<p>‘ಕೆರೆಯಂ ಕಟ್ಟಿಸು, ದೇವಾಗಾರಮಂ ನಿರ್ಮಿಸು, ಬಾವಿಯಂ ಸಮೆಸು...’<br>ಜನಪರ ಕಾಳಜಿಯ ತಾಯಿಯೊಬ್ಬಳು ಹೇಳಿದ ಈ ಮಾತುಗಳನ್ನು ದೊರೆ ಕಂಠೀರವ ನರಸರಾಜ ಒಡೆಯರ್ ಅಕ್ಷರಶಃ ಪಾಲಿಸಿದ್ದಾರೆ. ಮೈಸೂರು ಒಡೆಯರ್ ವಂಶದ ಈ ಶೂರರಾಜನು ಕೇವಲ ಯುದ್ಧರಂಗದ ವೀರನಲ್ಲ; ನೀರಾವರಿ ವ್ಯವಸ್ಥೆಯಲ್ಲಿ ದೂರದೃಷ್ಟಿಯನ್ನೂ ತೋರಿದ ಆಡಳಿತಗಾರ. ಆ ದೃಷ್ಟಿಯ ಜೀವಂತ ಸಾಕ್ಷಿಯೇ ಬಂಗಾರದೊಡ್ಡಿ ನಾಲೆ.</p>.<p>ರಾಜಧಾನಿ ಶ್ರೀರಂಗಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ಪಶ್ಚಿಮಕ್ಕೆ, ಕಾವೇರಿ ನದಿ ಕವಲಾಗಿ ಒಡೆಯುವ ಸ್ಥಳದಲ್ಲಿ ಕ್ರಿ.ಶ. 1646ರಲ್ಲಿ 568 ಅಡಿ ಉದ್ದದ ಅಣೆಕಟ್ಟೆ ನಿರ್ಮಿಸಲಾಯಿತು. ಕಾಡುಗಲ್ಲು ಮತ್ತು ಸುರಕಿ ಗಾರೆಯಿಂದ ಕಟ್ಟಿದ ಈ ಒಡ್ಡಿನ ಎಡ ಮಗ್ಗುಲಿನಿಂದ ಆರಂಭವಾದ ಕಾಲುವೆ, ಸುಮಾರು 8 ಕಿಲೋಮೀಟರ್ ದೂರ ಹರಿದು 864 ಎಕರೆ ಕೃಷಿಭೂಮಿಗೆ ನೀರೊದಗಿಸಿತು. ಸೀಳುಗಳನ್ನು ಸೇರಿಸಿದರೆ ನಾಲೆಯ ಒಟ್ಟು ಉದ್ದ 15.23 ಕಿಲೋಮೀಟರ್ಗಳು.</p>.<p><strong>ಬಂಗಾರದೊಡ್ಡಿ ನಾಲೆ</strong></p>.<p>50 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿದ್ದ ಈ ನಾಲೆ, ಗೂಳಿತಿಟ್ಟು ಬಳಿ ಆರಂಭವಾಗಿ ಹೊಲಗಳತ್ತ ಸಾಗುತ್ತದೆ. ಆರಂಭದಿಂದ ಮೂರು ಕಿಲೋಮೀಟರ್ ಬಳಿಕ ಕಾವೇರಿ ನದಿಯನ್ನು ದಾಟಲು ನಿರ್ಮಿಸಲಾದ ಮೇಲ್ಗಾಲುವೆ (ಅಕ್ವಾಡಕ್ಟ್) ಅದರ ವೈಶಿಷ್ಟ್ಯ.</p>.<p>ನದಿಯ ಮಟ್ಟದಿಂದ ಸುಮಾರು 30 ಅಡಿ ಎತ್ತರದಲ್ಲಿ ನಿರ್ಮಿತವಾದ ಮೇಲ್ಗಾಲುವೆ, ಸುಮಾರು 300 ಅಡಿ ಉದ್ದವಿದೆ.