<p>ನಲ್ದಾಣ</p>.<p>ನಲ್ದಾಣ (ನಾ). ಒಳ್ಳೆಯ ನೆಲೆ, ಆಶ್ರಯ</p>.<p>(ನಲ್+ತಾಣ)</p>.<p>ರಾಮಸೀತೆ ಲಕ್ಷ್ಮಣರು ಭಯಂಕರ ಕಾಡಿನಲ್ಲಿ ಅಲೆದಾಡುತ್ತ ಅದರ ಮಧ್ಯದಲ್ಲಿ ರಮ್ಯ ಅಗಸ್ತ್ಯ ಆಶ್ರಮವನ್ನು ಕಂಡರು. ಆ ಮುನಿಯು ಅತಿಥಿಯಾದ ಕಾರಣಪುರುಷನನ್ನು ಗುರುತಿಸಿದನು. ಮಣಿದ ಮೂವರನ್ನು ಸತ್ಕರಿಸಿದನು. ಅವರು ಕೆಲಕಾಲ ಗುರು ಸನ್ನಿಧಿಯಲ್ಲಿದ್ದರು. ಮುಂದಿನ ಅವಧಿಯ ವನವಾಸವನ್ನು ಕಳೆಯಲು ಸೂಕ್ತ ಸ್ಥಳವನ್ನು ತಿಳಿಸಲು ಋಷಿಯನ್ನು ಕೇಳಿಕೊಂಡರು.</p>.<p>ಆಗ ಕವಿಯು ಅಂತಹ ನೆಲೆಯನ್ನು ‘ನೆಮ್ಮದಿಯ ನಲ್ದಾಣ’ ಎಂದು ರಾಮನ ಶಾಂತ ಭಾವನೆಗೆ ಪದ ಹೆಣೆದಿದ್ದಾರೆ. ‘ನಲ್ದಾಣ’ ಕವಿ ಹೊಸತಾಗಿ ಕಲ್ಪಿಸಿರುವ ಕನ್ನಡ ನುಡಿಯ ನೆಲೆ; ಒಳ್ಳೆಯ ಸುಂದರ ಮನೋಹರ ತಾಣ. ಆಗ ಅಗಸ್ತ್ಯರು ಅವರಿಗೆ ಅಷ್ಟು ದೂರವಲ್ಲದ ‘ಪಂಚವಟಿ’ಯನ್ನು ಸೂಕ್ತ ‘ನಲ್ದಾಣ’ ಎಂದು ತಿಳಿಸುತ್ತಾರೆ.</p>.<p>ಕೆಲಕಾಲಮಲ್ಲಿ ಗುರುವರನ</p>.<p>ಸನ್ನಿಧಿಯೊಳಿರ್ದು, ತೆಂಕಣನಾಡ ಸೊಬಗಂ</p>.<p>ಸವಿದುಮರಿತುಮಲ್ಲಿಂದೆ ಮುಂದೆ ತೆರಳಲ್ಕೆಳಸಿ</p>.<p>ಬೇಡಿನಗಸ್ತ್ಯನಂ, ಮುಂದಣಾವಧಿಯ ವನದ</p>.<p>ವಾಸಮಂ ಕಳೆಯೆ ನೆಮ್ಮದಿಯ ನಲ್ದಾಣಮೊಂದಂ</p>.<p>ಕೃಪೆಯಿಂ ಬೆಸಸಿಮೆಂದು. </p>.<p>ಪಣೆಮಣಿ</p>.<p>ಪಣೆಮಣಿ(ಕ್ರಿ).(ನಮಸ್ಕಾರಾರ್ಥವಾಗಿ) <span class="media-container dcx_media_tab" data-dcx_media_config="{}" data-dcx_media_parsed="true" data-dcx_media_type="tab">→</span> ಹಣೆಯನ್ನು ಬಾಗಿಸು; ತಲೆಬಾಗು</p>.<p>(ಪಣೆ + ಮಣಿ)</p>.