<p>ಮಂಗಳೂರು: ಗೋವಾದ ವೆರ್ನಾದಲ್ಲಿರುವ ರೆಟ್ಜಿಂಗರ್ ಸಭಾಂಗಣದಲ್ಲಿ ಮೇ 30ರಂದು ಅಖಿಲ ಭಾರತ ಮಟ್ಟದ ಪ್ರಥಮ ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾಸಮ್ಮೇಳನ ಆಯೋಜಿಸಲಾಗಿದೆ.</p>.<p>‘ಕೊಂಕಣಿ ತಾಯಿಯ ಅಪ್ಪುಗೆಯಲ್ಲಿರೋಣ’ ಎಂಬ ಧ್ಯೇಯ ವಾಕ್ಯದೊಡನೆ ಜಾಗತಿಕ ರೋಮಿ ಲಿಪಿ ಅಭಿಯಾನ್ ನೇತೃತ್ವದಲ್ಲಿ ನಡೆಯುವ ಈ ಸಮಾವೇಶವನ್ನು ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ 30ಕ್ಕೂ ಮಿಕ್ಕಿ ಸಂಘಟನೆಗಳ ನೆರವಿನೊಂದಿಗೆ ಆಯೋಜಿಸಲಾಗುತ್ತಿದೆ.</p>.<p>ವಿವಿಧತೆಯಲ್ಲಿ ಏಕತೆ ಎಂಬ ವಿಷಯ ಕುರಿತು ಮೂರು ಸಂವಾದಗಳು ನಡೆಯಲಿವೆ. ಯುವ ಜನತೆಗಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ದಿ.ಎರಿಕ್ ಒಝೇರಿಯೊ ವಿನ್ಯಾಸಗೊಳಿಸಿದ ಕೊಂಕಣಿ ಬಾವುಟವನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲಾಗುವುದು. ಕೊಂಕಣಿ ಗೀತೆ ಲೋಕಾರ್ಪಣೆ ಮಾಡಲಾಗುವುದು.</p>.<p>ಒಂದು ಲಿಪಿ, ಒಂದು ಭಾಷೆ; ಲಾಭವೇನು–ನಷ್ಟವೇನು (ತಾರಾ ಲವೀನಾ ಫೆರ್ನಾಂಡಿಸ್), ಸಾಹಿತ್ಯದಿಂದ ಒಗ್ಗಟ್ಟು (ಅಧ್ಯಕ್ಷತೆ- ರೊಯ್ ಕ್ಯಾಸ್ತೆಲಿನೊ) ಹಾಗೂ ಸಂಸ್ಕೃತಿಯಿಂದ ಒಗ್ಗಟ್ಟು (ಸ್ಟೀಫನ್ ಕ್ವಾಡ್ರಸ್) ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾರ್ಸೆಲ್ ಡಿಸೋಜ, ವಿದ್ಯಾರಂಗ ಮಿತ್ರ ಮಂಡಳಿ ಹಾಗೂ ಪ್ಯಾಟ್ರಿಕ್ ಮೊರಾಸ್ ಅವರನ್ನು ಸನ್ಮಾನಿಸಲಾಗುವುದು.</p>.<p>ಹೊರನಾಡಿನಲ್ಲಿ ಕೊಂಕಣಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮಕ್ಕೆ ನಾಡಿನ ಕೊಂಕಣಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-28-380199991</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಗೋವಾದ ವೆರ್ನಾದಲ್ಲಿರುವ ರೆಟ್ಜಿಂಗರ್ ಸಭಾಂಗಣದಲ್ಲಿ ಮೇ 30ರಂದು ಅಖಿಲ ಭಾರತ ಮಟ್ಟದ ಪ್ರಥಮ ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾಸಮ್ಮೇಳನ ಆಯೋಜಿಸಲಾಗಿದೆ.</p>.<p>‘ಕೊಂಕಣಿ ತಾಯಿಯ ಅಪ್ಪುಗೆಯಲ್ಲಿರೋಣ’ ಎಂಬ ಧ್ಯೇಯ ವಾಕ್ಯದೊಡನೆ ಜಾಗತಿಕ ರೋಮಿ ಲಿಪಿ ಅಭಿಯಾನ್ ನೇತೃತ್ವದಲ್ಲಿ ನಡೆಯುವ ಈ ಸಮಾವೇಶವನ್ನು ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ 30ಕ್ಕೂ ಮಿಕ್ಕಿ ಸಂಘಟನೆಗಳ ನೆರವಿನೊಂದಿಗೆ ಆಯೋಜಿಸಲಾಗುತ್ತಿದೆ.</p>.<p>ವಿವಿಧತೆಯಲ್ಲಿ ಏಕತೆ ಎಂಬ ವಿಷಯ ಕುರಿತು ಮೂರು ಸಂವಾದಗಳು ನಡೆಯಲಿವೆ. ಯುವ ಜನತೆಗಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ದಿ.ಎರಿಕ್ ಒಝೇರಿಯೊ ವಿನ್ಯಾಸಗೊಳಿಸಿದ ಕೊಂಕಣಿ ಬಾವುಟವನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲಾಗುವುದು. ಕೊಂಕಣಿ ಗೀತೆ ಲೋಕಾರ್ಪಣೆ ಮಾಡಲಾಗುವುದು.</p>.<p>ಒಂದು ಲಿಪಿ, ಒಂದು ಭಾಷೆ; ಲಾಭವೇನು–ನಷ್ಟವೇನು (ತಾರಾ ಲವೀನಾ ಫೆರ್ನಾಂಡಿಸ್), ಸಾಹಿತ್ಯದಿಂದ ಒಗ್ಗಟ್ಟು (ಅಧ್ಯಕ್ಷತೆ- ರೊಯ್ ಕ್ಯಾಸ್ತೆಲಿನೊ) ಹಾಗೂ ಸಂಸ್ಕೃತಿಯಿಂದ ಒಗ್ಗಟ್ಟು (ಸ್ಟೀಫನ್ ಕ್ವಾಡ್ರಸ್) ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾರ್ಸೆಲ್ ಡಿಸೋಜ, ವಿದ್ಯಾರಂಗ ಮಿತ್ರ ಮಂಡಳಿ ಹಾಗೂ ಪ್ಯಾಟ್ರಿಕ್ ಮೊರಾಸ್ ಅವರನ್ನು ಸನ್ಮಾನಿಸಲಾಗುವುದು.</p>.<p>ಹೊರನಾಡಿನಲ್ಲಿ ಕೊಂಕಣಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮಕ್ಕೆ ನಾಡಿನ ಕೊಂಕಣಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-28-380199991</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>