<p>ನಾನು ಬೆಂಗಳೂರಿಗೆ ಬಂದದ್ದು ತೊಂಬತ್ತರ ದಶಕದಲ್ಲಿ. ತಾಲ್ಲೂಕು ಕೇಂದ್ರದಿಂದ ಬಂದ ನನಗೆ ನಗರದ ದೊಡ್ಡ ರಸ್ತೆಗಳು, ಅಪರಿಚಿತ ವಿಳಾಸಗಳು ಭಯ ಹುಟ್ಟಿಸುತ್ತಿದ್ದವು. ಆದರೆ ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನನ್ನನ್ನು ಆಕರ್ಷಿಸಿದವು. ಅವು ನನಗೆ ಹೊಸ ಜಗತ್ತಿನ ಬಾಗಿಲು ತೆರೆದವು. ಪುಸ್ತಕದಂಗಡಿಗಳು ಮತ್ತು ಕಲಾಕ್ಷೇತ್ರಗಳ ಮೂಲಕ, ಈ ಅನಾಮಿಕ ನಗರದ ಹತ್ತಿರವಾಯಿತು.</p>.<p>ಹೀಗೆ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಿದ್ದರೂ, ಅದರ ಸಂಘಟಕರು ಯಾರು, ತಂಡಗಳು ಯಾವುವು ಎನ್ನುವುದು ಮನಸ್ಸಿಗೆ ಉಳಿಯುತ್ತಿರಲಿಲ್ಲ. ಆದರೆ ಆ ಅನಾಮಿಕ ಅನುಭವಗಳೇ ನಿಧಾನವಾಗಿ ನನ್ನೊಳಗೆ ನೆಲೆಗೊಳ್ಳುತ್ತಿದವು. ಈ ನಡುವೆ, ಸುಮಾರು 2012ರ ವೇಳೆಗೆ ಚಂದ್ರಶೇಖರ ಕಂಬಾರರ ನಾಟಕೋತ್ಸವ ‘ಸಿರಿಸಂಪಿಗೆ’ಗೆ ಹೋದಾಗ, ಸೊಗಸಾದ ನಾಟಕಗಳ ಮಧ್ಯೆ ಕಣ್ಣಿಗೆ ಬಿದ್ದ ಹೆಸರು ‘ಭಾಗವತರು’. ‘ಎಷ್ಟು ಚೆನ್ನಾಗಿ ಕಾರ್ಯಕ್ರಮ ಮಾಡಿದ್ದಾರೆ!’ ಎಂಬ ಭಾವನೆ ಮೂಡಿತು. ಮರುವರ್ಷವೇ ಕೆ.ವೈ. ನಾರಾಯಣಸ್ವಾಮಿ ಅವರ ನಾಟಕಗಳ ಕಾರ್ಯಕ್ರಮ ‘ರಂಗಬೆಡಗು’ ನಡೆಯಿತು. ಅಲ್ಲಿ ‘ಅನಭಿಜ್ಞ ಶಾಕುಂತಲ’ ಎಂಬ ಅದ್ಭುತ ನಾಟಕ ನೋಡಿದೆ. ನನ್ನ ಮಟ್ಟಿಗೆ ‘ಭಾಗವತರು’ ತಂಡದ ಕಾರ್ಯಕ್ರಮಗಳು ನನ್ನೊಳಗೆ ಇಳಿದದ್ದು ಅಲ್ಲಿಂದಲೇ. ನಂತರ ‘ಭಾಗವತರು’ ತಂಡದ ರೇವಣ್ಣ ಅವರ ಪರಿಚಯವಾಯಿತು. ಒಬ್ಬ ವ್ಯಕ್ತಿಯ ಹಟ ಮತ್ತು ದೃಷ್ಟಿ ಒಂದು ಸಾಂಸ್ಕೃತಿಕ ಚಳವಳಿಯಾಗುವ ಕಥೆಯ ಆರಂಭ ತಿಳಿಯಿತು.</p>.<p>ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಜಡೇಮಾಯಸಂದ್ರದ ರೇವಣ್ಣ ಅವರು 1984ರಲ್ಲಿ ಬೆಂಗಳೂರಿಗೆ ಬಂದಾಗ ಅವರಿಗಿದ್ದ ಒಂದೇ ಗುರಿ–ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ₹2000 ಸಂಬಳದ ಕೆಲಸ ಗಿಟ್ಟಿಸಿಕೊಳ್ಳುವುದು. ಆದರೆ ಅವರು