<p>ಹೊರ್ತಿ: ಆಧುನಿಕ ಯುಗದಲ್ಲಿ ಬಯಲಾಟ ಕಲೆ ಮತ್ತು ಕಲಾವಿದರು ಕಣ್ಮರೆ ಆಗುತ್ತಿರುವುದು ಅಸಮಾಧಾನದ ಸಂಗತಿಯಾಗಿದೆ. ಈ ಕಲೆಯನ್ನು ಉಳಿಸಿ ಬೆಳೆಸೋಣ ಎಂದು ರಾಜ್ಯ ಬಯಲಾಟ ಕಲಾವಿದ ಶಿವಣ್ಣ ಬಿರಾದಾರ ಹೇಳಿದರು.</p>.<p>ಸಮೀಪದ ಬರಡೋಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲ ಬಯಲಾಟ ಕಲಾವಿದರ ಸಂಘ ನಿರ್ಮಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲ್ಲೂಕಿನ ಮತ್ತು ಇತರೆಡೆಯ ಎಲ್ಲ ಬಯಲಾಟ ಕಲಾವಿದರು ಸೇರಿಕೊಂಡು ಇಂದು ಒಂದಾಗಿ, ಬಯಲಾಟದ ಮಹತ್ವ, ಅದರ ರುಚಿ ನಮ್ಮ ಮುಂದಿನ ಯುವ ಪೀಳಿಗೆಗೆ ಜ್ಞಾಪದಲ್ಲಿರಿಸೋಣ ಎಂದು ಹೇಳಿದರು.</p>.<p>ಹಿರಿಯ ಕಲಾಭಿಮಾನಿ ಕಲಾವಿದ ಎಸ್.ಎಲ್.ಮೇತ್ರಿ ಮಾತನಾಡಿ, ಬಯಲಾಟ ಎಂಬುದು ನಮ್ಮ ಪೂರ್ವಜರ, ಸಾಮಾಜಿಕ, ಸಂಪ್ರದಾಯಕ ಮತ್ತು ಇತಿಹಾಸ ಬಿಂಬಿಸುವ ಕಲೆ, ಇಂತಹ ಕಲೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದರು.</p>.<p>ಬಯಲಾಟ ಕಲಾವಿದರಿಗೆ ಸಹಾಯ ಮಾಡುವವರು ಕಡಿಮೆಯಾಗಿದ್ದಾರೆ. ಆದ್ದರಿಂದ ಎಲ್ಲ ತಾಲ್ಲೂಕಿನ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಸಂಘ ನಿರ್ಮಾಣ ಮಾಡೋಣ ಎಂದರು.</p>.<p>ಎಸ್.ಎಲ್.ಮೇತ್ರಿ, ಕಾಸುಗೌಡ ಪಾಟೀಲ, ಅಂಬಣ್ಣ ಆಲಮೇಲ, ಸುಲೋಚನಾ ಕಟ್ಟಿಮನಿ, ವಿಮಲಾಬಾಯಿ ಕಟ್ಟಿಮನಿ, ಕಮಲಾಬಾಯಿ ಕಟ್ಟಿಮನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-26-410766571</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊರ್ತಿ: ಆಧುನಿಕ ಯುಗದಲ್ಲಿ ಬಯಲಾಟ ಕಲೆ ಮತ್ತು ಕಲಾವಿದರು ಕಣ್ಮರೆ ಆಗುತ್ತಿರುವುದು ಅಸಮಾಧಾನದ ಸಂಗತಿಯಾಗಿದೆ. ಈ ಕಲೆಯನ್ನು ಉಳಿಸಿ ಬೆಳೆಸೋಣ ಎಂದು ರಾಜ್ಯ ಬಯಲಾಟ ಕಲಾವಿದ ಶಿವಣ್ಣ ಬಿರಾದಾರ ಹೇಳಿದರು.</p>.<p>ಸಮೀಪದ ಬರಡೋಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲ ಬಯಲಾಟ ಕಲಾವಿದರ ಸಂಘ ನಿರ್ಮಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.</p>.<p>ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲ್ಲೂಕಿನ ಮತ್ತು ಇತರೆಡೆಯ ಎಲ್ಲ ಬಯಲಾಟ ಕಲಾವಿದರು ಸೇರಿಕೊಂಡು ಇಂದು ಒಂದಾಗಿ, ಬಯಲಾಟದ ಮಹತ್ವ, ಅದರ ರುಚಿ ನಮ್ಮ ಮುಂದಿನ ಯುವ ಪೀಳಿಗೆಗೆ ಜ್ಞಾಪದಲ್ಲಿರಿಸೋಣ ಎಂದು ಹೇಳಿದರು.</p>.<p>ಹಿರಿಯ ಕಲಾಭಿಮಾನಿ ಕಲಾವಿದ ಎಸ್.ಎಲ್.ಮೇತ್ರಿ ಮಾತನಾಡಿ, ಬಯಲಾಟ ಎಂಬುದು ನಮ್ಮ ಪೂರ್ವಜರ, ಸಾಮಾಜಿಕ, ಸಂಪ್ರದಾಯಕ ಮತ್ತು ಇತಿಹಾಸ ಬಿಂಬಿಸುವ ಕಲೆ, ಇಂತಹ ಕಲೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದರು.</p>.<p>ಬಯಲಾಟ ಕಲಾವಿದರಿಗೆ ಸಹಾಯ ಮಾಡುವವರು ಕಡಿಮೆಯಾಗಿದ್ದಾರೆ. ಆದ್ದರಿಂದ ಎಲ್ಲ ತಾಲ್ಲೂಕಿನ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಸಂಘ ನಿರ್ಮಾಣ ಮಾಡೋಣ ಎಂದರು.</p>.<p>ಎಸ್.ಎಲ್.ಮೇತ್ರಿ, ಕಾಸುಗೌಡ ಪಾಟೀಲ, ಅಂಬಣ್ಣ ಆಲಮೇಲ, ಸುಲೋಚನಾ ಕಟ್ಟಿಮನಿ, ವಿಮಲಾಬಾಯಿ ಕಟ್ಟಿಮನಿ, ಕಮಲಾಬಾಯಿ ಕಟ್ಟಿಮನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-26-410766571</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>