ಕಲ್ಲು ಚಪ್ಪಡಿಗಳು, ಸುಟ್ಟ ಇಟ್ಟಿಗೆ, ಸುರಕಿ ಗಾರೆ ಬಳಸಲಾಗಿದೆ. ಆದರೆ ಕಬ್ಬಿಣದ ಲವಲೇಶವೂ ಇಲ್ಲ! ಈ ರಚನೆ ಏಷ್ಯಾದ ಮೊದಲ ಮೇಲ್ಗಾಲುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುವುದು ಸ್ಥಳೀಯ ಇತಿಹಾಸಕಾರರ ಅಭಿಪ್ರಾಯ.</p>.<p>ಉತ್ತರ ತುದಿಯಲ್ಲಿ ಇದು ಮೂರು ಸೀಳುಗಳಾಗಿ ಕವಲೊಡೆಯುತ್ತದೆ: ಒಂದು ಸೀಳು ಶ್ರೀರಂಗಪಟ್ಟಣ ಕೋಟೆಯತ್ತ ನೆಲಾಂರ್ಗತವಾಗಿ. ಮತ್ತೊಂದು ದರಿಯಾ ದೌಲತ್ ಬಾಗ್ ಕಡೆ. ಇನ್ನೊಂದು ಗುಂಬಜ್ ಸ್ಮಾರಕ ಎದುರು ಹರಿದು ಸಂಗಮದ ಬಳಿ ಕಾವೇರಿಗೆ ಸೇರುತ್ತದೆ. ರಂಗನತಿಟ್ಟು ಪಕ್ಷಿಧಾಮ ಈ ನಾಲೆಗೆ ಕೂಗಳತೆ ದೂರದಲ್ಲಿದೆ.</p>.<p><strong>ಫ್ರಾನ್ಸ್ನ ಮಾದರಿಗೂ ಸಾಟಿ</strong></p>.<p>ಫ್ರಾನ್ಸ್ನ ಪಾಂಟ್ ದು ಗಾರ್ಡ್ ಬಳಿ ರೋಮನ್ನರು ಕ್ರಿ.ಶ. ಮೊದಲ ಶತಮಾನದಲ್ಲಿ ನಿರ್ಮಿಸಿದ ಅಕ್ವಾಡಕ್ಟ್ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಅದಕ್ಕೆ ಸಮಾನ ವಿನ್ಯಾಸದ ಬಂಗಾರದೊಡ್ಡಿ ಮೇಲ್ಗಾಲುವೆ ಮೂರೂವರೆ ಶತಮಾನಗಳಿಂದ ನಿಂತಿದ್ದರೂ, ಇದುವರೆಗೆ ಸ್ಮಾರಕ ಪಟ್ಟಿಗೆ ಸೇರಿಸಿಲ್ಲ. ನಿರ್ವಹಣೆಯ ಕೊರತೆಯಿಂದಾಗಿ ಮೂಲ ಮೇಲ್ಗಾಲುವೆ ಶಿಥಿಲಾವಸ್ಥೆಗೆ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಅದರ ಪಕ್ಕದಲ್ಲೇ ಸಿಮೆಂಟ್ ನಾಲೆ ನಿರ್ಮಿಸಿ ನೀರು ಹರಿಸಲಾಗುತ್ತಿದೆ.</p>.<p><strong>ಶೂರನ ಪ್ರೇಮಕಥೆ</strong></p>.<p>ಮಲ್ಲಯುದ್ಧದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಕಂಠೀರವ, ತಿರುಚಿನಾಪಳ್ಳಿಯ ಜಟ್ಟಿಯೊಬ್ಬನನ್ನು ಸೋಲಿಸಿ ‘ರಣಧೀರ’ ಬಿರುದು ಪಡೆದ. ಇದರಿಂದ ಕುಪಿತನಾದ ಪಾಳೇಗಾರನು ದೊಡ್ಡಮ್ಮಣ್ಣಿ ಎಂಬ ನೃತ್ಯಗಾತಿ ಮತ್ತು 25 ಮಂದಿ ಜಟ್ಟಿಗಳನ್ನು