<p>ಕಲಬುರಗಿ: ‘ಸಾಮಾಜಿಕ, ಜಾಗತಿಕ ಬೆಳವಣಿಗೆಯಿಂದ, ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಮಕ್ಕಳ ಮನಸ್ಥಿತಿ, ಜನರ ಅಭಿರುಚಿ ಬದಲಾಗಿದೆ. ಕಾರಣ, ಜನರ ಅಭಿರುಚಿಗೆ ತಕ್ಕಂತೆ ಕಲೆಗೆ ಪ್ರೋತ್ಸಾಹ ಕೊಟ್ಟರೆ ಅದು ಬೆಳೆಯಲು ಮತ್ತು ಉಳಿಯಲು ಸಾಧ್ಯವಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಆಶ್ರಯದಲ್ಲಿ ನಡೆದ ‘ಮಕ್ಕಳ ಹಬ್ಬ–2026’ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಮಕ್ಕಳ ರಂಗೋತ್ಸವ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಮನರಂಜನೆ ಜೊತೆಗೆ ಹೊಸ ಕಲೆಗಳನ್ನು ಪರಿಚಯಿಸಲು, ಅವರಲ್ಲಿರುವ ಪ್ರತಿಭೆಗೆ ಸ್ಫೂರ್ತಿ ನೀಡಲು ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂತೋಷ ತರುತ್ತವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಹಿಂದೆ ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬಹಳಷ್ಟು ಕಲೆಗಳು ನಶಿಸಿಹೋಗುತ್ತಿವೆ. ಹಳ್ಳಿಗಳಲ್ಲಿ ಹಾಡುತ್ತಿದ್ದ ಸೋಬಾನ ಪದ, ಹಂತಿಪದ, ಮೊಹರಂ ಪದ ಮಾಯವಾಗುತ್ತಿವೆ. ಮೊಬೈಲ್, ಟಿ.ವಿ ಬಂದಿರುವುದರಿಂದ ನಾಟ್ಯ, ಬಯಲಾಟ ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.</p>.<p>‘ನಾಟ್ಯರಂಗದಿಂದ ಡಾ.ರಾಜ್ಕು ಮಾರ್ ಅವರು ರಾಜ್ಯದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದರು. ಅವರ ಮಕ್ಕಳು ಕೂಡ ದೊಡ್ಡ ನಟರಾಗಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೂ ಪ್ರೋತ್ಸಾಹ ಕೊಟ್ಟರೆ ದೊಡ್ಡ ಕಲಾವಿದರಾಗಿ ಹೊರಹೊಮ್ಮುತ್ತಾರೆ’ ಎಂದರು.</p>.<p>ರಂಗ ಸಮಾಜದ ಸದಸ್ಯ ಡಿಂಗ್ರಿ ನರೇಶ ಮಾತನಾಡಿ, ‘ಕನಕದಾಸರಷ್ಟೇ ಶ್ರೇಷ್ಠ ತತ್ವಪದಕಾರ ಕಡಕೋಳ ಮಡಿವಾಳಪ್ಪ. ಅವರ ಹೆಸರಿನಲ್ಲಿ ಒಂದು ಅಭಿವೃದ್ಧಿ ಕ್ಷೇತ್ರ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗ ಸಾಂಸ್ಕೃತಿಕವಾಗಿ ಮುಂದುವರಿಯಲು ಪ್ರತಿ ಜಿಲ್ಲೆಗೊಂದು ಉತ್ಸವ ಆಗಬೇಕು’ ಎಂದರು.</p>.<p>ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಒಂದು ತಿಂಗಳ ಶಿಬಿರದಲ್ಲಿ ಮಕ್ಕಳು ನೃತ್ಯ, ನಾಟಕ, ಕೋಲಾಟ, ಹಾಡು ಕಲಿತಿದ್ದಾರೆ. ಬಣ್ಣದಾಟ, ಕೆಸರಾಟ ಆಡಿ ನಲಿದಿದ್ದಾರೆ. ಪಕ್ಷಿ ಪ್ರಪಂಚ ತಿಳಿದುಕೊಂಡಿದ್ದಾರೆ’ ಎಂದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಶಿಬಿರದ ನಿರ್ದೇಶಕ ರಾಜಕುಮಾರ ಎಸ್.ಕೆ. ಉಪಸ್ಥಿತರಿದ್ದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂದೆ ಸ್ವಾಗತಿಸಿದರು.</p>.