<p>ಬೀದರ್: ಇಲ್ಲಿನ ಗಾಂಧಿನಗರ ಮೈಲೂರ್ನಲ್ಲಿ ಭಾನುವಾರ ಕವಿ ಸರ್ವಜ್ಞ ಸಂಘ, ಹುಪಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವಜ್ಯೋತಿ ಬಸವಣ್ಣನವರ ಕುರಿತ ವಿಚಾರ ಸಂಕಿರಣ ಮತ್ತು ಸಂಗೀತ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಜರುಗಿತು.</p>.<p>ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ, ‘ಸರ್ಕಾರವು ಸಂಘ ಸಂಸ್ಥೆಗಳಿಗೆ ವಿಶೇಷ ಸಹಾಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಇಂತಹ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಾಧ್ಯ’ ಎಂದರು.</p>.<p>ಬಸವೇಶ್ವರ ಮಂದಿರದ ಅಧ್ಯಕ್ಷ ನಾಗಭೂಷಣ ಮಡೆಪ್ಪಾ ಕಮಠಾಣೆ ಮಾತನಾಡಿ, ‘ಹಳೆಯ ಜನಪದ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಸರ್ವಜ್ಞ ಕಲಾ ಸಂಘವು ಬಸವಣ್ಣನವರ ವಿಚಾರಧಾರೆಗಳೊಂದಿಗೆ ಸಂಸ್ಕೃತಿ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ’ ಎಂದರು.</p>.<p>ಕಾರ್ಯಕ್ರಮದಲ್ಲಿ ಗೋಂದಳಿ ಪದ, ಗೀಗಿ ಪದ, ತತ್ವ ಪದ, ಭಜನೆ ಪದ, ಭಕ್ತಿಗೀತೆ, ಜಾನಪದ, ಮೊಹರಂ ಪದ, ಸಂಪ್ರದಾಯ ಪದ, ಮಹಿಳಾ ಡೊಳ್ಳು ಹಾಗೂ ಭುಲಾಯಿ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆದವು.</p>.<p>ಕಲಾವಿದರಾದ ಶಿವಾಜಿ ಗೋಂದಳಿ, ದೇವದಾಸ ಚಿಮಕೋಡ, ಮಲ್ಲಪ್ಪ ಯರನಳ್ಳಿ, ಸುಧಾಕರ ಹುಪಳಾ, ಸುನೀಲ ಹುಪಳಾ, ಸಂತೋಷ ಜೋಳದಾಬಾ, ಬೇಬಾವತಿ ಶಿವರಾಜ, ಶಂಕರ ಕಚೊಂಡಿ, ಚಿನ್ನಮ್ಮ ದೊಡ್ಡಮನಿ, ಶೋಭಾವತಿ ಹಾಗೂ ಶಾಂತಾಬಾಯಿ ಬಾಬುರಾವ್ ಮತ್ತು ತಂಡಗಳು ಪ್ರೇಕ್ಷಕರನ್ನು ಮನರಂಜಿಸಿದರು.</p>.<p>ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶಿವರಾಜ ಕಾಳಶೆಟ್ಟಿ ಅವರು ಬಸವಣ್ಣನವರ ಜೀವನ ಚರಿತ್ರೆ ಮತ್ತು ಅವರ ನಡೆದು ಬಂದ ದಾರಿಯ ಕುರಿತು ವಿವರಿಸಿದರು.</p>.<p>ಕುಂಬಾರ ಸಮಾಜದ ಅಧ್ಯಕ್ಷ ವಿಠ್ಠಲ ಕಾರಾಮುಂಗಿ, ನೂರಂದಪ್ಪ ಮೀನಕೇರಿ, ಶಾಮಣ್ಣಾ ನೇಳಗಿ ಹಾಗೂ ಮಲಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.</p>.