<p>ಚಿತ್ರದುರ್ಗದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ನಿಂತಿದ್ದಾಗ ಜನಜಂಗುಳಿ ಇತ್ತು. ಬಸ್ಗಳ ಗದ್ದಲ, ವ್ಯಾಪಾರಿಗಳ ಕೂಗು, ಓಡಾಡುವ ಜನ–ಎಲ್ಲವೂ ಚಲನೆಯಲ್ಲಿದ್ದರೂ ಜೀವಂತಿಕೆ ಕಾಣಿಸುತ್ತಿರಲಿಲ್ಲ. ಅಷ್ಟರಲ್ಲಿ ದೂರದಿಂದ ಬಣ್ಣ ಬಣ್ಣದ ವೇಷಭೂಷಣದಲ್ಲಿ ಹಾಸ್ಯ ಕಲಾವಿದ ಇಟಗಿ ಉಮೇಶ್ ನಿಧಾನವಾಗಿ ನಡೆದುಬಂದರು. ತಲೆಯ ಮೇಲೆ ಕಿರೀಟದಂತಹ ಅಲಂಕಾರ, ಮುಖದಲ್ಲಿ ಹಿತಮಿತವಾದ ಮೇಕಪ್, ಕಣ್ಣಲ್ಲಿ ಹೊಳಪು, ತುಟಿಗಳಲ್ಲಿ ನಗು. ಅವರು ಎರಡು ಮಾತುಗಳನ್ನಾಡಿದ ಕ್ಷಣಕ್ಕೆ ಸುತ್ತಲಿನ ಜನ ನಕ್ಕರು. ಆ ವ್ಯಕ್ತಿ ಮತ್ತೆ ಲಘು ಬಗೆಯಲ್ಲಿ ಹೆಜ್ಜೆ ಹಾಕಿದರು. ಮಕ್ಕಳತ್ತ ಕೈಬೀಸಿದರು. ಕ್ಷಣಾರ್ಧದಲ್ಲಿ ಸಪ್ಪೆಯಾಗಿದ್ದ ವಾತಾವರಣ ಜೀವ ಪಡೆಯಿತು.</p>.<p>ಅನ್ನಕ್ಕಾಗಿ ಎಲೆಕ್ಟ್ರೀಷಿಯನ್ ವೃತ್ತಿ ಮಾಡುತ್ತಿರುವ ಉಮೇಶ್ಗೆ ಜನರನ್ನು ರಂಜಿಸುವುದೇ ಜೀವನದ ಧ್ಯೇಯ. ‘ನೋವು ಯಾರಿಗಿಲ್ಲ? ದಿನಪೂರ್ತಿ ದುಡಿದವರ ಮುಖದಲ್ಲಿ ಸ್ವಲ್ಪ ಹೊತ್ತಾದರೂ ನಗು ಅರಳಬೇಕು. ನಗು ಮದ್ದು ಆಗಬೇಕು’ ಎನ್ನುತ್ತಾರೆ ಅವರು.</p>.<p>ಬಹುತೇಕ ಹಾಸ್ಯ ಕಲಾವಿದರು ವೇದಿಕೆಯ ಮೇಲೆ ಮಾತ್ರ ವಿದೂಷಕರಾಗುತ್ತಾರೆ. ಸನ್ನಿವೇಶ ಮುಗಿದರೆ ಅವರು ಸಹಜ ಜೀವನಕ್ಕೆ ಮರಳುತ್ತಾರೆ. ಆದರೆ ಉಮೇಶ್ಗೆ ಜಗತ್ತೇ ರಂಗಮಂಚ. ಬೀದಿಗಳೇ ವೇದಿಕೆ. ಜನರೇ ಪ್ರೇಕ್ಷಕರು. ಆದರೆ, ಇವರ ಪ್ರದರ್ಶನಕ್ಕೆ ಯಾವುದೇ ಟಿಕೆಟ್ ಇರುವುದಿಲ್ಲ. ಎಲ್ಲವೂ ಉಚಿತ. ದಿನ ಬೆಳಗಾದರೆ ಒಂದೊಂದು ಹೊಸ ರೂಪದಲ್ಲಿ ದುರ್ಗದ ಬೀದಿಗಳಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಪ್ರಿಯವಾದ ಹವ್ಯಾಸ. ಆಹ್ವಾನ ಇರಲಿ ಇರದಿರಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಹಾಜರಾತಿ ಕಾರ್ಯಕ್ರಮದ ಕಳೆ ಹೆಚ್ಚಿಸುತ್ತದೆ.