<p>ಹುಬ್ಬಳ್ಳಿ: ಇಲ್ಲಿನ ಚಿತ್ರಶಂಕರ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಣ್ಣಾಟ’ ಪ್ರಾತ್ಯಕ್ಷಿಕೆ ಹಾಗೂ ಶಿಬಿರವು ಮಕ್ಕಳ ಕಲಿಕೆ, ಉತ್ಸುಕತೆ, ಸೃಜನಶೀಲತೆಗೆ ವೇದಿಕೆಯಾಯಿತು.</p>.<p>ಕಲಾವಿದೆ ಪ್ರತಿಮಾ ದೊಡ್ಡಮನಿ ಅವರು ‘ಮಣ್ಣಾಟ’ದ ನೇತೃತ್ವ ವಹಿಸಿ, ವಿವಿಧ ಕಲಾಕೃತಿಗಳನ್ನು ಮಣ್ಣಿನಲ್ಲಿ ಮೂಡಿಸಿದರು. ನೆರೆದಿದ್ದವರಿಗೂ ಮಣ್ಣಿನ ಮೂರ್ತಿಗಳ ತಯಾರಿಕೆಯನ್ನು ಕಲಿಸಿದರು. ಮಕ್ಕಳು ಖುಷಿಯಿಂದ ಮಣ್ಣಿನ ಆಕೃತಿಗಳನ್ನು ರೂಪಿಸಿದರು.</p>.<p>ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಲಾವಿದ ಈಶ್ವರ ಜೋಶಿ, ‘ಮಣ್ಣೆತ್ತಿನ ಅಮಾಮಾಸ್ಯೆಯು ರೈತರಿಗೆ ಮಹತ್ವದ್ದಾಗಿದೆ. ಸಾಗುವಳಿಯೊಂದಿಗೆ ಅವರೀಗ ಮಣ್ಣಾಟ ಪ್ರಾರಂಭಿಸಿದ್ದಾರೆ.ಇಲ್ಲಿ ಮಕ್ಕಳಿಗಾಗಿ ಮಣ್ಣಾಟ ಆಯೋಜಿಸಲಾಗಿದೆ. ಕಲಾ ವಲಯದಲ್ಲಿ ಇಂತಹ ಬದಲಾವಣೆ ಅವಶ್ಯ’ ಎಂದರು.</p>.<p>‘ಮಣ್ಣಾಟದಲ್ಲಿ ಬುದ್ಧಿ, ಕೈ ಹಾಗೂ ಮನಸ್ಸು ಸಂಗಮವಾಗುತ್ತದೆ. ಏಕಕಾಲಕ್ಕೆ ಮೂರು ಅಂಗಗಳ ಕೆಲಸ ನಡೆಯುತ್ತದೆ. ಚಿತ್ರಕಲಾ ಪಠ್ಯದಲ್ಲಿಯೂ ಮಣ್ಣಿನ ಆಕೃತಿಗಳ ರಚನೆಯ ವಿಷಯವಿದೆ. ಆದರೆ, ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪಾಲಕರು ಸಹ ತಮ್ಮ ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡುತ್ತಿಲ್ಲ’ ಎಂದು ಹೇಳಿದರು.</p>.<p>ಕಲಾವಿದೆ ಪ್ರತಿಮಾ ದೊಡ್ಡಮನಿ ಮಾತನಾಡಿ, ‘ಮಣ್ಣೆಂದರೆ ಎಲ್ಲರಿಗೂ ಇಷ್ಟ. ಆದರೆ, ಆಧುನಿಕ ಕಾಲದಲ್ಲಿ ಗೆಜೆಟ್ಗಳ ಪ್ರಭಾವದಿಂದ ಮಕ್ಕಳಿಗೆ ಮಣ್ಣಿನಲ್ಲಿ ಆಟ ಆಡುವುದೇ ಗೊತ್ತಿಲ್ಲ. ನಮ್ಮ ದೇಹ ರಚನೆ ಆಗಿರುವುದು ಪಂಚ ಭೂತಗಳಿಂದ. ಅದರಲ್ಲಿ ಭೂಮಿತತ್ವವೂ ಒಂದು’ ಎಂದು ತಿಳಿಸಿದರು.</p>.<p>‘ಮಣ್ಣಾಟದಿಂದ ಬುದ್ಧಿ ಚುರುಕಾಗುತ್ತದೆ, ಮೊಬೈಲ್ ಫೋನ್ನಿಂದ ಮಕ್ಕಳನ್ನು ದೂರವಿಡಬಹುದು. ಏಕಾಗ್ರತೆ ಜೊತೆಗೆ ಮನೋಬಲ ಹೆಚ್ಚುತ್ತದೆ. ಉತ್ತಮ ಆರೋಗ್ಯಕ್ಕೆ ಮಣ್ಣಿನ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಮಣ್ಣು ರಾಸಾಯನಿಕ ಮುಕ್ತ ಹಾಗೂ ಖುಷಿ ನೀಡುವ ಅಂಶವೂ ಹೌದು’ ಎಂದು ಅಭಿಪ್ರಾಯಪಟ್ಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-24-569325928</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಇಲ್ಲಿನ ಚಿತ್ರಶಂಕರ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಣ್ಣಾಟ’ ಪ್ರಾತ್ಯಕ್ಷಿಕೆ ಹಾಗೂ ಶಿಬಿರವು ಮಕ್ಕಳ ಕಲಿಕೆ, ಉತ್ಸುಕತೆ, ಸೃಜನಶೀಲತೆಗೆ ವೇದಿಕೆಯಾಯಿತು.