<p>ಕಾರವಾರ: ‘ಧಾರ್ಮಿಕ ಸಂಸ್ಥೆಗಳಿಗೆ ಭರಪೂರ ಅನುದಾನ ನೀಡುವ ಸರ್ಕಾರ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಲಾತಂಡಗಳ ಕೈಹಿಡಿಯುತ್ತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.</p>.<p>ತಾಲ್ಲೂಕಿನ ಕೈಗಾದಲ್ಲಿ ಈಚೆಗೆ ಜರುಗಿದ ಸಹ್ಯಾದ್ರಿ ಸಂಭ್ರಮ ಸಾಂಸ್ಕೃತಿಕ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಒಬ್ಬರೊಬ್ಬರನ್ನು ಪ್ರೀತಿಸುವ ಸಹಬಾಳ್ವೆ, ಭಾತೃತ್ವಗಳನ್ನು ಬೆಳೆಸುವ, ಎಲ್ಲರೂ ಕೂಡಿ ಮಾಡುವ ರಚನಾತ್ಮಕ ಸಾಂಸ್ಕೃತಿಕ ಸಂಭ್ರಮಗಳು ನಾಡಿನಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿವೆ’ ಎಂದರು.</p>.<p>ಚಿತ್ರಸಾಹಿತಿ ಬಿ.ರಾಮಮೂರ್ತಿ ಮಾತನಾಡಿ, ‘ಹಣವೊಂದೆ ಜೀವನದಲ್ಲಿ ಮುಖ್ಯವಲ್ಲ ಎಂಬುದನ್ನು ರಾಜ್ಕುಮಾರ್ ಅವರು ಅಭಿನಯಿಸಿದ್ದ ಚಲನಚಿತ್ರಗಳು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಿದ್ದವು’ ಎಂದರು.</p>.<p>ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದ ಸ್ಥಳ ನಿರ್ದೇಶಕ ಬಿ.ವಿನೋದಕುಮಾರ, ‘ಕನ್ನಡಿಗರ ಕ್ರಿಯಾಶೀಲತೆ ಹಾಗೂ ಎಲ್ಲರನ್ನು ಪ್ರೀತಿಸುವ ಗುಣದಿಂದಾಗಿ ದೇಶದ ಅಣು ವಿದ್ಯುತ್ ಕ್ಷೇತ್ರದಲ್ಲಿ ಕೈಗಾವು ಪ್ರಸಿದ್ಧಿಯಾಗಿದೆ’ ಎಂದರು.</p>.<p>ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಬಿ.ಅಡಿಗ ಪ್ರಶಸ್ತಿಯನ್ನು ಕುಸ್ತಿ ತರಬೇತುದಾರ ಪೈಲ್ವಾನ್ ತುಕಾರಾಮ ಮಾತ್ರು ಗೌಡ ಅವರಿಗೆ ನೀಡಲಾಯಿತು.</p>.<p>ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪೋಲಿಸ್ ಬ್ಯಾಂಡ್, ನಾಟಕ, ಯಕ್ಷಗಾನ, ಯಕ್ಷಿಣಿ ಹಾಗೂ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.</p>.<p>ಜಗದೀಶ ಗುನಗಾ, ಶಿವಾನಂದ ರಾಥೋಡ, ಎಸ್.ಜೆ.ತಿಪ್ಪೇಸ್ವಾಮಿ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕುಬೇರಪ್ಪ ಪೂಜಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-20-364233676</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ‘ಧಾರ್ಮಿಕ ಸಂಸ್ಥೆಗಳಿಗೆ ಭರಪೂರ ಅನುದಾನ ನೀಡುವ ಸರ್ಕಾರ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಲಾತಂಡಗಳ ಕೈಹಿಡಿಯುತ್ತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.</p>.<p>ತಾಲ್ಲೂಕಿನ ಕೈಗಾದಲ್ಲಿ ಈಚೆಗೆ ಜರುಗಿದ ಸಹ್ಯಾದ್ರಿ ಸಂಭ್ರಮ ಸಾಂಸ್ಕೃತಿಕ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ಒಬ್ಬರೊಬ್ಬರನ್ನು ಪ್ರೀತಿಸುವ ಸಹಬಾಳ್ವೆ, ಭಾತೃತ್ವಗಳನ್ನು ಬೆಳೆಸುವ, ಎಲ್ಲರೂ ಕೂಡಿ ಮಾಡುವ ರಚನಾತ್ಮಕ ಸಾಂಸ್ಕೃತಿಕ ಸಂಭ್ರಮಗಳು ನಾಡಿನಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿವೆ’ ಎಂದರು.</p>.<p>ಚಿತ್ರಸಾಹಿತಿ ಬಿ.ರಾಮಮೂರ್ತಿ ಮಾತನಾಡಿ, ‘ಹಣವೊಂದೆ ಜೀವನದಲ್ಲಿ ಮುಖ್ಯವಲ್ಲ ಎಂಬುದನ್ನು ರಾಜ್ಕುಮಾರ್ ಅವರು ಅಭಿನಯಿಸಿದ್ದ ಚಲನಚಿತ್ರಗಳು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಿದ್ದವು’ ಎಂದರು.</p>.<p>ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದ ಸ್ಥಳ ನಿರ್ದೇಶಕ ಬಿ.ವಿನೋದಕುಮಾರ, ‘ಕನ್ನಡಿಗರ ಕ್ರಿಯಾಶೀಲತೆ ಹಾಗೂ ಎಲ್ಲರನ್ನು ಪ್ರೀತಿಸುವ ಗುಣದಿಂದಾಗಿ ದೇಶದ ಅಣು ವಿದ್ಯುತ್ ಕ್ಷೇತ್ರದಲ್ಲಿ ಕೈಗಾವು ಪ್ರಸಿದ್ಧಿಯಾಗಿದೆ’ ಎಂದರು.</p>.<p>ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಬಿ.ಅಡಿಗ ಪ್ರಶಸ್ತಿಯನ್ನು ಕುಸ್ತಿ ತರಬೇತುದಾರ ಪೈಲ್ವಾನ್ ತುಕಾರಾಮ ಮಾತ್ರು ಗೌಡ ಅವರಿಗೆ ನೀಡಲಾಯಿತು.</p>.<p>ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪೋಲಿಸ್ ಬ್ಯಾಂಡ್, ನಾಟಕ, ಯಕ್ಷಗಾನ, ಯಕ್ಷಿಣಿ ಹಾಗೂ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.</p>.<p>ಜಗದೀಶ ಗುನಗಾ, ಶಿವಾನಂದ ರಾಥೋಡ, ಎಸ್.ಜೆ.ತಿಪ್ಪೇಸ್ವಾಮಿ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕುಬೇರಪ್ಪ ಪೂಜಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-20-364233676</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>