<p>ಮುದ್ದೇಬಿಹಾಳ: ‘ಕಾವ್ಯ ರಚಿಸುವವರಿಗಿಂತಲೂ ಕಾವ್ಯವನ್ನು ಓದುವವರಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.</p>.<p>ಅವರು ಪಟ್ಟಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಭೋಜರಾಜ ಬಿರಾದಾರ ಸಂಸ್ಮರಣೆ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕನ್ನಡ ಸಾಹಿತ್ಯವನ್ನು ಮಹಾನ ವ್ಯಕ್ತಿಗಳು ಆರಂಭಿಸಿದ್ದಾರೆ. ಅಂತಹ ಸಾಹಿತ್ಯವನ್ನು ನಾವು ನೀವೆಲ್ಲರೂ ಉಳಿಸಿ, ಬೆಳೆಸುವ ಕೆಲಸ ಮಾಡೋಣ, ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ನಿಧಿ ಕಾರ್ಯಕ್ರಮ ಹೆಚ್ಚಾಗಿ ನಡೆಯಲಿ’ ಎಂದರು.</p>.<p>ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಉಪನ್ಯಾಸವನ್ನು ನೀಡಿ, ‘ಅವತ್ತು ಕನ್ನಡ ಸಾಹಿತ್ಯ ಪರಿಷತ್ತು ನಾಲ್ಕು ಜನರಿಂದ ಆರಂಭವಾಗಿ ಇವತ್ತು ಮೂರು ಲಕ್ಷಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಅಂತಹ ಪರಿಷತ್ತಿನಿಂದ ಈ ದತ್ತಿ ಹಮ್ಮಿಕೊಂಡಿದ್ದಾರೆ. ಈ ದತ್ತಿ ಕಾರ್ಯಕ್ರಮ ಸ್ವಾತಂತ್ರ್ಯ ಕಾಲದಲ್ಲಿ ಇದ್ದ ಪ್ರಮುಖರ ಸ್ಮರಣೆಯಾಗಿದೆ. ಇವತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದ್ಭುತ ಕಲಾವಿದರು ಇದ್ದಾರೆ. ನಾಟಿ ವೈದ್ಯರು ಇದ್ದಾರೆ ಅಂತವರನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ’ ಎಂದರು.</p>.<p>ಬಾಪುಗೌಡ ಪಾಟೀಲ, ಲಿಂಗೈಕ್ಯರ ಜೊತೆಯಲ್ಲಿನ ಒಡನಾಟ ಅವರ ಕಾರ್ಯ ವೈಖರಿ ಕುರಿತು ಮಾತನಾಡಿದರು.</p>.<p>ಶ್ರೀಶೈಲ ಎಸ್.ಕೆ ದತ್ತಿದಾನಿಗಳ ಪರಿಚಯ ಮಾಡಿದರು. ಚನ್ನಬಸಪ್ಪ ಬಿರಾದಾರ, ಬಸಪ್ಪ ಅಡಿವೆಪ್ಪ ಚೌಧರಿ, ಸಂಗನಬಸಮ್ಮ ಚೌಧರಿ, ಬಸಮ್ಮ ಶ್ರೀಶೈಲ ಗಂಗನಳ್ಳಿ, ಇವರ ದತ್ತಿ ಸ್ಮರಣೆ ಜರುಗಿತು.</p>.<p>ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಚಿಂತಕ ಅಬ್ದುಲ್ ರೆಹಮಾನ್ ಬಿದರಕುಂದಿ, ಚಂದ್ರಶೇಖರ ನಾಗರಾಳ ಮಾತನಾಡಿದರು. ವೈ.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರಿಗೆ, ನೂತನ ಕರ್ನಾಟಕ ಬ್ಯಾಂಕ್ ಅಧ್ಯಕ್ಷರಿಗೆ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಿಗೆ ಗೌರವ ಸನ್ಮಾನ ನೆರವೇರಿಸಿದರು.</p>.<p>ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಪ್ರಭುರಾಜ ಕಲಬುರಗಿ, ಸಂಗಮೇಶ ಶಿವಣಗಿ, ಎಂ.ಬಿ.ಗುಡಗುಂಟಿ, ಜೆ.ಡಿ.ಮುಲ್ಲಾ, ಸಿದ್ದನಗೌಡ ಬಿಜ್ಜೂರ, ಎಸ್.ಎ.ಬೇವಿನಗಿಡದ, ಅಶೋಕ ಮನಿ, ಉದಯ ರಾಯಚೂರು, ಶ್ರೀಶೈಲ ಪೂಜಾರಿ, ಸದಾಶಿವ ಮಠ, ಸಂಗಪ್ಪ ಮೇಲಿನಮನಿ, ಹುಸೇನ ಮುಲ್ಲಾ, ಹುಲಗೇಶ ಈಳಗೇರ ಸೇರಿದಂತೆ ಮಹಿಳೆಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-26-1894627026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದ್ದೇಬಿಹಾಳ: ‘ಕಾವ್ಯ ರಚಿಸುವವರಿಗಿಂತಲೂ ಕಾವ್ಯವನ್ನು ಓದುವವರಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.