<p>ಯಲ್ಲಾಪುರ: ಬೇಂದ್ರೆ, ಕುವೆಂಪು ಮೊದಲಾದವರ ಕವಿತೆಗಳು ಅನಂತ ಅರ್ಥ ವಿಸ್ತಾರ ಹೊಂದಿದ್ದು , ಅವು ಮರು ಓದಿನಲ್ಲಿ ಬೇರೆಯದೇ ಆದ ಅರ್ಥಸಾಧ್ಯತೆ ಸ್ಪುರಿಸುತ್ತವೆ. ಪ್ರತಿಯೊಬ್ಬ ಓದುಗನೂ ತನ್ನದೇ ಆದ ಭಿನ್ನ ಅಥ೯ಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಅಭಿಪ್ರಾಯಪಟ್ಟರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪಟ್ಟಣದ ಟಿಎಂಎಸ್ ಸಭಾಭನವನದಲ್ಲಿ ಭಾನುವಾರ ಆಯೋಜಿಸಿದ್ದ ಗೀತ ಗಾಯನ ವ್ಯಾಖ್ಯಾನ ಕಾಯ೯ಕ್ರಮ ಅಕ್ಷರದೊಳಗಣ ಅಕ್ಷರದಲ್ಲಿ ಅವರು ಕನ್ನಡದ ಹಿರಿಯ ಕವಿತೆಗಳನ್ನು ವ್ಯಾಖ್ಯಾನಿಸಿದರು.</p>.<p>ಬೇಂದ್ರೆ, ಕುವೆಂಪು ಅವರ ಕವಿತೆಗಳಲ್ಲಿ ದೈವಿಕತೆ, ಅನುಭಾವ ಇದೆ. ಆಧ್ಯಾತ್ಮಿಕತೆ ಇದೆ. ಅವರ ಕವಿತೆಗಳು ಸಾವ೯ಕಾಲಿಕವಾದ ಕವಿತೆಗಳು ಎಂದರು.</p>.<p>ಮೇಘಾ ಎಸ್ ಭಟ್ಟ ಗುಳ್ಳಾಪುರ, ಹರ್ಷಿತಾ ಕೆ.ಭಟ್ ಕೋನಾಳ, ದಿಗಂತ ಭಟ್ಟ ಲಾಲ್ಗುಳಿ ಹಾಗೂ ರಾಜೀವ ತೇಲಂಗಾರ ಗೀತ ಗಾಯನ ನಡೆಸಿಕೊಟ್ಟರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಸಹ ಕಾಯ೯ದಶಿ೯ ಪುಷ್ಪಾ ಮಾಳಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಸುಜಾತಾ ಕಾಗಾರಕೊಡ್ಲು ನಿವ೯ಹಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಗಾಂವ್ಕರ, ಪ್ರಮುಖರಾದ ಮಮತಾ ಪ್ರಕಾಶ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-20-718895701</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲ್ಲಾಪುರ: ಬೇಂದ್ರೆ, ಕುವೆಂಪು ಮೊದಲಾದವರ ಕವಿತೆಗಳು ಅನಂತ ಅರ್ಥ ವಿಸ್ತಾರ ಹೊಂದಿದ್ದು , ಅವು ಮರು ಓದಿನಲ್ಲಿ ಬೇರೆಯದೇ ಆದ ಅರ್ಥಸಾಧ್ಯತೆ ಸ್ಪುರಿಸುತ್ತವೆ. ಪ್ರತಿಯೊಬ್ಬ ಓದುಗನೂ ತನ್ನದೇ ಆದ ಭಿನ್ನ ಅಥ೯ಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಅಭಿಪ್ರಾಯಪಟ್ಟರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪಟ್ಟಣದ ಟಿಎಂಎಸ್ ಸಭಾಭನವನದಲ್ಲಿ ಭಾನುವಾರ ಆಯೋಜಿಸಿದ್ದ ಗೀತ ಗಾಯನ ವ್ಯಾಖ್ಯಾನ ಕಾಯ೯ಕ್ರಮ ಅಕ್ಷರದೊಳಗಣ ಅಕ್ಷರದಲ್ಲಿ ಅವರು ಕನ್ನಡದ ಹಿರಿಯ ಕವಿತೆಗಳನ್ನು ವ್ಯಾಖ್ಯಾನಿಸಿದರು.</p>.<p>ಬೇಂದ್ರೆ, ಕುವೆಂಪು ಅವರ ಕವಿತೆಗಳಲ್ಲಿ ದೈವಿಕತೆ, ಅನುಭಾವ ಇದೆ. ಆಧ್ಯಾತ್ಮಿಕತೆ ಇದೆ. ಅವರ ಕವಿತೆಗಳು ಸಾವ೯ಕಾಲಿಕವಾದ ಕವಿತೆಗಳು ಎಂದರು.</p>.<p>ಮೇಘಾ ಎಸ್ ಭಟ್ಟ ಗುಳ್ಳಾಪುರ, ಹರ್ಷಿತಾ ಕೆ.ಭಟ್ ಕೋನಾಳ, ದಿಗಂತ ಭಟ್ಟ ಲಾಲ್ಗುಳಿ ಹಾಗೂ ರಾಜೀವ ತೇಲಂಗಾರ ಗೀತ ಗಾಯನ ನಡೆಸಿಕೊಟ್ಟರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಸಹ ಕಾಯ೯ದಶಿ೯ ಪುಷ್ಪಾ ಮಾಳಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಸುಜಾತಾ ಕಾಗಾರಕೊಡ್ಲು ನಿವ೯ಹಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಗಾಂವ್ಕರ, ಪ್ರಮುಖರಾದ ಮಮತಾ ಪ್ರಕಾಶ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-20-718895701</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>