ತಲುಪಿದ್ದು ಕರ್ನಾಟಕ ನಾಟಕ ಅಕಾಡೆಮಿಯ ಬಾಗಿಲಿಗೆ. ಅಲ್ಲಿ ಆರಂಭವಾದ ಪಯಣ ಅವರ ಹೆಸರಿನ ಜೊತೆಗೆ ಇನ್ನೊಂದು ಹೆಸರನ್ನು ಸೇರಿಸಿತು ‘ಭಾಗವತರು ರೇವಣ್ಣ’. ಅದು ಅವರು ಕಟ್ಟಿದ, ಬೆಳೆಸಿದ ಸಂಸ್ಥೆಯ ಹೆಸರೂ ಹೌದು; ಬೆಂಗಳೂರಿನ ಸಾಂಸ್ಕೃತಿಕ ಲೋಕದ ಚೌಕಿಮನೆಯೂ ಹೌದು. ಒಬ್ಬ ವ್ಯಕ್ತಿಯ ಪ್ರಯತ್ನ ಹೇಗೆ ಸಮೂಹದ ಸಂಸ್ಕೃತಿಯಾಗಿ ಬೆಳೆದೀತು ಎಂಬುದಕ್ಕೆ ಇದು ಉದಾಹರಣೆ.</p>.<p>ರೇವಣ್ಣ ಮತ್ತು ಕ್ಯಾಂಟೀನ್ ಉಡುಪ ಅವರ ಕನಸು ‘ಮಾಯಾಮಂಜರಿ’. 2001ರಲ್ಲಿ ಕನ್ನಡ ರಂಗಭೂಮಿಗೆ 125 ವರ್ಷ ತುಂಬಿದ ಸಂದರ್ಭದಲ್ಲಿಇವರಿಬ್ಬರೂ ರಂಗಭೂಮಿಯಿಂದ ಕಿರುತೆರೆ, ಹಿರಿತೆರೆಗೆ ಹೋದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಹಸಕ್ಕೆ ಕೈಹಾಕಿದರು. ಕಲಾಕ್ಷೇತ್ರವು ಸುಮಾರು 120 ಕಲಾವಿದರ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ವೃತ್ತಿ, ಜನಪದ ಮತ್ತು ಆಧುನಿಕ ರಂಗಭೂಮಿಯ ಬಗ್ಗೆ ನಡೆದ ವಿಚಾರ ವಿನಿಮಯ ಆ ದಿನದ ವಿಶೇಷವಾಗಿತ್ತು. ‘ರಾಜಾಶ್ರಯದಿಂದ ಜನಾಶ್ರಯದತ್ತ ಬಂದ ಕನ್ನಡ ವೃತ್ತಿ ರಂಗಭೂಮಿಯ ಸಂಭ್ರಮ ಕ್ಷಣಗಳನ್ನು ದಾಖಲಿಸಿದ ಕಾರ್ಯಕ್ರಮ ಇದು’ ಎಂದು ರಂಗಕರ್ಮಿ ಶಶಿಧರ ಭಾರಿಘಾಟ್ ಬರೆಯುತ್ತಾರೆ. ಈ ಕಾರ್ಯಕ್ರಮ ಒಂದು ನೆನಪಷ್ಟೇ ಅಲ್ಲ, ಒಂದು ಸಂಸ್ಕೃತಿಯ ದಾಖಲೆ.</p>.<p>ಈ ‘ಮಾಯಾಮಂಜರಿ’ ಸಾಂಸ್ಥಿಕ ರೂಪ ತಾಳಿದಾಗ ಹುಟ್ಟಿದ್ದು ‘ಭಾಗವತರು’. ಭಾಗವತರು ರಂಗದ ಮೇಲೆ ಕಥೆಯನ್ನು ಮುನ್ನಡೆಸುತ್ತಾರೆ, ಆಟ ಕಟ್ಟಿಸುತ್ತಾರೆ. ಆದರೆ ಸ್ವತಃ ಆಟವಾಡುವುದಿಲ್ಲ. ಸಂಸ್ಥೆ ಹುಟ್ಟಿದಾಗ ತೆಗೆದುಕೊಂಡ ಮೊದಲ ನಿರ್ಧಾರವೇ ‘ನಾವು ನಮ್ಮದೇ ತಂಡ ಕಟ್ಟುವುದಿಲ್ಲ’ ಎಂಬುದು. ಆಗಿನಿಂದ ‘ಭಾಗವತರು’ ರಂಗಭೂಮಿ, ಸಂಗೀತ, ಸಾಹಿತ್ಯ, ಹರಿಕಥೆ ಮುಂತಾದ ಕಲೆಗಳಿಗೆ ವೇದಿಕೆಯಾಗಿದೆಯೇ ಹೊರತು, ಸ್ವತಃ ವೇದಿಕೆ ಏರಿಲ್ಲ.</p>.