</p>.<p><strong>ಮಾಸಲು ಬಟ್ಟೆಗಳಲ್ಲೇ ಮಾಂತ್ರಿಕತೆ</strong></p>.<p>ಉಮೇಶ್ ಅವರು ವೇಷಗಳಿಗಾಗಿ ದುಬಾರಿ ಖರ್ಚು ಮಾಡುವುದಿಲ್ಲ. ಮನೆಯವರ ಹಳೆಯ ಬಟ್ಟೆಗಳನ್ನು ಹೊಸ ವಿನ್ಯಾಸದಲ್ಲಿ ರೂಪಿಸುವುದು ಅವರ ಸೃಜನಶೀಲತೆ. ಹಳೆಯ ರೋಲ್ಡ್ಗೋಲ್ಡ್ ಆಭರಣಗಳು, ಉದುರಿದ ನವಿಲುಗರಿಗಳು, ಸೆಣಬಿನ ದಾರ, ಹಳೆಯ ಪೇಟ–ಇವೆಲ್ಲ ಅವರ ಕೈಯಲ್ಲಿ ಹೊಸ ರೂಪ, ಅರ್ಥ ಪಡೆಯುತ್ತವೆ. ಒಂದೇ ಉಡುಪನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿ ನಾಯಕ, ಖಳನಾಯಕ, ಅರಸ, ಸೈನಿಕ, ಭಿಕ್ಷುಕ, ಬುಡಕಟ್ಟು, ರಾಕ್ಷಸ–ಹೀಗೆ ಅನೇಕ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.</p>.<p>ಮೇಕಪ್ಗೂ ಅವರು ಅಗ್ಗದ ಬೆಲೆಯಲ್ಲಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ. ವಿಭೂತಿ, ಕುಂಕುಮ, ಸ್ವಲ್ಪ ಲಿಪ್ಸ್ಟಿಕ್ ಇಷ್ಟರಲ್ಲೇ ಅವರ ಮುಖಭಾವ ಜೀವಂತವಾಗುತ್ತದೆ. ಮೂರು ದಶಕಗಳಿಂದ ದುರ್ಗದ ಬೀದಿಗಳಲ್ಲಿ ಅವರು ತಾಳಿದ ಅಸಂಖ್ಯ ಅವತಾರಗಳು ಅವರ ಕಲ್ಪನಾಶಕ್ತಿಗೆ ಸಾಕ್ಷಿ.</p>.<p>ಈ ಆಸಕ್ತಿಯ ಬೀಜ ಬಾಲ್ಯದಲ್ಲೇ ಬಿತ್ತಲ್ಪಟ್ಟಿತು. ಮನೆಯಲ್ಲಿ ಹಿರಿಯರು ಮಣ್ಣು, ಸಗಣಿಯಿಂದ ಗೊಂಬೆಗಳನ್ನು ಮಾಡುತ್ತಿದ್ದರು. ಅವುಗಳಿಗೆ ಅಲಂಕಾರ ಮಾಡುತ್ತಿದ್ದ ದೃಶ್ಯ ಬಾಲಕ ಉಮೇಶ್ ಮನದಲ್ಲಿ ಆಳವಾಗಿ ಅಚ್ಚೊತ್ತಿತ್ತು. ‘ನಿರ್ಜೀವ ಗೊಂಬೆಗಳಿಗೂ ಅಷ್ಟು ಸೌಂದರ್ಯ ಕೊಡಬಹುದು ಎಂದರೆ, ನಾನೇಕೆ ಮಾಡಿಕೊಳ್ಳಬಾರದು?’ ಎಂಬ ಪ್ರಶ್ನೆ ಅವರೊಳಗಿನ ಕಲಾವಿದನನ್ನು ಎಬ್ಬಿಸಿತು.</p>.<p>ಹಳೆಯ ಸಿನಿಮಾಗಳು, ವಿಭಿನ್ನ ಉಡುಗೆ ಸಂಸ್ಕೃತಿಗಳ ಪ್ರಭಾವ, ಬಣ್ಣಬಣ್ಣದ ಪಾತ್ರಗಳು–ಇವುಗಳೆಲ್ಲ ಅವರ ಕಲ್ಪನೆಗೆ ರೆಕ್ಕೆಗಳಾದವು. ಆ ರೆಕ್ಕೆಗಳು ಇಂದಿಗೂ ದುರ್ಗದ ಗಾಳಿಯಲ್ಲಿ ಹಾರುತ್ತಿವೆ.