<p>ಬ್ರಹ್ಮಾವರ: ಮಾನವೀಯತೆ ಎನ್ನುವುದು ಮೌಲ್ಯವಲ್ಲ, ಅದಕ್ಕೆ ಸಂಸ್ಕೃತಿ ಇಲ್ಲ. ಅದು ಪ್ರಕೃತಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಚಿನ್ನಪ್ಪ ಗೌಡ ಹೇಳಿದರು.</p>.<p>ಬ್ರಹ್ಮಾವರದ ಎಸ್ಎಂಎಸ್ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎನ್ನುವ ವಿಚಾರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮಾನವೀಯತೆಗೆ ಯಾವುದೇ ಜಾತಿ, ದೇಶ, ವರ್ಣಗಳ ಭೇದವಿಲ್ಲ. ಅದು ಪ್ರತಿ ಮನುಷ್ಯನಲ್ಲಿರುವ ಸ್ವಾಭಾವಿಕ ಸ್ವಭಾವ. ಅದು ಯಾವ ಕ್ಷಣದಲ್ಲಿ ಕೂಡ ಹುಟ್ಟಬಹುದು ಎಂದರು.</p>.<p>ರಾಮಾಯಣ, ಮಹಾಭಾರತ ಯುದ್ಧ ಕೇಂದ್ರಿತ ಕಾವ್ಯಗಳು. ಯಾವುದೇ ಧರ್ಮ ಕೊಲ್ಲು ಎಂದು ಹೇಳುವುದಿಲ್ಲ. ಆದರೆ ಯಾವಾಗ ಕೊಲ್ಲಬೇಕು ಎಂದು ಹೇಳುತ್ತದೆ. ರಾಮಾಯಣ, ಮಹಾಭಾರತ ಹೇಳುವುದು ಶಿಷ್ಟರ ರಕ್ಷಣೆ ದುಷ್ಟರ ಸಂಹಾರ. ಆದರೆ ಅದನ್ನು ಬರೆದ ಪಂಪ ಬಹಳ ಸಂವೇದನಾಶೀಲ. ಈ ಕಾರಣಕ್ಕೆ ಯುದ್ಧಕೇಂದ್ರಿತ ಕಾವ್ಯವನ್ನು ಬರೆದರೂ ಅದರ ನಡು ನಡುವೆ ಪ್ರೀತಿ, ದಯೆ, ಸೌಹಾರ್ದವನ್ನು ಸೇರಿಸಿ ಸಂವೇದನಾಶೀಲವಾಗಿ ಬರೆದಿದ್ದಾನೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಒಎಸ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸಿ ಮಥಾಯ್, ಹಸಿವು ತಲೆಗೇರಿದಾಗ ಕ್ರಾಂತಿಯಾಗುತ್ತದೆ. ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ರೋಡ್ರಿಗಸ್, ವಿಕಾಸದ ಕಾರ್ಯದರ್ಶಿ ಮಾಧವ ಎಂ.ಕೆ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಅಶ್ವಿನ್ ಶೆಟ್ಟಿ ಎ. ಇದ್ದರು.</p>.<p>ಮಂಗಳೂರು ವಿ.ವಿ. ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವಿದ್ಯಾಲತಾ ಸ್ವಾಗತಿಸಿದರು. ಮೂಡಬಿದ್ರೆಯ ಧವಳ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-28-382250590</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಮಾನವೀಯತೆ ಎನ್ನುವುದು ಮೌಲ್ಯವಲ್ಲ, ಅದಕ್ಕೆ ಸಂಸ್ಕೃತಿ ಇಲ್ಲ. ಅದು ಪ್ರಕೃತಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಚಿನ್ನಪ್ಪ ಗೌಡ ಹೇಳಿದರು.</p>.<p>ಬ್ರಹ್ಮಾವರದ ಎಸ್ಎಂಎಸ್ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎನ್ನುವ ವಿಚಾರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮಾನವೀಯತೆಗೆ ಯಾವುದೇ ಜಾತಿ, ದೇಶ, ವರ್ಣಗಳ ಭೇದವಿಲ್ಲ. ಅದು ಪ್ರತಿ ಮನುಷ್ಯನಲ್ಲಿರುವ ಸ್ವಾಭಾವಿಕ ಸ್ವಭಾವ. ಅದು ಯಾವ ಕ್ಷಣದಲ್ಲಿ ಕೂಡ ಹುಟ್ಟಬಹುದು ಎಂದರು.</p>.<p>ರಾಮಾಯಣ, ಮಹಾಭಾರತ ಯುದ್ಧ ಕೇಂದ್ರಿತ ಕಾವ್ಯಗಳು. ಯಾವುದೇ ಧರ್ಮ ಕೊಲ್ಲು ಎಂದು ಹೇಳುವುದಿಲ್ಲ. ಆದರೆ ಯಾವಾಗ ಕೊಲ್ಲಬೇಕು ಎಂದು ಹೇಳುತ್ತದೆ. ರಾಮಾಯಣ, ಮಹಾಭಾರತ ಹೇಳುವುದು ಶಿಷ್ಟರ ರಕ್ಷಣೆ ದುಷ್ಟರ ಸಂಹಾರ. ಆದರೆ ಅದನ್ನು ಬರೆದ ಪಂಪ ಬಹಳ ಸಂವೇದನಾಶೀಲ. ಈ ಕಾರಣಕ್ಕೆ ಯುದ್ಧಕೇಂದ್ರಿತ ಕಾವ್ಯವನ್ನು ಬರೆದರೂ ಅದರ ನಡು ನಡುವೆ ಪ್ರೀತಿ, ದಯೆ, ಸೌಹಾರ್ದವನ್ನು ಸೇರಿಸಿ ಸಂವೇದನಾಶೀಲವಾಗಿ ಬರೆದಿದ್ದಾನೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಒಎಸ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸಿ ಮಥಾಯ್, ಹಸಿವು ತಲೆಗೇರಿದಾಗ ಕ್ರಾಂತಿಯಾಗುತ್ತದೆ. ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ರೋಡ್ರಿಗಸ್, ವಿಕಾಸದ ಕಾರ್ಯದರ್ಶಿ ಮಾಧವ ಎಂ.ಕೆ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಅಶ್ವಿನ್ ಶೆಟ್ಟಿ ಎ. ಇದ್ದರು.</p>.<p>ಮಂಗಳೂರು ವಿ.ವಿ. ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವಿದ್ಯಾಲತಾ ಸ್ವಾಗತಿಸಿದರು. ಮೂಡಬಿದ್ರೆಯ ಧವಳ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-28-382250590</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>