<p>ರಂಗಭೂಮಿ ಲಲಿತಕಲೆಗಳಲ್ಲೊಂದು ವಿಶಿಷ್ಟ ಕಲೆ. ಇಲ್ಲಿ ಸಾಹಿತ್ಯ ಇದೆ, ಸಂಗೀತ ಇದೆ, ರಂಗಸಜ್ಜಿಕೆಯೂ ಇದೆ. ‘ಭಾಗವತರು’ ಈ ಎಲ್ಲವನ್ನೂ ತನ್ನದಾಗಿಸಿಕೊಂಡು, ಎಲ್ಲಕ್ಕೂ ವೇದಿಕೆ ಕಲ್ಪಿಸಿದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕಟ್ಟಿದ ಕಾರಂತ, ಕಂಬಾರ, ಎಚ್.ಎನ್., ಸಿ.ಜಿ.ಕೆ., ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್ ಮೊದಲಾದ ದಿಗ್ಗಜರ ಹೆಸರಿನಲ್ಲಿ, ಹಾಗೆಯೇ ಬಿ. ಜಯಶ್ರೀ ಮತ್ತು ಉಮಾಶ್ರೀ ಅವರ ಹೆಸರಿನಲ್ಲಿ ನಾಟಕೋತ್ಸವಗಳನ್ನು ಆಯೋಜಿಸಿದೆ. ಇದರ ಮೂಲಕ ಪರಂಪರೆ ಮತ್ತು ಆಧುನಿಕತೆಯ ನಡುವೆ ಸಂವಾದ ನಡೆಯುತ್ತಿದೆ.</p>.<p>ಇವರ ಕಾರ್ಯಕ್ರಮಗಳ ಇನ್ನೊಂದು ವಿಶೇಷವೆಂದರೆ ನಾಟಕೋತ್ಸವಗಳ ಜೊತೆಗೆ ನಡೆಯುವ ವಿಚಾರ ಸಂಕಿರಣಗಳು. ಒಂದು ಕಡೆ ಅಕಾಡೆಮಿಕ್ ವಲಯ, ಇನ್ನೊಂದು ಕಡೆ ಅದರಾಚೆಯ ರಂಗಪ್ರೇಮಿಗಳು–ಎಲ್ಲರೂ ಒಂದೇ ಜಾಗದಲ್ಲಿ ಸೇರುತ್ತಾರೆ. ಹಗಲಿನ ಸಾಹಿತ್ಯ ಚರ್ಚೆಗಳು, ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಮುಂದುವರೆಯುವ ಮಾತುಕತೆಗಳು, ಕಾರಂತರ ಕ್ಯಾಂಟೀನ್ನ ಉಪ್ಪಿಟ್ಟು, ಟೌನ್ ಹಾಲ್ ಕ್ಯಾಂಟೀನ್ನ ಲೆಮನ್ ಟೀ ಇವೆಲ್ಲ ಸೇರಿ ಒಂದು ಸಾಂಸ್ಕೃತಿಕ ಅನುಭವವಾಗುತ್ತದೆ. ಸಂಜೆ ನಾಟಕದೊಂದಿಗೆ ಅದು ಪೂರ್ಣಗೊಳ್ಳುತ್ತದೆ. ಈ ನಿರಂತರ ಸಂವಾದವೇ ಒಂದು ಸಮುದಾಯವನ್ನು ನಿರ್ಮಿಸುತ್ತದೆ.</p>.<p>ಇಷ್ಟೇ ಮುಖ್ಯವಾದುದು ‘ಭಾಗವತರು’ ನಡೆಸಿದ ಗೀತಗಾಯನ ಕಾರ್ಯಕ್ರಮಗಳು. ಭಾವಗೀತೆಗಳ ಜೊತೆಗೆ ದಾಸರ ಕೀರ್ತನೆಗಳು, ವಚನ, ತತ್ವಪದ, ಜನಪದ, ರಂಗಗೀತೆ, ಹಿಂದೂಸ್ತಾನಿ ಸಂಗೀತ–ಹೀಗೆ ಸಂಗೀತವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ನನಗೆ ಮರೆಯಲಾಗದ ಕಾರ್ಯಕ್ರಮಗಳಲ್ಲಿ ಸಿ. ಅಶ್ವತ್, ಶಿವಮೊಗ್ಗ ಸುಬ್ಬಣ್ಣ, ಉಸ್ತಾದ್ ಬಾಲೇಖಾನ್ ಸಹೋದರರು, ಪಂ. ರಾಜಶೇಖರ್ ಮನ್ಸೂರ್ ಅವರ ಗಾಯನ ಪ್ರಮುಖ. ಸಂಗೀತವೂ ಇಲ್ಲಿ ಒಂದು ಸೇತುವೆಯಾಗಿದೆ.