</p>.<p><strong>ನಗುವಿನ ಸಾಮಾಜಿಕ ಅರ್ಥ</strong></p>.<p>ಉಮೇಶ್ ಕೇವಲ ಮನರಂಜನೆಗಾಗಿ ವೇಷ ತೊಡುವುದಿಲ್ಲ. ಅವರ ಮಾತುಗಳಲ್ಲಿ ಸಾಮಾಜಿಕ ಪ್ರಜ್ಞೆಯ ಛಾಯೆ ಇರುತ್ತದೆ. ಚುಟುಕು ಹಾಸ್ಯದಲ್ಲೇ ಜೀವನ ಮೌಲ್ಯಗಳನ್ನು ಬಿತ್ತುತ್ತಾರೆ. ‘ನಗು ಎನ್ನುವುದು ಎಲ್ಲರಿಗೂ ಉಚಿತವಾಗಿರಬೇಕು’ ಎಂಬುದು ಅವರ ನಂಬಿಕೆ.</p>.<p>ಮಕ್ಕಳು, ವಯೋವೃದ್ಧರು, ಅಂಗವಿಕಲರೊಂದಿಗೆ ಮಾತನಾಡಿ ನಗಿಸುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ಕೆಲವೊಮ್ಮೆ ದುಗುಡದಿಂದ ಕೂತಿರುವ ಹಿರಿಯರ ಬಳಿಗೆ ಹೋಗಿ ಎರಡು ಮಾತುಗಳನ್ನಾಡಿ ನಗಿಸುತ್ತಾರೆ. ಶಾಲಾ ಮಕ್ಕಳಿಗಾಗಿ ಹಾಡಿಗೆ ಹೆಜ್ಜೆ ಹಾಕಿ ಉತ್ಸಾಹ ತುಂಬುತ್ತಾರೆ. ಹಿಂದಿ, ಕನ್ನಡ, ತೆಲುಗು ಹಾಗೂ ಪಾಶ್ಚಾತ್ಯ ಹಾಡುಗಳಿಗೂ ಹೆಜ್ಜೆ ಹಾಕುವ ಅವರ ನೃತ್ಯ ಜನರನ್ನು ಸೆಳೆಯುತ್ತದೆ.</p>.<p>ಐವತ್ತೆಂಟರ ಹರೆಯದ ಉಮೇಶ್ ಅವರಲ್ಲಿರುವ ಚಾಣಾಕ್ಷ ಮಾತು, ಅರ್ಥಗರ್ಭಿತ ಹಾಸ್ಯ, ನೃತ್ಯ ಪ್ರಾವೀಣ್ಯ–ಇವುಗಳ ಜೊತೆಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಮನಸ್ಸು ಅವರನ್ನು ವಿಭಿನ್ನರನ್ನಾಗಿಸಿದೆ. ‘ನನ್ನನ್ನು ನೋಡಿ ನಾಲ್ವರು ನಕ್ಕರೆ ಸಾಕು, ನಾನು ನಿರುಮ್ಮಳ’ ಎನ್ನುತ್ತಾರೆ ಅವರು.</p>.<p>ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವರ ಸುತ್ತ ಗುಂಪು ಸೇರುತ್ತದೆ. ಫೋಟೊ ತೆಗೆಯುತ್ತಾರೆ. ಮಾತನಾಡುತ್ತಾರೆ. ಕೆಲವರು ಆಶ್ಚರ್ಯದಿಂದ ನೋಡುವರು; ಕೆಲವರು ಲಘುವಾಗಿ ಕಾಣುವರು. ಆದರೆ ಉಮೇಶ್ ಅದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳುವುದಿಲ್ಲ.</p>.<p><strong>ವಿದೂಷಕನಲ್ಲೂ ವಿಷಾದ..?</strong></p>.