<p>ಯುದ್ಧದಲ್ಲಿ ರಾಮಚಂದ್ರನಿಂದ ರಾಕ್ಷಸ ರಾವಣನು ಹತನಾಗುವನು. ಆ ಸುದ್ದಿ ಕೇಳಿ ಸೀತೆಯು, ತನ್ನನ್ನು ಕರೆದೊಯ್ಯಲು ರಾಮದೂತರು ಬರುವರೆಂಬ ನಿರೀಕ್ಷೆಯಲ್ಲಿರುತ್ತಾಳೆ. ಆಗ ಅಲ್ಲಿಗೆ ಅನಲೆಯೊಡನೆ ಆಂಜನೇಯ ಮತ್ತು ವಿಭೀಷಣರು ಕೈ ಮುಗಿದು ಬರುತ್ತಾರೆ. ಮಾರುತಿಯು ವಿಭೀಷಣನಿಗೆ ‘ಪ್ರಭುವಿನ ಆಣತಿಯಂತೆ ಲೋಕ ಮಾನ್ಯೆಗೆ ಶಿರಸ್ನಾನ ಮಾಡಿಸಿ ಶೀಘ್ರದಿಂದ ಕರೆದು ತಾ’ ಎಂದು ಹೇಳುವನು.</p>.<p>ಮತ್ತೆ ಮೈಥಿಲಿಗೆ ತಲೆಬಾಗಿಸಿ ನಮಸ್ಕರಿಸುವನು. ಕವಿಯು ಆ ಭಾವಕ್ಕೆ ಸಮನಾದ ಹೊಸಪದ ‘ಪಣೆಮಣಿ’ ನೂತು ಕಾವ್ಯ ಹೆಣೆದಿದ್ದಾರೆ.</p>.<p>ಮತ್ತೆ ಮೈಥಿಲಿಗೆ</p>.<p>ಪಣೆಮಣಿದು ಕೈಮುಗಿದು <span class="media-container dcx_media_tab" data-dcx_media_config="{}" data-dcx_media_parsed="true" data-dcx_media_type="tab">→</span>ಬೀಳ್ಕೊಂಟ್ಟನಂಜನಾ</p>.<p>ನಂದನಂ ಪ್ರತಿವಂದನಂಗೆಯ್ದಳಂ, ಪೂಜ್ಯೆ</p>.<p>ರಘೂನಂದನಾನಂದೆಯಂ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಲ್ದಾಣ</p>.<p>ನಲ್ದಾಣ (ನಾ). ಒಳ್ಳೆಯ ನೆಲೆ, ಆಶ್ರಯ</p>.<p>(ನಲ್+ತಾಣ)</p>.<p>ರಾಮಸೀತೆ ಲಕ್ಷ್ಮಣರು ಭಯಂಕರ ಕಾಡಿನಲ್ಲಿ ಅಲೆದಾಡುತ್ತ ಅದರ ಮಧ್ಯದಲ್ಲಿ ರಮ್ಯ ಅಗಸ್ತ್ಯ ಆಶ್ರಮವನ್ನು ಕಂಡರು. ಆ ಮುನಿಯು ಅತಿಥಿಯಾದ ಕಾರಣಪುರುಷನನ್ನು ಗುರುತಿಸಿದನು. ಮಣಿದ ಮೂವರನ್ನು ಸತ್ಕರಿಸಿದನು. ಅವರು ಕೆಲಕಾಲ ಗುರು ಸನ್ನಿಧಿಯಲ್ಲಿದ್ದರು. ಮುಂದಿನ ಅವಧಿಯ ವನವಾಸವನ್ನು ಕಳೆಯಲು ಸೂಕ್ತ ಸ್ಥಳವನ್ನು ತಿಳಿಸಲು ಋಷಿಯನ್ನು ಕೇಳಿಕೊಂಡರು.</p>.<p>ಆಗ ಕವಿಯು ಅಂತಹ ನೆಲೆಯನ್ನು ‘ನೆಮ್ಮದಿಯ ನಲ್ದಾಣ’ ಎಂದು ರಾಮನ ಶಾಂತ ಭಾವನೆಗೆ ಪದ ಹೆಣೆದಿದ್ದಾರೆ. ‘ನಲ್ದಾಣ’ ಕವಿ ಹೊಸತಾಗಿ ಕಲ್ಪಿಸಿರುವ ಕನ್ನಡ ನುಡಿಯ ನೆಲೆ; ಒಳ್ಳೆಯ ಸುಂದರ ಮನೋಹರ ತಾಣ. ಆಗ ಅಗಸ್ತ್ಯರು ಅವರಿಗೆ ಅಷ್ಟು ದೂರವಲ್ಲದ ‘ಪಂಚವಟಿ’ಯನ್ನು ಸೂಕ್ತ ‘ನಲ್ದಾಣ’ ಎಂದು ತಿಳಿಸುತ್ತಾರೆ.