</p>.<p>ಹವ್ಯಾಸಿ ರಂಗಭೂಮಿಯಲ್ಲಿ ಇರುವವರು ವೃತ್ತಿ ರಂಗಭೂಮಿ ಬಗೆಗೆ ಕಡಿಮೆ ಮಾತನಾಡುವುದು ಸಾಮಾನ್ಯ. ಆದರೆ ವೃತ್ತಿ ರಂಗಭೂಮಿಯು ಪ್ರೇಕ್ಷಕರೊಂದಿಗೆ ಹೊಂದಿರುವ ಸಂಬಂಧವನ್ನು ನಾವು ದೂರದಿಂದ ಊಹಿಸಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಪ್ರವಾಸದ ವೇಳೆ ಜೇವರ್ಗಿ ರಾಜಣ್ಣ ಅವರ ನಾಟಕಕ್ಕೆ ಟಿಕೆಟ್ ಸಿಗದೆ ಹೋಗಿದ್ದ ನನಗೆ, ಅವರ ತಂಡವನ್ನು ಕಲಾಕ್ಷೇತ್ರಕ್ಕೆ ಕರೆತಂದ ‘ಭಾಗವತರು’ ಕಾರಣದಿಂದಲೇ ನಂತರ ಆ ನಾಟಕ ನೋಡಲು ಸಾಧ್ಯವಾಯಿತು.</p>.<p>ಹೀಗೆ ಬೇರೆಬೇರೆ ಕಡೆಗಳಿಂದ ಒಳ್ಳೆಯದನ್ನು ಹೆಕ್ಕಿ ತಂದು, ಅದಕ್ಕೆ ವೇದಿಕೆ ಕಲ್ಪಿಸಿ, ನೇರವಾಗಿ ಅನುಭವಿಸುವ ಅವಕಾಶ ನೀಡಿರುವುದು ತಂಡದ ದೊಡ್ಡ ಸಾಧನೆ. ಜೊತೆಗೆ ಪುಸ್ತಕ ಪ್ರಕಟಣೆ ಕೂಡ ಇವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರ. ‘ಅಷ್ಟ ದಿಗ್ಗಜರು’, ‘ಸಾಂಸ್ಕೃತಿಕ ಲೋಕದಲ್ಲಿ ಬರಗೂರು’, ‘ನಿತ್ಯೋತ್ಸವ ಕವಿಗೆ 80’, ‘ಯು.ಆರ್. ಅನಂತಮೂರ್ತಿ ಮರುಓದಿನ ನೆಲೆಗಳು’, ‘ಲಂಕೇಶ್–90’ ಮುಂತಾದ ಹಲವು ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ನೀಡಿದೆ. ಈ ಪ್ರಕಟಣೆಗಳು ಒಂದು ಕಾಲದ ದಾಖಲೆಗಳಾಗಿವೆ.</p>.<p>‘ಯಾವುದಾದರೂ ಹಂತದಲ್ಲಿ ಸವಾಲುಗಳು ನಿಮಗೆ ಸಾಕು ಎಂದು ಅನಿಸಿತೇ?’ ಎಂಬ ಪ್ರಶ್ನೆಗೆ ರೇವಣ್ಣ ಅವರ ಉತ್ತರ ಸರಳ, ‘ಎಂದಿಗೂ ಇಲ್ಲ. ಮೊದಲ ವರ್ಷಗಳಲ್ಲಿ ತೊಂದರೆಗಳು ಇದ್ದವು. ಆದರೆ ನಾನು ರೈತ. ಏನಾದರೂ ಆಗಲಿ, ನನ್ನ ಕೆಲಸ ನಾನು ಮಾಡುತ್ತೇನೆ ಎಂದು ನಿಂತೆ’.</p>.<p>ಅವರು ಕೇವಲ ನಿಂತಿಲ್ಲ; 25 ವರ್ಷಗಳಿಂದ ‘ಭಾಗವತರು’ ತಂಡವನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಅವರ ಹಟ, ಅವರ ದೃಷ್ಟಿ ಇವೇ ‘ಭಾಗವತರು’ ಎಂಬ ಚಳವಳಿಯ ನಿಜವಾದ ಶಕ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾನು ಬೆಂಗಳೂರಿಗೆ ಬಂದದ್ದು ತೊಂಬತ್ತರ ದಶಕದಲ್ಲಿ. ತಾಲ್ಲೂಕು ಕೇಂದ್ರದಿಂದ ಬಂದ ನನಗೆ ನಗರದ ದೊಡ್ಡ ರಸ್ತೆಗಳು, ಅಪರಿಚಿತ ವಿಳಾಸಗಳು ಭಯ ಹುಟ್ಟಿಸುತ್ತಿದ್ದವು. ಆದರೆ ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನನ್ನನ್ನು ಆಕರ್ಷಿಸಿದವು. ಅವು ನನಗೆ ಹೊಸ ಜಗತ್ತಿನ ಬಾಗಿಲು ತೆರೆದವು. ಪುಸ್ತಕದಂಗಡಿಗಳು ಮತ್ತು ಕಲಾಕ್ಷೇತ್ರಗಳ ಮೂಲಕ, ಈ ಅನಾಮಿಕ ನಗರದ ಹತ್ತಿರವಾಯಿತು.</p>.<p>ಹೀಗೆ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಿದ್ದರೂ, ಅದರ ಸಂಘಟಕರು ಯಾರು, ತಂಡಗಳು ಯಾವುವು ಎನ್ನುವುದು ಮನಸ್ಸಿಗೆ ಉಳಿಯುತ್ತಿರಲಿಲ್ಲ. ಆದರೆ ಆ ಅನಾಮಿಕ ಅನುಭವಗಳೇ ನಿಧಾನವಾಗಿ ನನ್ನೊಳಗೆ ನೆಲೆಗೊಳ್ಳುತ್ತಿದವು. ಈ ನಡುವೆ, ಸುಮಾರು 2012ರ ವೇಳೆಗೆ ಚಂದ್ರಶೇಖರ ಕಂಬಾರರ ನಾಟಕೋತ್ಸವ ‘ಸಿರಿಸಂಪಿಗೆ’ಗೆ ಹೋದಾಗ, ಸೊಗಸಾದ ನಾಟಕಗಳ ಮಧ್ಯೆ ಕಣ್ಣಿಗೆ ಬಿದ್ದ ಹೆಸರು ‘ಭಾಗವತರು’. ‘ಎಷ್ಟು ಚೆನ್ನಾಗಿ ಕಾರ್ಯಕ್ರಮ ಮಾಡಿದ್ದಾರೆ!’ ಎಂಬ ಭಾವನೆ ಮೂಡಿತು. ಮರುವರ್ಷವೇ ಕೆ.ವೈ. ನಾರಾಯಣಸ್ವಾಮಿ ಅವರ ನಾಟಕಗಳ ಕಾರ್ಯಕ್ರಮ ‘ರಂಗಬೆಡಗು’ ನಡೆಯಿತು. ಅಲ್ಲಿ ‘ಅನಭಿಜ್ಞ ಶಾಕುಂತಲ’ ಎಂಬ ಅದ್ಭುತ ನಾಟಕ ನೋಡಿದೆ. ನನ್ನ ಮಟ್ಟಿಗೆ ‘ಭಾಗವತರು’ ತಂಡದ ಕಾರ್ಯಕ್ರಮಗಳು ನನ್ನೊಳಗೆ ಇಳಿದದ್ದು ಅಲ್ಲಿಂದಲೇ. ನಂತರ ‘ಭಾಗವತರು’ ತಂಡದ ರೇವಣ್ಣ ಅವರ ಪರಿಚಯವಾಯಿತು. ಒಬ್ಬ ವ್ಯಕ್ತಿಯ ಹಟ ಮತ್ತು ದೃಷ್ಟಿ ಒಂದು ಸಾಂಸ್ಕೃತಿಕ ಚಳವಳಿಯಾಗುವ ಕಥೆಯ ಆರಂಭ ತಿಳಿಯಿತು.</p>.<p>ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಜಡೇಮಾಯಸಂದ್ರದ ರೇವಣ್ಣ ಅವರು 1984ರಲ್ಲಿ ಬೆಂಗಳೂರಿಗೆ ಬಂದಾಗ ಅವರಿಗಿದ್ದ ಒಂದೇ ಗುರಿ–ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ₹2000 ಸಂಬಳದ ಕೆಲಸ ಗಿಟ್ಟಿಸಿಕೊಳ್ಳುವುದು. ಆದರೆ ಅವರು