<p>ಮಂಗಳೂರು: ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ನಿರ್ಮಿಸಿರುವ ‘ನೈಜ ಹುಲಿ ವೇಷ ಮಾದರಿ’ಯನ್ನು ವನ್ಯಜೀವಿ ತಜ್ಞ ಕೆ. ಉಲ್ಲಾಸ ಕಾರಂತ್ ಸೋಮವಾರ ಉದ್ಘಾಟಿಸಿದರು.</p>.<p>ಈ ‘ನೈಜ ಹುಲಿ ವೇಷ ಮಾದರಿ’ ಹುಲಿ ಮತ್ತು ಚಿರತೆಯನ್ನು ಪ್ರತಿನಿಧಿಸುವ ಎರಡು ಕಲಾಶಿಲ್ಪಗಳನ್ನು ಒಳಗೊಂಡಿದ್ದು, ನೈಜ ದೇಹಬಣ್ಣ, ಹುಲಿ ಪಟ್ಟೆ ಮತ್ತು ಚಿರತೆಯ ರೋಸೆಟ್ನಂತಹ ವಿನ್ಯಾಸ, ತಲೆ ಅಲಂಕಾರ ಮತ್ತು ಬಾಲ ಎಲ್ಲವನ್ನೂ ಒಳಗೊಂಡು ಅವುಗಳ ಪ್ರತಿಬಿಂಬದಂತೆ ಮೂಡಿಬಂದಿದೆ.</p>.<p>ಕಲಾವಿದ ಹರೀಶ್ ಕೊಡಿಯಾಲ್ಬೈಲ್ ಅವರು ಸಿದ್ದಕಟ್ಟೆ ಭೂಷಣ್ ಶೆಟ್ಟಿ ಮತ್ತು ನಾಗರಾಜ್ ಬಜಾಲ್ ಸಹಕಾರದಲ್ಲಿ ಸಾಕಷ್ಟು ಅಧ್ಯಯನ ನಡೆಸಿ ರಚಿಸಿದ್ದಾರೆ. ಯೋಜನೆಯನ್ನು ಕಾರಂತ್ ಅವರು ರೂಪಿಸಿ ಸಂಯೋಜಿಸಿದ್ದು, ತಮ್ಮ ಕ್ಷೇತ್ರಾನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡಿದ್ದಾರೆ.</p>.<p>ಕೊಡಿಯಾಲ್ಗುತ್ತು ಪ್ರದೀಪ್ ಶೆಟ್ಟಿ ಅವರು ಪಿಲಿವೇಷ ವಿದ್ವಾಂಸ ಚಂದ್ರಶೇಖರ ಶೆಟ್ಟಿ ಮತ್ತು ಕೆ.ಕೆ. ಪೇಜಾವರ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ನಂತರ ಕಾರಂತ್ ಅವರೊಂದಿಗೆ ಸಂವಾದ ನಡೆಯಿತು.</p>.<p>‘ಬಾಲ್ಯದಲ್ಲಿ ಹುಲಿ ನೃತ್ಯವನ್ನು ವೀಕ್ಷಿಸಿದ್ದು ಮತ್ತು ಸರ್ಕಸ್ನಲ್ಲಿ ನಿಜವಾದ ಹುಲಿಯನ್ನು ನೋಡಿದ ನಂತರ ಈ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿತು’ ಎಂದು ಕಾರಂತ್ ಹೇಳಿದರು. </p>.<p>1960ರ ದಶಕದ ವೇಳೆಗೆ ಅತಿಯಾದ ಬೇಟೆಯು ಹುಲಿಗಳ ಸಂಖ್ಯೆಯನ್ನು ಅಂಚಿಗೆ ತಂದಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಸಂರಕ್ಷಣಾ ಕ್ರಮಗಳು ಆರಂಭವಾದವು. ಹುಲಿಗಳ ಬಗೆಗಿನ ಅಪಾರ ಆಕರ್ಷಣೆಯಿಂದ ನಾನು ನನ್ನ ಜೀವನವನ್ನು ಅವುಗಳ ವೈಜ್ಞಾನಿಕ ಅಧ್ಯಯನ ಮತ್ತು ಸಂರಕ್ಷಣೆಗೆ ಸಮರ್ಪಿಸಿದ್ದೇನೆ. ಅರಣ್ಯದಲ್ಲಿ ಮೊದಲ ಬಾರಿಗೆ ಹುಲಿಯನ್ನು ಕಾಣಲು 15 ವರ್ಷಗಳ ಕ್ಷೇತ್ರ ಕಾರ್ಯ ಬೇಕಾಯಿತು’ ಎಂದರು.