<p>ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ ಉಮೇಶ್ ಒಳಗೊಂದಿಷ್ಟು ವಿಷಾದಗಳೂ ಇವೆ. ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸುವವರಿಗಿಂತ ಕೊಂಕು ಮಾತನಾಡುವವರೇ ಹೆಚ್ಚು ಎನ್ನುವ ನೋವು ಅವರ ಆಪ್ತರ ಮಾತಿನಲ್ಲಿ ಇಣುಕುತ್ತದೆ. ಅವಕಾಶಗಳು, ಮಾನ್ಯತೆ–ಇವುಗಳ ಕೊರತೆ ಇರುವುದೂ ಸತ್ಯ.</p>.<p>ಆದರೂ ಉಮೇಶ್ ದುಗುಡವನ್ನು ಹೊರಗೆ ತೋರಿಸುವುದಿಲ್ಲ. ‘ನಕ್ಕು ಸಾಯ್ರೋ ನಕ್ಕ ಸಾಯ್ರಿ…’ ಎಂದು ದ.ರಾ. ಬೇಂದ್ರೆ ಅವರ ಸಾಲುಗಳನ್ನು ಉಲ್ಲೇಖಿಸುತ್ತಾರೆ. ‘ಜನರನ್ನು ನಗಿಸುವುದೇ ಮುಖ್ಯ. ಉಳಿದದ್ದು ಗೌಣ. ನನ್ನೊಳಗಿನ ವಿಷಾದಗಳು ನನ್ನ ಅಭಿರುಚಿ ಮೇಲೆ ಸವಾರಿ ಮಾಡಿಲ್ಲ’ ಎನ್ನುತ್ತಾರೆ ದೃಢವಾಗಿ. ಕೆಲವೊಮ್ಮೆ ಆ ವಿಷಾದಗಳೇ ಹಾಸ್ಯದ ವಿಷಯವಾಗುತ್ತವೆ ಎನ್ನುವುದೂ ಅವರ ಮಾತು.</p>.<p><strong>ಅವತಾರಗಳ ಪಯಣ</strong></p>.<p>ಮೂರು ದಶಕಗಳು ಒಂದೇ ನಗರದಲ್ಲಿ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ಉಮೇಶ್ ಅದನ್ನು ಸಾಧಿಸಿದ್ದಾರೆ. ಒಂದೇ ಉಡುಪನ್ನು ಹೊಸ ವಿನ್ಯಾಸದಲ್ಲಿ ತಾಳುವುದು, ಸಂದರ್ಭಕ್ಕೆ ತಕ್ಕಂತೆ ಪಾತ್ರ ರೂಪಿಸುವುದು–ಇವು ಅವರ ನೈಪುಣ್ಯ. ಅವರ ಅವತಾರಗಳು ಕೇವಲ ವೇಷವಲ್ಲ; ಬದುಕಿನ ಅಭಿವ್ಯಕ್ತಿ.</p>.<p>ಮಾತು ಮುಗಿಯುವಷ್ಟರಲ್ಲಿ ಅವರು ‘ಲವ್ ಮೀ ಆರ್ ಹೇಟ್ ಮಿ…’ ಎಂದು ಹಾಡುತ್ತಾ, ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಒನಕೆ ಓಬವ್ವ ಸ್ಟೇಡಿಯಂ ಕಡೆಗೆ ಸಾಗಿದರು.</p>.