ಮೋಸದ ಮೂಲಕ ಕಳುಹಿಸಿದ. ಆದರೆ ಅರಸ ತನ್ನ ‘ವಿಜಯನಾರಸಿಂಹ’ ಕತ್ತಿಯಿಂದ ಅವರನ್ನು ಸಂಹರಿಸಿದ. ಅಪ್ರತಿಮ ಸಾಹಸಕ್ಕೆ ಮನಸೋತ ದೊಡ್ಡಮ್ಮಣ್ಣಿ ಅರಸನ ಉಪಪತ್ನಿಯಾದಳು. ಆಕೆಯನ್ನು ಅಕ್ಕರೆಯಿಂದ ‘ಬಂಗಾರಿ’ ಎಂದು ಕರೆಯಲಾರಂಭಿಸಿದ.</p>.<p>ಪರೋಪಕಾರ ಗುಣ ಸಂಪನ್ನೆಯಾದ ಬಂಗಾರಿ, ಜನೋಪಯೋಗಿ ಕಾರ್ಯವಾಗಿ ನಾಲೆ ನಿರ್ಮಿಸಲು ಮನವಿ ಮಾಡಿದ್ದಾಳೆ ಎನ್ನುವುದು ಇತಿಹಾಸದ ಪುಟಗಳ ಉಲ್ಲೇಖ. ಪ್ರೇಯಸಿಯ ಮಾತಿಗೆ ಓಗೊಟ್ಟ ಅರಸ, ಕಾವೇರಿಗೆ ಒಡ್ಡು ಕಟ್ಟಿಸಿ, ನಾಲೆ ತೋಡಿಸಿ ಅದಕ್ಕೆ ‘ಬಂಗಾರದೊಡ್ಡಿ ನಾಲೆ’ ಎಂಬ ಹೆಸರಿಟ್ಟ.</p>.<p><strong>ರೈತರ ಬದುಕಿನಲ್ಲಿ ಹರಿದ ಬಂಗಾರಿ</strong></p>.<p>ಸುಮಾರು ನಾಲ್ಕು ಶತಮಾನಗಳ ಹಿಂದೆ ನಿರ್ಮಿತವಾದ ಈ ಕಾಲುವೆ, ಅನೇಕ ತಲೆಮಾರುಗಳ ರೈತರ ಬದುಕನ್ನು ಹಸಿರಾಗಿಸಿದೆ. ಬಂಗಾರಿ ಕೇವಲ ಅರಮನೆಯ ಪ್ರೇಯಸಿಯಾಗಿರಲಿಲ್ಲ; ಹೊಲಗಳ ಹಸಿರಾಗಿ, ರೈತರ ನಂಬಿಕೆಯಾಗಿಯೂ ಹರಿದಳು.</p>.<p><strong>ಸಂರಕ್ಷಣೆಯ ಅಗತ್ಯ</strong></p>.<p>ಮೂರು ಪದರಗಳ ಅಸಾಧಾರಣ ವಿನ್ಯಾಸ ಹೊಂದಿರುವ ಈ ಮೇಲ್ಗಾಲುವೆ, ದಕ್ಷಿಣ ಭಾರತದ ಜಲವಾಸ್ತುಶಿಲ್ಪದ ಅಪೂರ್ವ ಉದಾಹರಣೆ. ಆದರೆ ಅಧಿಕೃತ ಪಾರಂಪರಿಕ ಮಾನ್ಯತೆ ಇನ್ನೂ ಸಿಕ್ಕಿಲ್ಲ. ನೀರಾವರಿ ವ್ಯವಸ್ಥೆ, ಇತಿಹಾಸ, ಪ್ರೇಮಕಥೆ– ಇವೆಲ್ಲವೂ ಒಂದೇ ಕಾಲುವೆಯಲ್ಲಿ ಹರಿಯುವ ಈ ತಾಣ ಸಂರಕ್ಷಣೆಗಾಗಿ ಕೂಗು ಕೇಳಿಸುತ್ತಿದೆ.</p>.<p>ಬಂಗಾರಿ ಕೇವಲ ಒಂದು ಹೆಸರಲ್ಲ. ಅದು ಒಂದು ಕಾಲದ ಪ್ರೀತಿ, ಒಂದು ರಾಜನ ದೂರದೃಷ್ಟಿ, ಮತ್ತು ರೈತರ ಬದುಕಿನಲ್ಲಿ ಹರಿದ ಬಂಗಾರದ ಜಲಧಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕೆರೆಯಂ ಕಟ್ಟಿಸು, ದೇವಾಗಾರಮಂ ನಿರ್ಮಿಸು, ಬಾವಿಯಂ ಸಮೆಸು...’