</p>.<p>‘ಹಿಂದೆ ಪಿಲಿವೇಷ ಪ್ರದರ್ಶನವು ಸಾಮಾಜಿಕ ಗೌರವವನ್ನು ಹೊಂದಿ ದ್ದಷ್ಟೇ ಅಲ್ಲ, ಹುಲಿಯ ನೈಜ ವರ್ತನೆಯನ್ನೂ ಪ್ರತಿಬಿಂಬಿಸುತ್ತಿತ್ತು. ಇಂದು ಸಂಬಂಧವಿಲ್ಲದ ಬಣ್ಣಗಳು ಮತ್ತು ವಿನ್ಯಾಸಗಳನ್ನು ಬಳಸಲಾಗುತ್ತಿದ್ದು, ಮೂಲ ಸ್ವರೂಪದಿಂದ ದೂರವಾಗಿದೆ. ಕೇವಲ ಗ್ಲಾಮರ್, ವ್ಯಾನಿಟಿ ಪ್ರದರ್ಶನದ ಸಾಧನವಾಗುತ್ತಿರುವ ಪಿಲಿವೇಷವು ಮಕ್ಕಳನ್ನು ಆಕರ್ಷಿಸುವುದರಿಂದ ವಯಸ್ಕರನ್ನು ಮೆಚ್ಚಿಸುವತ್ತ ದಿಕ್ಕಿಗೆ ತಿರುಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರತಿಭಾ ಕಾರಂತ್ ಸ್ವಾಗತಿಸಿದರು. ನೇಮಿರಾಜ್ ಶೆಟ್ಟಿ ವಂದಿಸಿದರು. ಇಂಟ್ಯಾಕ್ನ ಮಂಗಳೂರು ಅಧ್ಯಾಯವು ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಕಾರ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-29-814201022</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ನಿರ್ಮಿಸಿರುವ ‘ನೈಜ ಹುಲಿ ವೇಷ ಮಾದರಿ’ಯನ್ನು ವನ್ಯಜೀವಿ ತಜ್ಞ ಕೆ. ಉಲ್ಲಾಸ ಕಾರಂತ್ ಸೋಮವಾರ ಉದ್ಘಾಟಿಸಿದರು.</p>.<p>ಈ ‘ನೈಜ ಹುಲಿ ವೇಷ ಮಾದರಿ’ ಹುಲಿ ಮತ್ತು ಚಿರತೆಯನ್ನು ಪ್ರತಿನಿಧಿಸುವ ಎರಡು ಕಲಾಶಿಲ್ಪಗಳನ್ನು ಒಳಗೊಂಡಿದ್ದು, ನೈಜ ದೇಹಬಣ್ಣ, ಹುಲಿ ಪಟ್ಟೆ ಮತ್ತು ಚಿರತೆಯ ರೋಸೆಟ್ನಂತಹ ವಿನ್ಯಾಸ, ತಲೆ ಅಲಂಕಾರ ಮತ್ತು ಬಾಲ ಎಲ್ಲವನ್ನೂ ಒಳಗೊಂಡು ಅವುಗಳ ಪ್ರತಿಬಿಂಬದಂತೆ ಮೂಡಿಬಂದಿದೆ.</p>.<p>ಕಲಾವಿದ ಹರೀಶ್ ಕೊಡಿಯಾಲ್ಬೈಲ್ ಅವರು ಸಿದ್ದಕಟ್ಟೆ ಭೂಷಣ್ ಶೆಟ್ಟಿ ಮತ್ತು ನಾಗರಾಜ್ ಬಜಾಲ್ ಸಹಕಾರದಲ್ಲಿ ಸಾಕಷ್ಟು ಅಧ್ಯಯನ ನಡೆಸಿ ರಚಿಸಿದ್ದಾರೆ. ಯೋಜನೆಯನ್ನು ಕಾರಂತ್ ಅವರು ರೂಪಿಸಿ ಸಂಯೋಜಿಸಿದ್ದು, ತಮ್ಮ ಕ್ಷೇತ್ರಾನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡಿದ್ದಾರೆ.</p>.<p>ಕೊಡಿಯಾಲ್ಗುತ್ತು ಪ್ರದೀಪ್ ಶೆಟ್ಟಿ ಅವರು ಪಿಲಿವೇಷ ವಿದ್ವಾಂಸ ಚಂದ್ರಶೇಖರ ಶೆಟ್ಟಿ ಮತ್ತು ಕೆ.