</p>.<p>ಅವರು ಪಟ್ಟಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಭೋಜರಾಜ ಬಿರಾದಾರ ಸಂಸ್ಮರಣೆ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕನ್ನಡ ಸಾಹಿತ್ಯವನ್ನು ಮಹಾನ ವ್ಯಕ್ತಿಗಳು ಆರಂಭಿಸಿದ್ದಾರೆ. ಅಂತಹ ಸಾಹಿತ್ಯವನ್ನು ನಾವು ನೀವೆಲ್ಲರೂ ಉಳಿಸಿ, ಬೆಳೆಸುವ ಕೆಲಸ ಮಾಡೋಣ, ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ನಿಧಿ ಕಾರ್ಯಕ್ರಮ ಹೆಚ್ಚಾಗಿ ನಡೆಯಲಿ’ ಎಂದರು.</p>.<p>ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಉಪನ್ಯಾಸವನ್ನು ನೀಡಿ, ‘ಅವತ್ತು ಕನ್ನಡ ಸಾಹಿತ್ಯ ಪರಿಷತ್ತು ನಾಲ್ಕು ಜನರಿಂದ ಆರಂಭವಾಗಿ ಇವತ್ತು ಮೂರು ಲಕ್ಷಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಅಂತಹ ಪರಿಷತ್ತಿನಿಂದ ಈ ದತ್ತಿ ಹಮ್ಮಿಕೊಂಡಿದ್ದಾರೆ. ಈ ದತ್ತಿ ಕಾರ್ಯಕ್ರಮ ಸ್ವಾತಂತ್ರ್ಯ ಕಾಲದಲ್ಲಿ ಇದ್ದ ಪ್ರಮುಖರ ಸ್ಮರಣೆಯಾಗಿದೆ. ಇವತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದ್ಭುತ ಕಲಾವಿದರು ಇದ್ದಾರೆ. ನಾಟಿ ವೈದ್ಯರು ಇದ್ದಾರೆ ಅಂತವರನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ’ ಎಂದರು.</p>.<p>ಬಾಪುಗೌಡ ಪಾಟೀಲ, ಲಿಂಗೈಕ್ಯರ ಜೊತೆಯಲ್ಲಿನ ಒಡನಾಟ ಅವರ ಕಾರ್ಯ ವೈಖರಿ ಕುರಿತು ಮಾತನಾಡಿದರು.</p>.<p>ಶ್ರೀಶೈಲ ಎಸ್.ಕೆ ದತ್ತಿದಾನಿಗಳ ಪರಿಚಯ ಮಾಡಿದರು. ಚನ್ನಬಸಪ್ಪ ಬಿರಾದಾರ, ಬಸಪ್ಪ ಅಡಿವೆಪ್ಪ ಚೌಧರಿ, ಸಂಗನಬಸಮ್ಮ ಚೌಧರಿ, ಬಸಮ್ಮ ಶ್ರೀಶೈಲ ಗಂಗನಳ್ಳಿ, ಇವರ ದತ್ತಿ ಸ್ಮರಣೆ ಜರುಗಿತು.</p>.<p>ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಚಿಂತಕ ಅಬ್ದುಲ್ ರೆಹಮಾನ್ ಬಿದರಕುಂದಿ, ಚಂದ್ರಶೇಖರ ನಾಗರಾಳ ಮಾತನಾಡಿದರು. ವೈ.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರಿಗೆ, ನೂತನ ಕರ್ನಾಟಕ ಬ್ಯಾಂಕ್ ಅಧ್ಯಕ್ಷರಿಗೆ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಿಗೆ ಗೌರವ ಸನ್ಮಾನ ನೆರವೇರಿಸಿದರು.</p>.<p>ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಪ್ರಭುರಾಜ ಕಲಬುರಗಿ, ಸಂಗಮೇಶ ಶಿವಣಗಿ, ಎಂ.ಬಿ.ಗುಡಗುಂಟಿ, ಜೆ.ಡಿ.ಮುಲ್ಲಾ, ಸಿದ್ದನಗೌಡ ಬಿಜ್ಜೂರ, ಎಸ್.ಎ.ಬೇವಿನಗಿಡದ, ಅಶೋಕ ಮನಿ, ಉದಯ ರಾಯಚೂರು, ಶ್ರೀಶೈಲ ಪೂಜಾರಿ, ಸದಾಶಿವ ಮಠ, ಸಂಗಪ್ಪ ಮೇಲಿನಮನಿ, ಹುಸೇನ ಮುಲ್ಲಾ, ಹುಲಗೇಶ ಈಳಗೇರ ಸೇರಿದಂತೆ ಮಹಿಳೆಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-26-1894627026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>