<br>ಜನಪರ ಕಾಳಜಿಯ ತಾಯಿಯೊಬ್ಬಳು ಹೇಳಿದ ಈ ಮಾತುಗಳನ್ನು ದೊರೆ ಕಂಠೀರವ ನರಸರಾಜ ಒಡೆಯರ್ ಅಕ್ಷರಶಃ ಪಾಲಿಸಿದ್ದಾರೆ. ಮೈಸೂರು ಒಡೆಯರ್ ವಂಶದ ಈ ಶೂರರಾಜನು ಕೇವಲ ಯುದ್ಧರಂಗದ ವೀರನಲ್ಲ; ನೀರಾವರಿ ವ್ಯವಸ್ಥೆಯಲ್ಲಿ ದೂರದೃಷ್ಟಿಯನ್ನೂ ತೋರಿದ ಆಡಳಿತಗಾರ. ಆ ದೃಷ್ಟಿಯ ಜೀವಂತ ಸಾಕ್ಷಿಯೇ ಬಂಗಾರದೊಡ್ಡಿ ನಾಲೆ.</p>.<p>ರಾಜಧಾನಿ ಶ್ರೀರಂಗಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ಪಶ್ಚಿಮಕ್ಕೆ, ಕಾವೇರಿ ನದಿ ಕವಲಾಗಿ ಒಡೆಯುವ ಸ್ಥಳದಲ್ಲಿ ಕ್ರಿ.ಶ. 1646ರಲ್ಲಿ 568 ಅಡಿ ಉದ್ದದ ಅಣೆಕಟ್ಟೆ ನಿರ್ಮಿಸಲಾಯಿತು. ಕಾಡುಗಲ್ಲು ಮತ್ತು ಸುರಕಿ ಗಾರೆಯಿಂದ ಕಟ್ಟಿದ ಈ ಒಡ್ಡಿನ ಎಡ ಮಗ್ಗುಲಿನಿಂದ ಆರಂಭವಾದ ಕಾಲುವೆ, ಸುಮಾರು 8 ಕಿಲೋಮೀಟರ್ ದೂರ ಹರಿದು 864 ಎಕರೆ ಕೃಷಿಭೂಮಿಗೆ ನೀರೊದಗಿಸಿತು. ಸೀಳುಗಳನ್ನು ಸೇರಿಸಿದರೆ ನಾಲೆಯ ಒಟ್ಟು ಉದ್ದ 15.23 ಕಿಲೋಮೀಟರ್ಗಳು.</p>.<p><strong>ಬಂಗಾರದೊಡ್ಡಿ ನಾಲೆ</strong></p>.<p>50 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿದ್ದ ಈ ನಾಲೆ, ಗೂಳಿತಿಟ್ಟು ಬಳಿ ಆರಂಭವಾಗಿ ಹೊಲಗಳತ್ತ ಸಾಗುತ್ತದೆ. ಆರಂಭದಿಂದ ಮೂರು ಕಿಲೋಮೀಟರ್ ಬಳಿಕ ಕಾವೇರಿ ನದಿಯನ್ನು ದಾಟಲು ನಿರ್ಮಿಸಲಾದ ಮೇಲ್ಗಾಲುವೆ (ಅಕ್ವಾಡಕ್ಟ್) ಅದರ ವೈಶಿಷ್ಟ್ಯ.</p>.<p>ನದಿಯ ಮಟ್ಟದಿಂದ ಸುಮಾರು 30 ಅಡಿ ಎತ್ತರದಲ್ಲಿ ನಿರ್ಮಿತವಾದ ಮೇಲ್ಗಾಲುವೆ, ಸುಮಾರು 300 ಅಡಿ ಉದ್ದವಿದೆ.