<p><strong>ಸಾಗರ:</strong> ಗಮಕ ಕಲೆಯನ್ನು ಪ್ರಸ್ತುತಪಡಿಸುವ ಗಮಕಿಗಳಲ್ಲಿ ಶಿಸ್ತುಬದ್ಧ ನಡವಳಿಕೆ ಇದ್ದಾಗ ಮಾತ್ರ ಕಲೆಯ ಮೌಲ್ಯ ಹೆಚ್ಚುತ್ತದೆ ಎಂದು ಗಮಕಿ ರಾಜಾರಾಮಮೂರ್ತಿ ಹೊಸಹಳ್ಳಿ ಹೇಳಿದರು.</p>.<p>ಸಮೀಪದ ವರದ ಪುರದ ಶ್ರೀಧರಾಶ್ರಮದಲ್ಲಿ ಮಲೆನಾಡು ಗಮಕ ಕಲಾ ಟ್ರಸ್ಟ್, ಶ್ರೀಧರ ಸೇವಾ ಮಹಾಮಂಡಲ ಭಾನುವಾರ ಏರ್ಪಡಿಸಿದ್ದ ಸಾಗರ ಪ್ರಾಂತ್ಯ ಪ್ರಥಮ ಗಮಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಕಾವ್ಯ ರಚನೆ ಆರಂಭವಾದಾಗಿನಿಂದಲೇ ಗಮಕ ಕಲೆ ಚಾಲ್ತಿಯಲ್ಲಿದೆ ಎಂಬ ಸಂಗತಿಯ ಉಲ್ಲೇಖ ವಾಲ್ಮೀಖಿ ರಾಮಾಯಣದಲ್ಲಿದೆ. ರಾಮಾಯಣ, ಮಹಾಭಾರತ ಸೇರಿದಂತೆ ಪ್ರಾಚೀನ ಕಾವ್ಯವನ್ನು ಎಲ್ಲಾ ವರ್ಗದವರಿಗೆ ತಲುಪಿಸುವಲ್ಲಿ ಗಮಕ ಕಲೆಯ ಪಾತ್ರ ಪ್ರಮುಖವಾಗಿದೆ ಎಂದರು.</p>.<p>ಗಮಕ ಕಲೆಗೆ ವಿದ್ವತ್ನ ಸ್ಪರ್ಶ ಇರಲೇಬೇಕು. ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿದ ನಂತರವಷ್ಟೆ ಗಮಕಿಗಳು ಗಾಯನ, ವ್ಯಾಖ್ಯಾನಕ್ಕೆ ಮುಂದಾಗಬೇಕು. ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಕಲಾವಿದರು ರಾಗಗಳನ್ನು ಕ್ರಮಬದ್ಧವಾಗಿ ಪ್ರಸ್ತುತಪಡಿಸುವ ಮಾದರಿಯನ್ನು ಗಮಕಿಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಗಮಕ ಕಲೆಯ ಪ್ರಸ್ತುತಿಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಇರುವುದು ಸ್ಪಷ್ಟವಾಗಿದೆ. ಈ ಕಲಾ ಪ್ರಕಾರದ ಮೌಲ್ಯವನ್ನು ಹೆಚ್ಚಿಸುವ ಹಾಗೂ ಹೊಸ ತಲೆಮಾರಿಗೆ ಇದನ್ನು ದಾಟಿಸುವ ನಿಟ್ಟಿನಲ್ಲಿ ಗಮಕ ಕಲೆಯನ್ನು ಕಲಿಸುವ ಶಿಕ್ಷಣ ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.</p>.<p>ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಲೇಖಕ ಡಾ.ಎಚ್.ಎಸ್.ಮೋಹನ್ ಇದ್ದರು. ಭಾರತಿ ಹೆಗಡೆ ಮತ್ತು ಸಂಗಡಿಗರು ಗಮಕ ಪದ್ಯಗಳನ್ನು ಪ್ರಸ್ತುತಪಡಿಸಿದರು.</p>.<p>ಕೆ.ಎಂ.ರವೀಂದ್ರ ಸ್ವಾಗತಿಸಿದರು. ಬಿ.ಟಿ.ಅರುಣ ವಂದಿಸಿದರು.</p>.<p>ಯೋಗೀಶ್ ಜಿ., ವಸುಮತಿ ಗೌಡ ನಿರೂಪಿಸಿದರು. ವಿವಿಧ ಗೋಷ್ಠಿಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-42-933958497</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಗಮಕ ಕಲೆಯನ್ನು ಪ್ರಸ್ತುತಪಡಿಸುವ ಗಮಕಿಗಳಲ್ಲಿ ಶಿಸ್ತುಬದ್ಧ ನಡವಳಿಕೆ ಇದ್ದಾಗ ಮಾತ್ರ ಕಲೆಯ ಮೌಲ್ಯ ಹೆಚ್ಚುತ್ತದೆ ಎಂದು ಗಮಕಿ ರಾಜಾರಾಮಮೂರ್ತಿ ಹೊಸಹಳ್ಳಿ ಹೇಳಿದರು.