<p>ದುರ್ಗದ ಬೀದಿಗಳಲ್ಲಿ ಮತ್ತೊಂದು ದಿನ, ಮತ್ತೊಂದು ಅವತಾರ–ಮತ್ತೆ ನಗುವ ಹೊಳೆ ಹರಿಸಲು ಸಿದ್ಧ. ಜಗತ್ತೇ ರಂಗಮಂಚ ಎಂದು ನಂಬಿದ ಹಾಸ್ಯಗಾರನ ಪಯಣ ಹೀಗೇ ಮುಂದುವರಿಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ನಿಂತಿದ್ದಾಗ ಜನಜಂಗುಳಿ ಇತ್ತು. ಬಸ್ಗಳ ಗದ್ದಲ, ವ್ಯಾಪಾರಿಗಳ ಕೂಗು, ಓಡಾಡುವ ಜನ–ಎಲ್ಲವೂ ಚಲನೆಯಲ್ಲಿದ್ದರೂ ಜೀವಂತಿಕೆ ಕಾಣಿಸುತ್ತಿರಲಿಲ್ಲ. ಅಷ್ಟರಲ್ಲಿ ದೂರದಿಂದ ಬಣ್ಣ ಬಣ್ಣದ ವೇಷಭೂಷಣದಲ್ಲಿ ಹಾಸ್ಯ ಕಲಾವಿದ ಇಟಗಿ ಉಮೇಶ್ ನಿಧಾನವಾಗಿ ನಡೆದುಬಂದರು. ತಲೆಯ ಮೇಲೆ ಕಿರೀಟದಂತಹ ಅಲಂಕಾರ, ಮುಖದಲ್ಲಿ ಹಿತಮಿತವಾದ ಮೇಕಪ್, ಕಣ್ಣಲ್ಲಿ ಹೊಳಪು, ತುಟಿಗಳಲ್ಲಿ ನಗು. ಅವರು ಎರಡು ಮಾತುಗಳನ್ನಾಡಿದ ಕ್ಷಣಕ್ಕೆ ಸುತ್ತಲಿನ ಜನ ನಕ್ಕರು. ಆ ವ್ಯಕ್ತಿ ಮತ್ತೆ ಲಘು ಬಗೆಯಲ್ಲಿ ಹೆಜ್ಜೆ ಹಾಕಿದರು. ಮಕ್ಕಳತ್ತ ಕೈಬೀಸಿದರು. ಕ್ಷಣಾರ್ಧದಲ್ಲಿ ಸಪ್ಪೆಯಾಗಿದ್ದ ವಾತಾವರಣ ಜೀವ ಪಡೆಯಿತು.</p>.<p>ಅನ್ನಕ್ಕಾಗಿ ಎಲೆಕ್ಟ್ರೀಷಿಯನ್ ವೃತ್ತಿ ಮಾಡುತ್ತಿರುವ ಉಮೇಶ್ಗೆ ಜನರನ್ನು ರಂಜಿಸುವುದೇ ಜೀವನದ ಧ್ಯೇಯ. ‘ನೋವು ಯಾರಿಗಿಲ್ಲ? ದಿನಪೂರ್ತಿ ದುಡಿದವರ ಮುಖದಲ್ಲಿ ಸ್ವಲ್ಪ ಹೊತ್ತಾದರೂ ನಗು ಅರಳಬೇಕು. ನಗು ಮದ್ದು ಆಗಬೇಕು’ ಎನ್ನುತ್ತಾರೆ ಅವರು.</p>.<p>ಬಹುತೇಕ ಹಾಸ್ಯ ಕಲಾವಿದರು ವೇದಿಕೆಯ ಮೇಲೆ ಮಾತ್ರ ವಿದೂಷಕರಾಗುತ್ತಾರೆ. ಸನ್ನಿವೇಶ ಮುಗಿದರೆ ಅವರು ಸಹಜ ಜೀವನಕ್ಕೆ ಮರಳುತ್ತಾರೆ. ಆದರೆ ಉಮೇಶ್ಗೆ ಜಗತ್ತೇ ರಂಗಮಂಚ. ಬೀದಿಗಳೇ ವೇದಿಕೆ. ಜನರೇ ಪ್ರೇಕ್ಷಕರು. ಆದರೆ, ಇವರ ಪ್ರದರ್ಶನಕ್ಕೆ ಯಾವುದೇ ಟಿಕೆಟ್ ಇರುವುದಿಲ್ಲ. ಎಲ್ಲವೂ ಉಚಿತ. ದಿನ ಬೆಳಗಾದರೆ ಒಂದೊಂದು ಹೊಸ ರೂಪದಲ್ಲಿ ದುರ್ಗದ ಬೀದಿಗಳಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಪ್ರಿಯವಾದ ಹವ್ಯಾಸ. ಆಹ್ವಾನ ಇರಲಿ ಇರದಿರಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಹಾಜರಾತಿ ಕಾರ್ಯಕ್ರಮದ ಕಳೆ ಹೆಚ್ಚಿಸುತ್ತದೆ.</p>.