ಕಲ್ಲು ಚಪ್ಪಡಿಗಳು, ಸುಟ್ಟ ಇಟ್ಟಿಗೆ, ಸುರಕಿ ಗಾರೆ ಬಳಸಲಾಗಿದೆ. ಆದರೆ ಕಬ್ಬಿಣದ ಲವಲೇಶವೂ ಇಲ್ಲ! ಈ ರಚನೆ ಏಷ್ಯಾದ ಮೊದಲ ಮೇಲ್ಗಾಲುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುವುದು ಸ್ಥಳೀಯ ಇತಿಹಾಸಕಾರರ ಅಭಿಪ್ರಾಯ.</p>.<p>ಉತ್ತರ ತುದಿಯಲ್ಲಿ ಇದು ಮೂರು ಸೀಳುಗಳಾಗಿ ಕವಲೊಡೆಯುತ್ತದೆ: ಒಂದು ಸೀಳು ಶ್ರೀರಂಗಪಟ್ಟಣ ಕೋಟೆಯತ್ತ ನೆಲಾಂರ್ಗತವಾಗಿ. ಮತ್ತೊಂದು ದರಿಯಾ ದೌಲತ್ ಬಾಗ್ ಕಡೆ. ಇನ್ನೊಂದು ಗುಂಬಜ್ ಸ್ಮಾರಕ ಎದುರು ಹರಿದು ಸಂಗಮದ ಬಳಿ ಕಾವೇರಿಗೆ ಸೇರುತ್ತದೆ. ರಂಗನತಿಟ್ಟು ಪಕ್ಷಿಧಾಮ ಈ ನಾಲೆಗೆ ಕೂಗಳತೆ ದೂರದಲ್ಲಿದೆ.</p>.<p><strong>ಫ್ರಾನ್ಸ್ನ ಮಾದರಿಗೂ ಸಾಟಿ</strong></p>.<p>ಫ್ರಾನ್ಸ್ನ ಪಾಂಟ್ ದು ಗಾರ್ಡ್ ಬಳಿ ರೋಮನ್ನರು ಕ್ರಿ.ಶ. ಮೊದಲ ಶತಮಾನದಲ್ಲಿ ನಿರ್ಮಿಸಿದ ಅಕ್ವಾಡಕ್ಟ್ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಅದಕ್ಕೆ ಸಮಾನ ವಿನ್ಯಾಸದ ಬಂಗಾರದೊಡ್ಡಿ ಮೇಲ್ಗಾಲುವೆ ಮೂರೂವರೆ ಶತಮಾನಗಳಿಂದ ನಿಂತಿದ್ದರೂ, ಇದುವರೆಗೆ ಸ್ಮಾರಕ ಪಟ್ಟಿಗೆ ಸೇರಿಸಿಲ್ಲ. ನಿರ್ವಹಣೆಯ ಕೊರತೆಯಿಂದಾಗಿ ಮೂಲ ಮೇಲ್ಗಾಲುವೆ ಶಿಥಿಲಾವಸ್ಥೆಗೆ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಅದರ ಪಕ್ಕದಲ್ಲೇ ಸಿಮೆಂಟ್ ನಾಲೆ ನಿರ್ಮಿಸಿ ನೀರು ಹರಿಸಲಾಗುತ್ತಿದೆ.</p>.<p><strong>ಶೂರನ ಪ್ರೇಮಕಥೆ</strong></p>.<p>ಮಲ್ಲಯುದ್ಧದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಕಂಠೀರವ, ತಿರುಚಿನಾಪಳ್ಳಿಯ ಜಟ್ಟಿಯೊಬ್ಬನನ್ನು ಸೋಲಿಸಿ ‘ರಣಧೀರ’ ಬಿರುದು ಪಡೆದ. ಇದರಿಂದ ಕುಪಿತನಾದ ಪಾಳೇಗಾರನು ದೊಡ್ಡಮ್ಮಣ್ಣಿ ಎಂಬ ನೃತ್ಯಗಾತಿ ಮತ್ತು 25 ಮಂದಿ ಜಟ್ಟಿಗಳನ್ನು