<p>ಭಾನುವಾರ ಸಂಜೆ 4.30ಕ್ಕೆ ಬಯಲಾಟ ಪ್ರಾತ್ಯಕ್ಷಿಕೆ, ನಾಟಕ, ನೃತ್ಯ, ಗಾಯನ, ವಾದ್ಯ ಸಂಗೀತ ಪ್ರದರ್ಶನವಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-34-79375295</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಸಾಮಾಜಿಕ, ಜಾಗತಿಕ ಬೆಳವಣಿಗೆಯಿಂದ, ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಮಕ್ಕಳ ಮನಸ್ಥಿತಿ, ಜನರ ಅಭಿರುಚಿ ಬದಲಾಗಿದೆ. ಕಾರಣ, ಜನರ ಅಭಿರುಚಿಗೆ ತಕ್ಕಂತೆ ಕಲೆಗೆ ಪ್ರೋತ್ಸಾಹ ಕೊಟ್ಟರೆ ಅದು ಬೆಳೆಯಲು ಮತ್ತು ಉಳಿಯಲು ಸಾಧ್ಯವಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಆಶ್ರಯದಲ್ಲಿ ನಡೆದ ‘ಮಕ್ಕಳ ಹಬ್ಬ–2026’ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಮಕ್ಕಳ ರಂಗೋತ್ಸವ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಮನರಂಜನೆ ಜೊತೆಗೆ ಹೊಸ ಕಲೆಗಳನ್ನು ಪರಿಚಯಿಸಲು, ಅವರಲ್ಲಿರುವ ಪ್ರತಿಭೆಗೆ ಸ್ಫೂರ್ತಿ ನೀಡಲು ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂತೋಷ ತರುತ್ತವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಹಿಂದೆ ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬಹಳಷ್ಟು ಕಲೆಗಳು ನಶಿಸಿಹೋಗುತ್ತಿವೆ. ಹಳ್ಳಿಗಳಲ್ಲಿ ಹಾಡುತ್ತಿದ್ದ ಸೋಬಾನ ಪದ, ಹಂತಿಪದ, ಮೊಹರಂ ಪದ ಮಾಯವಾಗುತ್ತಿವೆ. ಮೊಬೈಲ್, ಟಿ.ವಿ ಬಂದಿರುವುದರಿಂದ ನಾಟ್ಯ, ಬಯಲಾಟ ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.</p>.<p>‘ನಾಟ್ಯರಂಗದಿಂದ ಡಾ.ರಾಜ್ಕು ಮಾರ್ ಅವರು ರಾಜ್ಯದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದರು. ಅವರ ಮಕ್ಕಳು ಕೂಡ ದೊಡ್ಡ ನಟರಾಗಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೂ ಪ್ರೋತ್ಸಾಹ ಕೊಟ್ಟರೆ ದೊಡ್ಡ ಕಲಾವಿದರಾಗಿ ಹೊರಹೊಮ್ಮುತ್ತಾರೆ’ ಎಂದರು.</p>.<p>ರಂಗ ಸಮಾಜದ ಸದಸ್ಯ ಡಿಂಗ್ರಿ ನರೇಶ ಮಾತನಾಡಿ, ‘ಕನಕದಾಸರಷ್ಟೇ ಶ್ರೇಷ್ಠ ತತ್ವಪದಕಾರ ಕಡಕೋಳ ಮಡಿವಾಳಪ್ಪ. ಅವರ ಹೆಸರಿನಲ್ಲಿ ಒಂದು ಅಭಿವೃದ್ಧಿ ಕ್ಷೇತ್ರ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗ ಸಾಂಸ್ಕೃತಿಕವಾಗಿ ಮುಂದುವರಿಯಲು ಪ್ರತಿ ಜಿಲ್ಲೆಗೊಂದು ಉತ್ಸವ ಆಗಬೇಕು’ ಎಂದರು.</p>.<p>ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಒಂದು ತಿಂಗಳ ಶಿಬಿರದಲ್ಲಿ ಮಕ್ಕಳು ನೃತ್ಯ, ನಾಟಕ, ಕೋಲಾಟ, ಹಾಡು ಕಲಿತಿದ್ದಾರೆ. ಬಣ್ಣದಾಟ, ಕೆಸರಾಟ ಆಡಿ ನಲಿದಿದ್ದಾರೆ. ಪಕ್ಷಿ ಪ್ರಪಂಚ ತಿಳಿದುಕೊಂಡಿದ್ದಾರೆ’ ಎಂದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಶಿಬಿರದ ನಿರ್ದೇಶಕ ರಾಜಕುಮಾರ ಎಸ್.ಕೆ. ಉಪಸ್ಥಿತರಿದ್ದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂದೆ ಸ್ವಾಗತಿಸಿದರು.</p>.<p>ಭಾನುವಾರ ಸಂಜೆ 4.30ಕ್ಕೆ ಬಯಲಾಟ ಪ್ರಾತ್ಯಕ್ಷಿಕೆ, ನಾಟಕ, ನೃತ್ಯ, ಗಾಯನ, ವಾದ್ಯ ಸಂಗೀತ ಪ್ರದರ್ಶನವಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-34-79375295</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>