</p>.<p>ಕೆಲಕಾಲಮಲ್ಲಿ ಗುರುವರನ</p>.<p>ಸನ್ನಿಧಿಯೊಳಿರ್ದು, ತೆಂಕಣನಾಡ ಸೊಬಗಂ</p>.<p>ಸವಿದುಮರಿತುಮಲ್ಲಿಂದೆ ಮುಂದೆ ತೆರಳಲ್ಕೆಳಸಿ</p>.<p>ಬೇಡಿನಗಸ್ತ್ಯನಂ, ಮುಂದಣಾವಧಿಯ ವನದ</p>.<p>ವಾಸಮಂ ಕಳೆಯೆ ನೆಮ್ಮದಿಯ ನಲ್ದಾಣಮೊಂದಂ</p>.<p>ಕೃಪೆಯಿಂ ಬೆಸಸಿಮೆಂದು. </p>.<p>ಪಣೆಮಣಿ</p>.<p>ಪಣೆಮಣಿ(ಕ್ರಿ).(ನಮಸ್ಕಾರಾರ್ಥವಾಗಿ) <span class="media-container dcx_media_tab" data-dcx_media_config="{}" data-dcx_media_parsed="true" data-dcx_media_type="tab">→</span> ಹಣೆಯನ್ನು ಬಾಗಿಸು; ತಲೆಬಾಗು</p>.<p>(ಪಣೆ + ಮಣಿ)</p>.<p>ಯುದ್ಧದಲ್ಲಿ ರಾಮಚಂದ್ರನಿಂದ ರಾಕ್ಷಸ ರಾವಣನು ಹತನಾಗುವನು. ಆ ಸುದ್ದಿ ಕೇಳಿ ಸೀತೆಯು, ತನ್ನನ್ನು ಕರೆದೊಯ್ಯಲು ರಾಮದೂತರು ಬರುವರೆಂಬ ನಿರೀಕ್ಷೆಯಲ್ಲಿರುತ್ತಾಳೆ. ಆಗ ಅಲ್ಲಿಗೆ ಅನಲೆಯೊಡನೆ ಆಂಜನೇಯ ಮತ್ತು ವಿಭೀಷಣರು ಕೈ ಮುಗಿದು ಬರುತ್ತಾರೆ. ಮಾರುತಿಯು ವಿಭೀಷಣನಿಗೆ ‘ಪ್ರಭುವಿನ ಆಣತಿಯಂತೆ ಲೋಕ ಮಾನ್ಯೆಗೆ ಶಿರಸ್ನಾನ ಮಾಡಿಸಿ ಶೀಘ್ರದಿಂದ ಕರೆದು ತಾ’ ಎಂದು ಹೇಳುವನು.</p>.<p>ಮತ್ತೆ ಮೈಥಿಲಿಗೆ ತಲೆಬಾಗಿಸಿ ನಮಸ್ಕರಿಸುವನು. ಕವಿಯು ಆ ಭಾವಕ್ಕೆ ಸಮನಾದ ಹೊಸಪದ ‘ಪಣೆಮಣಿ’ ನೂತು ಕಾವ್ಯ ಹೆಣೆದಿದ್ದಾರೆ.</p>.<p>ಮತ್ತೆ ಮೈಥಿಲಿಗೆ</p>.<p>ಪಣೆಮಣಿದು ಕೈಮುಗಿದು <span class="media-container dcx_media_tab" data-dcx_media_config="{}" data-dcx_media_parsed="true" data-dcx_media_type="tab">→</span>ಬೀಳ್ಕೊಂಟ್ಟನಂಜನಾ</p>.<p>ನಂದನಂ ಪ್ರತಿವಂದನಂಗೆಯ್ದಳಂ, ಪೂಜ್ಯೆ</p>.<p>ರಘೂನಂದನಾನಂದೆಯಂ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>