<p>ಮನೋಹರ ಹುಪಳಾ ಸ್ವಾಗತಿಸಿದರು. ಸಿದ್ದಮ್ಮ ಬಸವಣ್ಣೋರ್ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-33-1234261038</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಇಲ್ಲಿನ ಗಾಂಧಿನಗರ ಮೈಲೂರ್ನಲ್ಲಿ ಭಾನುವಾರ ಕವಿ ಸರ್ವಜ್ಞ ಸಂಘ, ಹುಪಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವಜ್ಯೋತಿ ಬಸವಣ್ಣನವರ ಕುರಿತ ವಿಚಾರ ಸಂಕಿರಣ ಮತ್ತು ಸಂಗೀತ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಜರುಗಿತು.</p>.<p>ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ, ‘ಸರ್ಕಾರವು ಸಂಘ ಸಂಸ್ಥೆಗಳಿಗೆ ವಿಶೇಷ ಸಹಾಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಇಂತಹ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಾಧ್ಯ’ ಎಂದರು.</p>.<p>ಬಸವೇಶ್ವರ ಮಂದಿರದ ಅಧ್ಯಕ್ಷ ನಾಗಭೂಷಣ ಮಡೆಪ್ಪಾ ಕಮಠಾಣೆ ಮಾತನಾಡಿ, ‘ಹಳೆಯ ಜನಪದ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಸರ್ವಜ್ಞ ಕಲಾ ಸಂಘವು ಬಸವಣ್ಣನವರ ವಿಚಾರಧಾರೆಗಳೊಂದಿಗೆ ಸಂಸ್ಕೃತಿ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ’ ಎಂದರು.</p>.<p>ಕಾರ್ಯಕ್ರಮದಲ್ಲಿ ಗೋಂದಳಿ ಪದ, ಗೀಗಿ ಪದ, ತತ್ವ ಪದ, ಭಜನೆ ಪದ, ಭಕ್ತಿಗೀತೆ, ಜಾನಪದ, ಮೊಹರಂ ಪದ, ಸಂಪ್ರದಾಯ ಪದ, ಮಹಿಳಾ ಡೊಳ್ಳು ಹಾಗೂ ಭುಲಾಯಿ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆದವು.</p>.<p>ಕಲಾವಿದರಾದ ಶಿವಾಜಿ ಗೋಂದಳಿ, ದೇವದಾಸ ಚಿಮಕೋಡ, ಮಲ್ಲಪ್ಪ ಯರನಳ್ಳಿ, ಸುಧಾಕರ ಹುಪಳಾ, ಸುನೀಲ ಹುಪಳಾ, ಸಂತೋಷ ಜೋಳದಾಬಾ, ಬೇಬಾವತಿ ಶಿವರಾಜ, ಶಂಕರ ಕಚೊಂಡಿ, ಚಿನ್ನಮ್ಮ ದೊಡ್ಡಮನಿ, ಶೋಭಾವತಿ ಹಾಗೂ ಶಾಂತಾಬಾಯಿ ಬಾಬುರಾವ್ ಮತ್ತು ತಂಡಗಳು ಪ್ರೇಕ್ಷಕರನ್ನು ಮನರಂಜಿಸಿದರು.</p>.<p>ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶಿವರಾಜ ಕಾಳಶೆಟ್ಟಿ ಅವರು ಬಸವಣ್ಣನವರ ಜೀವನ ಚರಿತ್ರೆ ಮತ್ತು ಅವರ ನಡೆದು ಬಂದ ದಾರಿಯ ಕುರಿತು ವಿವರಿಸಿದರು.</p>.<p>ಕುಂಬಾರ ಸಮಾಜದ ಅಧ್ಯಕ್ಷ ವಿಠ್ಠಲ ಕಾರಾಮುಂಗಿ, ನೂರಂದಪ್ಪ ಮೀನಕೇರಿ, ಶಾಮಣ್ಣಾ ನೇಳಗಿ ಹಾಗೂ ಮಲಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.</p>.<p>ಮನೋಹರ ಹುಪಳಾ ಸ್ವಾಗತಿಸಿದರು. ಸಿದ್ದಮ್ಮ ಬಸವಣ್ಣೋರ್ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-33-1234261038</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>