<p><strong>ಮಾಸಲು ಬಟ್ಟೆಗಳಲ್ಲೇ ಮಾಂತ್ರಿಕತೆ</strong></p>.<p>ಉಮೇಶ್ ಅವರು ವೇಷಗಳಿಗಾಗಿ ದುಬಾರಿ ಖರ್ಚು ಮಾಡುವುದಿಲ್ಲ. ಮನೆಯವರ ಹಳೆಯ ಬಟ್ಟೆಗಳನ್ನು ಹೊಸ ವಿನ್ಯಾಸದಲ್ಲಿ ರೂಪಿಸುವುದು ಅವರ ಸೃಜನಶೀಲತೆ. ಹಳೆಯ ರೋಲ್ಡ್ಗೋಲ್ಡ್ ಆಭರಣಗಳು, ಉದುರಿದ ನವಿಲುಗರಿಗಳು, ಸೆಣಬಿನ ದಾರ, ಹಳೆಯ ಪೇಟ–ಇವೆಲ್ಲ ಅವರ ಕೈಯಲ್ಲಿ ಹೊಸ ರೂಪ, ಅರ್ಥ ಪಡೆಯುತ್ತವೆ. ಒಂದೇ ಉಡುಪನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿ ನಾಯಕ, ಖಳನಾಯಕ, ಅರಸ, ಸೈನಿಕ, ಭಿಕ್ಷುಕ, ಬುಡಕಟ್ಟು, ರಾಕ್ಷಸ–ಹೀಗೆ ಅನೇಕ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.</p>.<p>ಮೇಕಪ್ಗೂ ಅವರು ಅಗ್ಗದ ಬೆಲೆಯಲ್ಲಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ. ವಿಭೂತಿ, ಕುಂಕುಮ, ಸ್ವಲ್ಪ ಲಿಪ್ಸ್ಟಿಕ್ ಇಷ್ಟರಲ್ಲೇ ಅವರ ಮುಖಭಾವ ಜೀವಂತವಾಗುತ್ತದೆ. ಮೂರು ದಶಕಗಳಿಂದ ದುರ್ಗದ ಬೀದಿಗಳಲ್ಲಿ ಅವರು ತಾಳಿದ ಅಸಂಖ್ಯ ಅವತಾರಗಳು ಅವರ ಕಲ್ಪನಾಶಕ್ತಿಗೆ ಸಾಕ್ಷಿ.</p>.<p>ಈ ಆಸಕ್ತಿಯ ಬೀಜ ಬಾಲ್ಯದಲ್ಲೇ ಬಿತ್ತಲ್ಪಟ್ಟಿತು. ಮನೆಯಲ್ಲಿ ಹಿರಿಯರು ಮಣ್ಣು, ಸಗಣಿಯಿಂದ ಗೊಂಬೆಗಳನ್ನು ಮಾಡುತ್ತಿದ್ದರು. ಅವುಗಳಿಗೆ ಅಲಂಕಾರ ಮಾಡುತ್ತಿದ್ದ ದೃಶ್ಯ ಬಾಲಕ ಉಮೇಶ್ ಮನದಲ್ಲಿ ಆಳವಾಗಿ ಅಚ್ಚೊತ್ತಿತ್ತು. ‘ನಿರ್ಜೀವ ಗೊಂಬೆಗಳಿಗೂ ಅಷ್ಟು ಸೌಂದರ್ಯ ಕೊಡಬಹುದು ಎಂದರೆ, ನಾನೇಕೆ ಮಾಡಿಕೊಳ್ಳಬಾರದು?’ ಎಂಬ ಪ್ರಶ್ನೆ ಅವರೊಳಗಿನ ಕಲಾವಿದನನ್ನು ಎಬ್ಬಿಸಿತು.</p>.<p>ಹಳೆಯ ಸಿನಿಮಾಗಳು, ವಿಭಿನ್ನ ಉಡುಗೆ ಸಂಸ್ಕೃತಿಗಳ ಪ್ರಭಾವ, ಬಣ್ಣಬಣ್ಣದ ಪಾತ್ರಗಳು–ಇವುಗಳೆಲ್ಲ ಅವರ ಕಲ್ಪನೆಗೆ ರೆಕ್ಕೆಗಳಾದವು. ಆ ರೆಕ್ಕೆಗಳು ಇಂದಿಗೂ ದುರ್ಗದ ಗಾಳಿಯಲ್ಲಿ ಹಾರುತ್ತಿವೆ.</p>.