ತಲುಪಿದ್ದು ಕರ್ನಾಟಕ ನಾಟಕ ಅಕಾಡೆಮಿಯ ಬಾಗಿಲಿಗೆ. ಅಲ್ಲಿ ಆರಂಭವಾದ ಪಯಣ ಅವರ ಹೆಸರಿನ ಜೊತೆಗೆ ಇನ್ನೊಂದು ಹೆಸರನ್ನು ಸೇರಿಸಿತು ‘ಭಾಗವತರು ರೇವಣ್ಣ’. ಅದು ಅವರು ಕಟ್ಟಿದ, ಬೆಳೆಸಿದ ಸಂಸ್ಥೆಯ ಹೆಸರೂ ಹೌದು; ಬೆಂಗಳೂರಿನ ಸಾಂಸ್ಕೃತಿಕ ಲೋಕದ ಚೌಕಿಮನೆಯೂ ಹೌದು. ಒಬ್ಬ ವ್ಯಕ್ತಿಯ ಪ್ರಯತ್ನ ಹೇಗೆ ಸಮೂಹದ ಸಂಸ್ಕೃತಿಯಾಗಿ ಬೆಳೆದೀತು ಎಂಬುದಕ್ಕೆ ಇದು ಉದಾಹರಣೆ.</p>.<p>ರೇವಣ್ಣ ಮತ್ತು ಕ್ಯಾಂಟೀನ್ ಉಡುಪ ಅವರ ಕನಸು ‘ಮಾಯಾಮಂಜರಿ’. 2001ರಲ್ಲಿ ಕನ್ನಡ ರಂಗಭೂಮಿಗೆ 125 ವರ್ಷ ತುಂಬಿದ ಸಂದರ್ಭದಲ್ಲಿಇವರಿಬ್ಬರೂ ರಂಗಭೂಮಿಯಿಂದ ಕಿರುತೆರೆ, ಹಿರಿತೆರೆಗೆ ಹೋದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಹಸಕ್ಕೆ ಕೈಹಾಕಿದರು. ಕಲಾಕ್ಷೇತ್ರವು ಸುಮಾರು 120 ಕಲಾವಿದರ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ವೃತ್ತಿ, ಜನಪದ ಮತ್ತು ಆಧುನಿಕ ರಂಗಭೂಮಿಯ ಬಗ್ಗೆ ನಡೆದ ವಿಚಾರ ವಿನಿಮಯ ಆ ದಿನದ ವಿಶೇಷವಾಗಿತ್ತು. ‘ರಾಜಾಶ್ರಯದಿಂದ ಜನಾಶ್ರಯದತ್ತ ಬಂದ ಕನ್ನಡ ವೃತ್ತಿ ರಂಗಭೂಮಿಯ ಸಂಭ್ರಮ ಕ್ಷಣಗಳನ್ನು ದಾಖಲಿಸಿದ ಕಾರ್ಯಕ್ರಮ ಇದು’ ಎಂದು ರಂಗಕರ್ಮಿ ಶಶಿಧರ ಭಾರಿಘಾಟ್ ಬರೆಯುತ್ತಾರೆ. ಈ ಕಾರ್ಯಕ್ರಮ ಒಂದು ನೆನಪಷ್ಟೇ ಅಲ್ಲ, ಒಂದು ಸಂಸ್ಕೃತಿಯ ದಾಖಲೆ.</p>.<p>ಈ ‘ಮಾಯಾಮಂಜರಿ’ ಸಾಂಸ್ಥಿಕ ರೂಪ ತಾಳಿದಾಗ ಹುಟ್ಟಿದ್ದು ‘ಭಾಗವತರು’. ಭಾಗವತರು ರಂಗದ ಮೇಲೆ ಕಥೆಯನ್ನು ಮುನ್ನಡೆಸುತ್ತಾರೆ, ಆಟ ಕಟ್ಟಿಸುತ್ತಾರೆ. ಆದರೆ ಸ್ವತಃ ಆಟವಾಡುವುದಿಲ್ಲ. ಸಂಸ್ಥೆ ಹುಟ್ಟಿದಾಗ ತೆಗೆದುಕೊಂಡ ಮೊದಲ ನಿರ್ಧಾರವೇ ‘ನಾವು ನಮ್ಮದೇ ತಂಡ ಕಟ್ಟುವುದಿಲ್ಲ’ ಎಂಬುದು. ಆಗಿನಿಂದ ‘ಭಾಗವತರು’ ರಂಗಭೂಮಿ, ಸಂಗೀತ, ಸಾಹಿತ್ಯ, ಹರಿಕಥೆ ಮುಂತಾದ ಕಲೆಗಳಿಗೆ ವೇದಿಕೆಯಾಗಿದೆಯೇ ಹೊರತು, ಸ್ವತಃ ವೇದಿಕೆ ಏರಿಲ್ಲ.</p>.