ಕೆ. ಪೇಜಾವರ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ನಂತರ ಕಾರಂತ್ ಅವರೊಂದಿಗೆ ಸಂವಾದ ನಡೆಯಿತು.</p>.<p>‘ಬಾಲ್ಯದಲ್ಲಿ ಹುಲಿ ನೃತ್ಯವನ್ನು ವೀಕ್ಷಿಸಿದ್ದು ಮತ್ತು ಸರ್ಕಸ್ನಲ್ಲಿ ನಿಜವಾದ ಹುಲಿಯನ್ನು ನೋಡಿದ ನಂತರ ಈ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿತು’ ಎಂದು ಕಾರಂತ್ ಹೇಳಿದರು. </p>.<p>1960ರ ದಶಕದ ವೇಳೆಗೆ ಅತಿಯಾದ ಬೇಟೆಯು ಹುಲಿಗಳ ಸಂಖ್ಯೆಯನ್ನು ಅಂಚಿಗೆ ತಂದಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಸಂರಕ್ಷಣಾ ಕ್ರಮಗಳು ಆರಂಭವಾದವು. ಹುಲಿಗಳ ಬಗೆಗಿನ ಅಪಾರ ಆಕರ್ಷಣೆಯಿಂದ ನಾನು ನನ್ನ ಜೀವನವನ್ನು ಅವುಗಳ ವೈಜ್ಞಾನಿಕ ಅಧ್ಯಯನ ಮತ್ತು ಸಂರಕ್ಷಣೆಗೆ ಸಮರ್ಪಿಸಿದ್ದೇನೆ. ಅರಣ್ಯದಲ್ಲಿ ಮೊದಲ ಬಾರಿಗೆ ಹುಲಿಯನ್ನು ಕಾಣಲು 15 ವರ್ಷಗಳ ಕ್ಷೇತ್ರ ಕಾರ್ಯ ಬೇಕಾಯಿತು’ ಎಂದರು.</p>.<p>‘ಹಿಂದೆ ಪಿಲಿವೇಷ ಪ್ರದರ್ಶನವು ಸಾಮಾಜಿಕ ಗೌರವವನ್ನು ಹೊಂದಿ ದ್ದಷ್ಟೇ ಅಲ್ಲ, ಹುಲಿಯ ನೈಜ ವರ್ತನೆಯನ್ನೂ ಪ್ರತಿಬಿಂಬಿಸುತ್ತಿತ್ತು. ಇಂದು ಸಂಬಂಧವಿಲ್ಲದ ಬಣ್ಣಗಳು ಮತ್ತು ವಿನ್ಯಾಸಗಳನ್ನು ಬಳಸಲಾಗುತ್ತಿದ್ದು, ಮೂಲ ಸ್ವರೂಪದಿಂದ ದೂರವಾಗಿದೆ. ಕೇವಲ ಗ್ಲಾಮರ್, ವ್ಯಾನಿಟಿ ಪ್ರದರ್ಶನದ ಸಾಧನವಾಗುತ್ತಿರುವ ಪಿಲಿವೇಷವು ಮಕ್ಕಳನ್ನು ಆಕರ್ಷಿಸುವುದರಿಂದ ವಯಸ್ಕರನ್ನು ಮೆಚ್ಚಿಸುವತ್ತ ದಿಕ್ಕಿಗೆ ತಿರುಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಪ್ರತಿಭಾ ಕಾರಂತ್ ಸ್ವಾಗತಿಸಿದರು. ನೇಮಿರಾಜ್ ಶೆಟ್ಟಿ ವಂದಿಸಿದರು. ಇಂಟ್ಯಾಕ್ನ ಮಂಗಳೂರು ಅಧ್ಯಾಯವು ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಕಾರ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-29-814201022</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>