<p><strong>ನಗುವಿನ ಸಾಮಾಜಿಕ ಅರ್ಥ</strong></p>.<p>ಉಮೇಶ್ ಕೇವಲ ಮನರಂಜನೆಗಾಗಿ ವೇಷ ತೊಡುವುದಿಲ್ಲ. ಅವರ ಮಾತುಗಳಲ್ಲಿ ಸಾಮಾಜಿಕ ಪ್ರಜ್ಞೆಯ ಛಾಯೆ ಇರುತ್ತದೆ. ಚುಟುಕು ಹಾಸ್ಯದಲ್ಲೇ ಜೀವನ ಮೌಲ್ಯಗಳನ್ನು ಬಿತ್ತುತ್ತಾರೆ. ‘ನಗು ಎನ್ನುವುದು ಎಲ್ಲರಿಗೂ ಉಚಿತವಾಗಿರಬೇಕು’ ಎಂಬುದು ಅವರ ನಂಬಿಕೆ.</p>.<p>ಮಕ್ಕಳು, ವಯೋವೃದ್ಧರು, ಅಂಗವಿಕಲರೊಂದಿಗೆ ಮಾತನಾಡಿ ನಗಿಸುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ಕೆಲವೊಮ್ಮೆ ದುಗುಡದಿಂದ ಕೂತಿರುವ ಹಿರಿಯರ ಬಳಿಗೆ ಹೋಗಿ ಎರಡು ಮಾತುಗಳನ್ನಾಡಿ ನಗಿಸುತ್ತಾರೆ. ಶಾಲಾ ಮಕ್ಕಳಿಗಾಗಿ ಹಾಡಿಗೆ ಹೆಜ್ಜೆ ಹಾಕಿ ಉತ್ಸಾಹ ತುಂಬುತ್ತಾರೆ. ಹಿಂದಿ, ಕನ್ನಡ, ತೆಲುಗು ಹಾಗೂ ಪಾಶ್ಚಾತ್ಯ ಹಾಡುಗಳಿಗೂ ಹೆಜ್ಜೆ ಹಾಕುವ ಅವರ ನೃತ್ಯ ಜನರನ್ನು ಸೆಳೆಯುತ್ತದೆ.</p>.<p>ಐವತ್ತೆಂಟರ ಹರೆಯದ ಉಮೇಶ್ ಅವರಲ್ಲಿರುವ ಚಾಣಾಕ್ಷ ಮಾತು, ಅರ್ಥಗರ್ಭಿತ ಹಾಸ್ಯ, ನೃತ್ಯ ಪ್ರಾವೀಣ್ಯ–ಇವುಗಳ ಜೊತೆಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಮನಸ್ಸು ಅವರನ್ನು ವಿಭಿನ್ನರನ್ನಾಗಿಸಿದೆ. ‘ನನ್ನನ್ನು ನೋಡಿ ನಾಲ್ವರು ನಕ್ಕರೆ ಸಾಕು, ನಾನು ನಿರುಮ್ಮಳ’ ಎನ್ನುತ್ತಾರೆ ಅವರು.</p>.<p>ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವರ ಸುತ್ತ ಗುಂಪು ಸೇರುತ್ತದೆ. ಫೋಟೊ ತೆಗೆಯುತ್ತಾರೆ. ಮಾತನಾಡುತ್ತಾರೆ. ಕೆಲವರು ಆಶ್ಚರ್ಯದಿಂದ ನೋಡುವರು; ಕೆಲವರು ಲಘುವಾಗಿ ಕಾಣುವರು. ಆದರೆ ಉಮೇಶ್ ಅದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳುವುದಿಲ್ಲ.</p>.<p><strong>ವಿದೂಷಕನಲ್ಲೂ ವಿಷಾದ..?</strong></p>.