<p>ರಂಗಭೂಮಿ ಲಲಿತಕಲೆಗಳಲ್ಲೊಂದು ವಿಶಿಷ್ಟ ಕಲೆ. ಇಲ್ಲಿ ಸಾಹಿತ್ಯ ಇದೆ, ಸಂಗೀತ ಇದೆ, ರಂಗಸಜ್ಜಿಕೆಯೂ ಇದೆ. ‘ಭಾಗವತರು’ ಈ ಎಲ್ಲವನ್ನೂ ತನ್ನದಾಗಿಸಿಕೊಂಡು, ಎಲ್ಲಕ್ಕೂ ವೇದಿಕೆ ಕಲ್ಪಿಸಿದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕಟ್ಟಿದ ಕಾರಂತ, ಕಂಬಾರ, ಎಚ್.ಎನ್., ಸಿ.ಜಿ.ಕೆ., ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್ ಮೊದಲಾದ ದಿಗ್ಗಜರ ಹೆಸರಿನಲ್ಲಿ, ಹಾಗೆಯೇ ಬಿ. ಜಯಶ್ರೀ ಮತ್ತು ಉಮಾಶ್ರೀ ಅವರ ಹೆಸರಿನಲ್ಲಿ ನಾಟಕೋತ್ಸವಗಳನ್ನು ಆಯೋಜಿಸಿದೆ. ಇದರ ಮೂಲಕ ಪರಂಪರೆ ಮತ್ತು ಆಧುನಿಕತೆಯ ನಡುವೆ ಸಂವಾದ ನಡೆಯುತ್ತಿದೆ.</p>.<p>ಇವರ ಕಾರ್ಯಕ್ರಮಗಳ ಇನ್ನೊಂದು ವಿಶೇಷವೆಂದರೆ ನಾಟಕೋತ್ಸವಗಳ ಜೊತೆಗೆ ನಡೆಯುವ ವಿಚಾರ ಸಂಕಿರಣಗಳು. ಒಂದು ಕಡೆ ಅಕಾಡೆಮಿಕ್ ವಲಯ, ಇನ್ನೊಂದು ಕಡೆ ಅದರಾಚೆಯ ರಂಗಪ್ರೇಮಿಗಳು–ಎಲ್ಲರೂ ಒಂದೇ ಜಾಗದಲ್ಲಿ ಸೇರುತ್ತಾರೆ. ಹಗಲಿನ ಸಾಹಿತ್ಯ ಚರ್ಚೆಗಳು, ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಮುಂದುವರೆಯುವ ಮಾತುಕತೆಗಳು, ಕಾರಂತರ ಕ್ಯಾಂಟೀನ್ನ ಉಪ್ಪಿಟ್ಟು, ಟೌನ್ ಹಾಲ್ ಕ್ಯಾಂಟೀನ್ನ ಲೆಮನ್ ಟೀ ಇವೆಲ್ಲ ಸೇರಿ ಒಂದು ಸಾಂಸ್ಕೃತಿಕ ಅನುಭವವಾಗುತ್ತದೆ. ಸಂಜೆ ನಾಟಕದೊಂದಿಗೆ ಅದು ಪೂರ್ಣಗೊಳ್ಳುತ್ತದೆ. ಈ ನಿರಂತರ ಸಂವಾದವೇ ಒಂದು ಸಮುದಾಯವನ್ನು ನಿರ್ಮಿಸುತ್ತದೆ.</p>.<p>ಇಷ್ಟೇ ಮುಖ್ಯವಾದುದು ‘ಭಾಗವತರು’ ನಡೆಸಿದ ಗೀತಗಾಯನ ಕಾರ್ಯಕ್ರಮಗಳು. ಭಾವಗೀತೆಗಳ ಜೊತೆಗೆ ದಾಸರ ಕೀರ್ತನೆಗಳು, ವಚನ, ತತ್ವಪದ, ಜನಪದ, ರಂಗಗೀತೆ, ಹಿಂದೂಸ್ತಾನಿ ಸಂಗೀತ–ಹೀಗೆ ಸಂಗೀತವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ನನಗೆ ಮರೆಯಲಾಗದ ಕಾರ್ಯಕ್ರಮಗಳಲ್ಲಿ ಸಿ. ಅಶ್ವತ್, ಶಿವಮೊಗ್ಗ ಸುಬ್ಬಣ್ಣ, ಉಸ್ತಾದ್ ಬಾಲೇಖಾನ್ ಸಹೋದರರು, ಪಂ. ರಾಜಶೇಖರ್ ಮನ್ಸೂರ್ ಅವರ ಗಾಯನ ಪ್ರಮುಖ. ಸಂಗೀತವೂ ಇಲ್ಲಿ ಒಂದು ಸೇತುವೆಯಾಗಿದೆ.