<p>ಮೇಲುಕೋಟೆ: ರಾಮಾನುಜಾಚಾರ್ಯರ 1009ನೇ ತಿರು ನಕ್ಷತ್ರ ಮಹೋತ್ಸವ ಅಂಗವಾಗಿ ಗುರುವಾರ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.</p>.<p>ಏ.13ರಿಂದಲೇ ಆರಂಭವಾಗಿರುವ 10 ದಿನಗಳ ಮಹೋತ್ಸವದಲ್ಲಿ ಪ್ರತಿನಿತ್ಯ ರಾಮಾನುಜಾಚಾರ್ಯರ ಮೂರ್ತಿಗೆ ವೈವಿಧ್ಯಮಯ ಅಲಂಕಾರಗಳು ನಡೆಯುತ್ತಿದ್ದು, ಬುಧವಾರ ರಾತ್ರಿ ಸೂರ್ಯಮಂಡಲ ವಾಹನೋತ್ಸವ ಜರುಗಿತು. ಗುರುವಾರ ಮುಂಜಾನೆ ಚಂದ್ರಮಂಡಲ ವಾಹನೋತ್ಸವ, ರಾತ್ರಿ ಬಂಗಾರ ಪಲ್ಲಕ್ಕಿ ಉತ್ಸವ ರಾಜಬೀದಿಯಲ್ಲಿ ವೈಭವದಿಂದ ಜರುಗಿತು.</p>.<p>ಚಲುವನಾರಾಯಣ ಸ್ವಾಮಿ ದೇವಾಲಯದ ಕೈಂಕರ್ಯಗಳು 10 ದಿವಸವೂ ಬೆಳಿಗ್ಗೆ 5.30ಕ್ಕೆ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 8ಕ್ಕೆ ವಿವಿಧ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವಿಧಿಯಲ್ಲಿ ನಡೆಯುತ್ತಿದೆ. ವಾಹನೋತ್ಸವ ಮಂಟಪದಲ್ಲಿ ತಿರುವಾರಾಧನೆ ಮತ್ತು ಗೋಷ್ಠಿ ನಡೆಯುತ್ತಿದೆ.</p>.<p>ರಾಮಾನುಜಾಚಾರ್ಯರ ಮಹಾರಥೋತ್ಸವ ಏ.21ರಂದು ನಡೆಯಲಿದ್ದು, 22ರಂದು ತಿರುನಕ್ಷತ್ರ ಮಹೋತ್ಸವ ನಡೆಯಲಿದೆ. 17ರಂದು ಅಶ್ವವಾಹನೋತ್ಸವ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 18ರಂದು ಶ್ರೀಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದ ರಾಜಮುಡಿ ಉತ್ಸವ ನಡೆಯಲಿದೆ.</p>.<p>19ರಂದು ಅಶ್ವವಾಹನೋತ್ಸವ, 20ರಂದು ಗಜವಾಹನೋತ್ಸವ ನಡೆಯಲಿದೆ. 22ರಂದು ಮಧ್ಯಾಹ್ನ 10ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ಸಂಜೆ ಶ್ರೀಗಂಧದ ಅಲಂಕಾರ, ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಅಲಂಕಾರ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-40-551169796</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೇಲುಕೋಟೆ: ರಾಮಾನುಜಾಚಾರ್ಯರ 1009ನೇ ತಿರು ನಕ್ಷತ್ರ ಮಹೋತ್ಸವ ಅಂಗವಾಗಿ ಗುರುವಾರ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.</p>.<p>ಏ.13ರಿಂದಲೇ ಆರಂಭವಾಗಿರುವ 10 ದಿನಗಳ ಮಹೋತ್ಸವದಲ್ಲಿ ಪ್ರತಿನಿತ್ಯ ರಾಮಾನುಜಾಚಾರ್ಯರ ಮೂರ್ತಿಗೆ ವೈವಿಧ್ಯಮಯ ಅಲಂಕಾರಗಳು ನಡೆಯುತ್ತಿದ್ದು, ಬುಧವಾರ ರಾತ್ರಿ ಸೂರ್ಯಮಂಡಲ ವಾಹನೋತ್ಸವ ಜರುಗಿತು. ಗುರುವಾರ ಮುಂಜಾನೆ ಚಂದ್ರಮಂಡಲ ವಾಹನೋತ್ಸವ, ರಾತ್ರಿ ಬಂಗಾರ ಪಲ್ಲಕ್ಕಿ ಉತ್ಸವ ರಾಜಬೀದಿಯಲ್ಲಿ ವೈಭವದಿಂದ ಜರುಗಿತು.</p>.<p>ಚಲುವನಾರಾಯಣ ಸ್ವಾಮಿ ದೇವಾಲಯದ ಕೈಂಕರ್ಯಗಳು 10 ದಿವಸವೂ ಬೆಳಿಗ್ಗೆ 5.30ಕ್ಕೆ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 8ಕ್ಕೆ ವಿವಿಧ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವಿಧಿಯಲ್ಲಿ ನಡೆಯುತ್ತಿದೆ. ವಾಹನೋತ್ಸವ ಮಂಟಪದಲ್ಲಿ ತಿರುವಾರಾಧನೆ ಮತ್ತು ಗೋಷ್ಠಿ ನಡೆಯುತ್ತಿದೆ.</p>.<p>ರಾಮಾನುಜಾಚಾರ್ಯರ ಮಹಾರಥೋತ್ಸವ ಏ.21ರಂದು ನಡೆಯಲಿದ್ದು, 22ರಂದು ತಿರುನಕ್ಷತ್ರ ಮಹೋತ್ಸವ ನಡೆಯಲಿದೆ. 17ರಂದು ಅಶ್ವವಾಹನೋತ್ಸವ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 18ರಂದು ಶ್ರೀಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದ ರಾಜಮುಡಿ ಉತ್ಸವ ನಡೆಯಲಿದೆ.</p>.<p>19ರಂದು ಅಶ್ವವಾಹನೋತ್ಸವ, 20ರಂದು ಗಜವಾಹನೋತ್ಸವ ನಡೆಯಲಿದೆ. 22ರಂದು ಮಧ್ಯಾಹ್ನ 10ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ಸಂಜೆ ಶ್ರೀಗಂಧದ ಅಲಂಕಾರ, ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಅಲಂಕಾರ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-40-551169796</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>