<p>ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ ಉಮೇಶ್ ಒಳಗೊಂದಿಷ್ಟು ವಿಷಾದಗಳೂ ಇವೆ. ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸುವವರಿಗಿಂತ ಕೊಂಕು ಮಾತನಾಡುವವರೇ ಹೆಚ್ಚು ಎನ್ನುವ ನೋವು ಅವರ ಆಪ್ತರ ಮಾತಿನಲ್ಲಿ ಇಣುಕುತ್ತದೆ. ಅವಕಾಶಗಳು, ಮಾನ್ಯತೆ–ಇವುಗಳ ಕೊರತೆ ಇರುವುದೂ ಸತ್ಯ.</p>.<p>ಆದರೂ ಉಮೇಶ್ ದುಗುಡವನ್ನು ಹೊರಗೆ ತೋರಿಸುವುದಿಲ್ಲ. ‘ನಕ್ಕು ಸಾಯ್ರೋ ನಕ್ಕ ಸಾಯ್ರಿ…’ ಎಂದು ದ.ರಾ. ಬೇಂದ್ರೆ ಅವರ ಸಾಲುಗಳನ್ನು ಉಲ್ಲೇಖಿಸುತ್ತಾರೆ. ‘ಜನರನ್ನು ನಗಿಸುವುದೇ ಮುಖ್ಯ. ಉಳಿದದ್ದು ಗೌಣ. ನನ್ನೊಳಗಿನ ವಿಷಾದಗಳು ನನ್ನ ಅಭಿರುಚಿ ಮೇಲೆ ಸವಾರಿ ಮಾಡಿಲ್ಲ’ ಎನ್ನುತ್ತಾರೆ ದೃಢವಾಗಿ. ಕೆಲವೊಮ್ಮೆ ಆ ವಿಷಾದಗಳೇ ಹಾಸ್ಯದ ವಿಷಯವಾಗುತ್ತವೆ ಎನ್ನುವುದೂ ಅವರ ಮಾತು.</p>.<p><strong>ಅವತಾರಗಳ ಪಯಣ</strong></p>.<p>ಮೂರು ದಶಕಗಳು ಒಂದೇ ನಗರದಲ್ಲಿ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ಉಮೇಶ್ ಅದನ್ನು ಸಾಧಿಸಿದ್ದಾರೆ. ಒಂದೇ ಉಡುಪನ್ನು ಹೊಸ ವಿನ್ಯಾಸದಲ್ಲಿ ತಾಳುವುದು, ಸಂದರ್ಭಕ್ಕೆ ತಕ್ಕಂತೆ ಪಾತ್ರ ರೂಪಿಸುವುದು–ಇವು ಅವರ ನೈಪುಣ್ಯ. ಅವರ ಅವತಾರಗಳು ಕೇವಲ ವೇಷವಲ್ಲ; ಬದುಕಿನ ಅಭಿವ್ಯಕ್ತಿ.</p>.<p>ಮಾತು ಮುಗಿಯುವಷ್ಟರಲ್ಲಿ ಅವರು ‘ಲವ್ ಮೀ ಆರ್ ಹೇಟ್ ಮಿ…’ ಎಂದು ಹಾಡುತ್ತಾ, ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಒನಕೆ ಓಬವ್ವ ಸ್ಟೇಡಿಯಂ ಕಡೆಗೆ ಸಾಗಿದರು.</p>.<p>ದುರ್ಗದ ಬೀದಿಗಳಲ್ಲಿ ಮತ್ತೊಂದು ದಿನ, ಮತ್ತೊಂದು ಅವತಾರ–ಮತ್ತೆ ನಗುವ ಹೊಳೆ ಹರಿಸಲು ಸಿದ್ಧ. ಜಗತ್ತೇ ರಂಗಮಂಚ ಎಂದು ನಂಬಿದ ಹಾಸ್ಯಗಾರನ ಪಯಣ ಹೀಗೇ ಮುಂದುವರಿಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>