</p>.<p>ಕಲಾವಿದೆ ಪ್ರತಿಮಾ ದೊಡ್ಡಮನಿ ಅವರು ‘ಮಣ್ಣಾಟ’ದ ನೇತೃತ್ವ ವಹಿಸಿ, ವಿವಿಧ ಕಲಾಕೃತಿಗಳನ್ನು ಮಣ್ಣಿನಲ್ಲಿ ಮೂಡಿಸಿದರು. ನೆರೆದಿದ್ದವರಿಗೂ ಮಣ್ಣಿನ ಮೂರ್ತಿಗಳ ತಯಾರಿಕೆಯನ್ನು ಕಲಿಸಿದರು. ಮಕ್ಕಳು ಖುಷಿಯಿಂದ ಮಣ್ಣಿನ ಆಕೃತಿಗಳನ್ನು ರೂಪಿಸಿದರು.</p>.<p>ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಲಾವಿದ ಈಶ್ವರ ಜೋಶಿ, ‘ಮಣ್ಣೆತ್ತಿನ ಅಮಾಮಾಸ್ಯೆಯು ರೈತರಿಗೆ ಮಹತ್ವದ್ದಾಗಿದೆ. ಸಾಗುವಳಿಯೊಂದಿಗೆ ಅವರೀಗ ಮಣ್ಣಾಟ ಪ್ರಾರಂಭಿಸಿದ್ದಾರೆ.ಇಲ್ಲಿ ಮಕ್ಕಳಿಗಾಗಿ ಮಣ್ಣಾಟ ಆಯೋಜಿಸಲಾಗಿದೆ. ಕಲಾ ವಲಯದಲ್ಲಿ ಇಂತಹ ಬದಲಾವಣೆ ಅವಶ್ಯ’ ಎಂದರು.</p>.<p>‘ಮಣ್ಣಾಟದಲ್ಲಿ ಬುದ್ಧಿ, ಕೈ ಹಾಗೂ ಮನಸ್ಸು ಸಂಗಮವಾಗುತ್ತದೆ. ಏಕಕಾಲಕ್ಕೆ ಮೂರು ಅಂಗಗಳ ಕೆಲಸ ನಡೆಯುತ್ತದೆ. ಚಿತ್ರಕಲಾ ಪಠ್ಯದಲ್ಲಿಯೂ ಮಣ್ಣಿನ ಆಕೃತಿಗಳ ರಚನೆಯ ವಿಷಯವಿದೆ. ಆದರೆ, ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪಾಲಕರು ಸಹ ತಮ್ಮ ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡುತ್ತಿಲ್ಲ’ ಎಂದು ಹೇಳಿದರು.</p>.<p>ಕಲಾವಿದೆ ಪ್ರತಿಮಾ ದೊಡ್ಡಮನಿ ಮಾತನಾಡಿ, ‘ಮಣ್ಣೆಂದರೆ ಎಲ್ಲರಿಗೂ ಇಷ್ಟ. ಆದರೆ, ಆಧುನಿಕ ಕಾಲದಲ್ಲಿ ಗೆಜೆಟ್ಗಳ ಪ್ರಭಾವದಿಂದ ಮಕ್ಕಳಿಗೆ ಮಣ್ಣಿನಲ್ಲಿ ಆಟ ಆಡುವುದೇ ಗೊತ್ತಿಲ್ಲ. ನಮ್ಮ ದೇಹ ರಚನೆ ಆಗಿರುವುದು ಪಂಚ ಭೂತಗಳಿಂದ. ಅದರಲ್ಲಿ ಭೂಮಿತತ್ವವೂ ಒಂದು’ ಎಂದು ತಿಳಿಸಿದರು.</p>.<p>‘ಮಣ್ಣಾಟದಿಂದ ಬುದ್ಧಿ ಚುರುಕಾಗುತ್ತದೆ, ಮೊಬೈಲ್ ಫೋನ್ನಿಂದ ಮಕ್ಕಳನ್ನು ದೂರವಿಡಬಹುದು. ಏಕಾಗ್ರತೆ ಜೊತೆಗೆ ಮನೋಬಲ ಹೆಚ್ಚುತ್ತದೆ. ಉತ್ತಮ ಆರೋಗ್ಯಕ್ಕೆ ಮಣ್ಣಿನ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಮಣ್ಣು ರಾಸಾಯನಿಕ ಮುಕ್ತ ಹಾಗೂ ಖುಷಿ ನೀಡುವ ಅಂಶವೂ ಹೌದು’ ಎಂದು ಅಭಿಪ್ರಾಯಪಟ್ಟರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-24-569325928</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>