</p>.<p>ಹವ್ಯಾಸಿ ರಂಗಭೂಮಿಯಲ್ಲಿ ಇರುವವರು ವೃತ್ತಿ ರಂಗಭೂಮಿ ಬಗೆಗೆ ಕಡಿಮೆ ಮಾತನಾಡುವುದು ಸಾಮಾನ್ಯ. ಆದರೆ ವೃತ್ತಿ ರಂಗಭೂಮಿಯು ಪ್ರೇಕ್ಷಕರೊಂದಿಗೆ ಹೊಂದಿರುವ ಸಂಬಂಧವನ್ನು ನಾವು ದೂರದಿಂದ ಊಹಿಸಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಪ್ರವಾಸದ ವೇಳೆ ಜೇವರ್ಗಿ ರಾಜಣ್ಣ ಅವರ ನಾಟಕಕ್ಕೆ ಟಿಕೆಟ್ ಸಿಗದೆ ಹೋಗಿದ್ದ ನನಗೆ, ಅವರ ತಂಡವನ್ನು ಕಲಾಕ್ಷೇತ್ರಕ್ಕೆ ಕರೆತಂದ ‘ಭಾಗವತರು’ ಕಾರಣದಿಂದಲೇ ನಂತರ ಆ ನಾಟಕ ನೋಡಲು ಸಾಧ್ಯವಾಯಿತು.</p>.<p>ಹೀಗೆ ಬೇರೆಬೇರೆ ಕಡೆಗಳಿಂದ ಒಳ್ಳೆಯದನ್ನು ಹೆಕ್ಕಿ ತಂದು, ಅದಕ್ಕೆ ವೇದಿಕೆ ಕಲ್ಪಿಸಿ, ನೇರವಾಗಿ ಅನುಭವಿಸುವ ಅವಕಾಶ ನೀಡಿರುವುದು ತಂಡದ ದೊಡ್ಡ ಸಾಧನೆ. ಜೊತೆಗೆ ಪುಸ್ತಕ ಪ್ರಕಟಣೆ ಕೂಡ ಇವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರ. ‘ಅಷ್ಟ ದಿಗ್ಗಜರು’, ‘ಸಾಂಸ್ಕೃತಿಕ ಲೋಕದಲ್ಲಿ ಬರಗೂರು’, ‘ನಿತ್ಯೋತ್ಸವ ಕವಿಗೆ 80’, ‘ಯು.ಆರ್. ಅನಂತಮೂರ್ತಿ ಮರುಓದಿನ ನೆಲೆಗಳು’, ‘ಲಂಕೇಶ್–90’ ಮುಂತಾದ ಹಲವು ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ನೀಡಿದೆ. ಈ ಪ್ರಕಟಣೆಗಳು ಒಂದು ಕಾಲದ ದಾಖಲೆಗಳಾಗಿವೆ.</p>.<p>‘ಯಾವುದಾದರೂ ಹಂತದಲ್ಲಿ ಸವಾಲುಗಳು ನಿಮಗೆ ಸಾಕು ಎಂದು ಅನಿಸಿತೇ?’ ಎಂಬ ಪ್ರಶ್ನೆಗೆ ರೇವಣ್ಣ ಅವರ ಉತ್ತರ ಸರಳ, ‘ಎಂದಿಗೂ ಇಲ್ಲ. ಮೊದಲ ವರ್ಷಗಳಲ್ಲಿ ತೊಂದರೆಗಳು ಇದ್ದವು. ಆದರೆ ನಾನು ರೈತ. ಏನಾದರೂ ಆಗಲಿ, ನನ್ನ ಕೆಲಸ ನಾನು ಮಾಡುತ್ತೇನೆ ಎಂದು ನಿಂತೆ’.</p>.<p>ಅವರು ಕೇವಲ ನಿಂತಿಲ್ಲ; 25 ವರ್ಷಗಳಿಂದ ‘ಭಾಗವತರು’ ತಂಡವನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಅವರ ಹಟ, ಅವರ ದೃಷ್ಟಿ ಇವೇ ‘ಭಾಗವತರು’ ಎಂಬ ಚಳವಳಿಯ ನಿಜವಾದ ಶಕ್ತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>