ನಡುವೆ ಇರುವ ಸಾಧಕರನ್ನು ಗೌರವಿಸಬೇಕು, ಸಂತೋಷವನ್ನು ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಬಿಬಿಎಂಪಿ ಮಾಜಿ ಸದಸ್ಯಎಸ್. ರಾಜು ಮಾತನಾಡಿ, ‘ಪಾರ್ಟಿ ಮಾಡುವುದರ ಬದಲಿಗೆ ಗಾಯಕರ ಬರಮಾಡಿಕೊಂಡು ಮನಮುಟ್ಟುವ ಗೀತೆಗಳನ್ನು ಆಲಿಸಿ ಅಭಿನಂದಿಸುವುದು ಗುಣಾತ್ಮಕ ನಡವಳಿಕೆ’ ಎಂದರು.</p>.<p>ಲಿಂಗಾಯತ್ ಯೂತ್ ಫೋರಂ ಟ್ರಸ್ಟಿ ಸತೀಶ್ ಮೂಡಿ, ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತಿನ ಮಾಜಿ ಅಧ್ಯಕ್ಷ ಮುನಿರಾಜಪ್ಪ, ಹ್ಯಾಬಿಟೇಟ್ ವೇರ್ಸ್ನ ಗುರುಪ್ರಸಾದ ಕುಚ್ಚಂಗಿ, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಿಇಒ ರಾಜಾ ಗುರುಪ್ರಸಾದ್, ಉಪಾಧ್ಯಕ್ಷೆ ಕೆ.ಆರ್. ಸೌಮ್ಯಾ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-4-2051584459</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>