</p>.<p>ಸಮೀಪದ ವರದ ಪುರದ ಶ್ರೀಧರಾಶ್ರಮದಲ್ಲಿ ಮಲೆನಾಡು ಗಮಕ ಕಲಾ ಟ್ರಸ್ಟ್, ಶ್ರೀಧರ ಸೇವಾ ಮಹಾಮಂಡಲ ಭಾನುವಾರ ಏರ್ಪಡಿಸಿದ್ದ ಸಾಗರ ಪ್ರಾಂತ್ಯ ಪ್ರಥಮ ಗಮಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಕಾವ್ಯ ರಚನೆ ಆರಂಭವಾದಾಗಿನಿಂದಲೇ ಗಮಕ ಕಲೆ ಚಾಲ್ತಿಯಲ್ಲಿದೆ ಎಂಬ ಸಂಗತಿಯ ಉಲ್ಲೇಖ ವಾಲ್ಮೀಖಿ ರಾಮಾಯಣದಲ್ಲಿದೆ. ರಾಮಾಯಣ, ಮಹಾಭಾರತ ಸೇರಿದಂತೆ ಪ್ರಾಚೀನ ಕಾವ್ಯವನ್ನು ಎಲ್ಲಾ ವರ್ಗದವರಿಗೆ ತಲುಪಿಸುವಲ್ಲಿ ಗಮಕ ಕಲೆಯ ಪಾತ್ರ ಪ್ರಮುಖವಾಗಿದೆ ಎಂದರು.</p>.<p>ಗಮಕ ಕಲೆಗೆ ವಿದ್ವತ್ನ ಸ್ಪರ್ಶ ಇರಲೇಬೇಕು. ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿದ ನಂತರವಷ್ಟೆ ಗಮಕಿಗಳು ಗಾಯನ, ವ್ಯಾಖ್ಯಾನಕ್ಕೆ ಮುಂದಾಗಬೇಕು. ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಕಲಾವಿದರು ರಾಗಗಳನ್ನು ಕ್ರಮಬದ್ಧವಾಗಿ ಪ್ರಸ್ತುತಪಡಿಸುವ ಮಾದರಿಯನ್ನು ಗಮಕಿಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಗಮಕ ಕಲೆಯ ಪ್ರಸ್ತುತಿಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಇರುವುದು ಸ್ಪಷ್ಟವಾಗಿದೆ. ಈ ಕಲಾ ಪ್ರಕಾರದ ಮೌಲ್ಯವನ್ನು ಹೆಚ್ಚಿಸುವ ಹಾಗೂ ಹೊಸ ತಲೆಮಾರಿಗೆ ಇದನ್ನು ದಾಟಿಸುವ ನಿಟ್ಟಿನಲ್ಲಿ ಗಮಕ ಕಲೆಯನ್ನು ಕಲಿಸುವ ಶಿಕ್ಷಣ ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.</p>.<p>ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಲೇಖಕ ಡಾ.ಎಚ್.ಎಸ್.ಮೋಹನ್ ಇದ್ದರು. ಭಾರತಿ ಹೆಗಡೆ ಮತ್ತು ಸಂಗಡಿಗರು ಗಮಕ ಪದ್ಯಗಳನ್ನು ಪ್ರಸ್ತುತಪಡಿಸಿದರು.</p>.<p>ಕೆ.ಎಂ.ರವೀಂದ್ರ ಸ್ವಾಗತಿಸಿದರು. ಬಿ.ಟಿ.ಅರುಣ ವಂದಿಸಿದರು.</p>.<p>ಯೋಗೀಶ್ ಜಿ., ವಸುಮತಿ ಗೌಡ ನಿರೂಪಿಸಿದರು. ವಿವಿಧ ಗೋಷ್ಠಿಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-42-933958497</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>