ಮೋಸದ ಮೂಲಕ ಕಳುಹಿಸಿದ. ಆದರೆ ಅರಸ ತನ್ನ ‘ವಿಜಯನಾರಸಿಂಹ’ ಕತ್ತಿಯಿಂದ ಅವರನ್ನು ಸಂಹರಿಸಿದ. ಅಪ್ರತಿಮ ಸಾಹಸಕ್ಕೆ ಮನಸೋತ ದೊಡ್ಡಮ್ಮಣ್ಣಿ ಅರಸನ ಉಪಪತ್ನಿಯಾದಳು. ಆಕೆಯನ್ನು ಅಕ್ಕರೆಯಿಂದ ‘ಬಂಗಾರಿ’ ಎಂದು ಕರೆಯಲಾರಂಭಿಸಿದ.</p>.<p>ಪರೋಪಕಾರ ಗುಣ ಸಂಪನ್ನೆಯಾದ ಬಂಗಾರಿ, ಜನೋಪಯೋಗಿ ಕಾರ್ಯವಾಗಿ ನಾಲೆ ನಿರ್ಮಿಸಲು ಮನವಿ ಮಾಡಿದ್ದಾಳೆ ಎನ್ನುವುದು ಇತಿಹಾಸದ ಪುಟಗಳ ಉಲ್ಲೇಖ. ಪ್ರೇಯಸಿಯ ಮಾತಿಗೆ ಓಗೊಟ್ಟ ಅರಸ, ಕಾವೇರಿಗೆ ಒಡ್ಡು ಕಟ್ಟಿಸಿ, ನಾಲೆ ತೋಡಿಸಿ ಅದಕ್ಕೆ ‘ಬಂಗಾರದೊಡ್ಡಿ ನಾಲೆ’ ಎಂಬ ಹೆಸರಿಟ್ಟ.</p>.<p><strong>ರೈತರ ಬದುಕಿನಲ್ಲಿ ಹರಿದ ಬಂಗಾರಿ</strong></p>.<p>ಸುಮಾರು ನಾಲ್ಕು ಶತಮಾನಗಳ ಹಿಂದೆ ನಿರ್ಮಿತವಾದ ಈ ಕಾಲುವೆ, ಅನೇಕ ತಲೆಮಾರುಗಳ ರೈತರ ಬದುಕನ್ನು ಹಸಿರಾಗಿಸಿದೆ. ಬಂಗಾರಿ ಕೇವಲ ಅರಮನೆಯ ಪ್ರೇಯಸಿಯಾಗಿರಲಿಲ್ಲ; ಹೊಲಗಳ ಹಸಿರಾಗಿ, ರೈತರ ನಂಬಿಕೆಯಾಗಿಯೂ ಹರಿದಳು.</p>.<p><strong>ಸಂರಕ್ಷಣೆಯ ಅಗತ್ಯ</strong></p>.<p>ಮೂರು ಪದರಗಳ ಅಸಾಧಾರಣ ವಿನ್ಯಾಸ ಹೊಂದಿರುವ ಈ ಮೇಲ್ಗಾಲುವೆ, ದಕ್ಷಿಣ ಭಾರತದ ಜಲವಾಸ್ತುಶಿಲ್ಪದ ಅಪೂರ್ವ ಉದಾಹರಣೆ. ಆದರೆ ಅಧಿಕೃತ ಪಾರಂಪರಿಕ ಮಾನ್ಯತೆ ಇನ್ನೂ ಸಿಕ್ಕಿಲ್ಲ. ನೀರಾವರಿ ವ್ಯವಸ್ಥೆ, ಇತಿಹಾಸ, ಪ್ರೇಮಕಥೆ– ಇವೆಲ್ಲವೂ ಒಂದೇ ಕಾಲುವೆಯಲ್ಲಿ ಹರಿಯುವ ಈ ತಾಣ ಸಂರಕ್ಷಣೆಗಾಗಿ ಕೂಗು ಕೇಳಿಸುತ್ತಿದೆ.</p>.<p>ಬಂಗಾರಿ ಕೇವಲ ಒಂದು ಹೆಸರಲ್ಲ. ಅದು ಒಂದು ಕಾಲದ ಪ್ರೀತಿ, ಒಂದು ರಾಜನ ದೂರದೃಷ್ಟಿ, ಮತ್ತು ರೈತರ ಬದುಕಿನಲ್ಲಿ ಹರಿದ ಬಂಗಾರದ ಜಲಧಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>